ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (ಎನ್ಎಸ್ಸಿ) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಇವು ಅಂಚೆ ಕಚೇರಿ ನೀಡುವ ಜನಪ್ರಿಯ ಉಳಿತಾಯ ಯೋಜನೆಗಳಾಗಿವೆ. ಪಿಪಿಎಫ್ ಖಾತೆಯನ್ನು ಕೆಲವು ಬ್ಯಾಂಕುಗಳಲ್ಲೂ ತೆರೆಯಬಹುದು.
ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (ಎನ್ಎಸ್ಸಿ) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಇವು ಅಂಚೆ ಕಚೇರಿ ನೀಡುವ ಜನಪ್ರಿಯ ಉಳಿತಾಯ ಯೋಜನೆಗಳಾಗಿವೆ. ಪಿಪಿಎಫ್ ಖಾತೆಯನ್ನು ಕೆಲವು ಬ್ಯಾಂಕುಗಳಲ್ಲೂ ತೆರೆಯಬಹುದು. ಈ ಎರಡೂ ಆಯ್ಕೆಗಳನ್ನು ತೆರಿಗೆ ಉಳಿತಾಯ ಮತ್ತು ಹೂಡಿಕೆ ಉದ್ದೇಶಗಳಿಗಾಗಿ ಬಳಸಬಹುದು. ಹಣಕಾಸು ವರ್ಷದಲ್ಲಿ ಒಬ್ಬರು ಪಿಪಿಎಫ್ನಲ್ಲಿ ಹೂಡಿಕೆ ಮಾಡಬಹುದಾದ ಗರಿಷ್ಠ ಮೊತ್ತ ರೂ. 1.5 ಲಕ್ಷ. ಆರ್ಥಿಕ ವರ್ಷದಲ್ಲಿ ಒಬ್ಬರು ಪಿಪಿಎಫ್ನಲ್ಲಿ ಠೇವಣಿ ಇಡಬಹುದಾದ ಕನಿಷ್ಠ ಮೊತ್ತ ರೂ. 500, ಎನ್ಎಸ್ಸಿ ಖರೀದಿಸಬಹುದಾದ ಕನಿಷ್ಠ ಮೊತ್ತ ರೂ. 100 ಆಗಿದೆ.

ಎನ್ಎಸ್ಸಿ
ಪ್ರಸ್ತುತ ಲಭ್ಯವಿರುವ ಎನ್ಎಸ್ಸಿ VIII ಐದು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದ್ದರೆ, ಸಾರ್ವಜನಿಕ ಭವಿಷ್ಯ ನಿಧಿ 15 ವರ್ಷಗಳ ನಂತರ ಮೆಚುರಿಟಿ ಆಗುತ್ತದೆ. ಇವೆರಡೂ ತಮ್ಮ ವಿಶಿಷ್ಟ ಪ್ರಯೋಜನಗಳನ್ನು ಮತ್ತು ವೈಶಿಷ್ಟ್ಯಗಳನ್ನು ಹೊಂದಿವೆ. ಆದರೆ ಎರಡೂ ಯೋಜನೆಗಳ ಬಡ್ಡಿದರವು ಶೇಕಡಾ 7.9 ರಷ್ಟಿದ್ದು, ವಾರ್ಷಿಕವಾಗಿ ಸಂಯೋಜಿಸಲ್ಪಡುತ್ತದೆ. ಈ ಉಳಿತಾಯ ಯೋಜನೆಗಳ ಬಡ್ಡಿದರ ತ್ರೈಮಾಸಿಕದ ಆಧಾರದಲ್ಲಿ ಪರಿಷ್ಕರಿಸಲಾಗುತ್ತದೆ.
ಪಿಪಿಎಫ್ ಖಾತೆಯ ಸಂದರ್ಭದಲ್ಲಿ ಠೇವಣಿಗಳು, ಖಾತೆಯ ಅವಧಿಯಲ್ಲಿ ಗಳಿಸಿದ ಬಡ್ಡಿ ಮತ್ತು ಮುಕ್ತಾಯದ ನಂತರ ಹಿಂಪಡೆಯಲಾದ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.
ಆದಾಗ್ಯೂ, ಎನ್ಎಸ್ಸಿಯ ಸಂದರ್ಭದಲ್ಲಿ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಠೇವಣಿಗಳು ಮಾತ್ರ ತೆರಿಗೆ ರಿಯಾಯಿತಿಗೆ ಅರ್ಹವಾಗಿವೆ. ಆದರೆ ಎನ್ಎಸ್ಸಿ ಮೇಲಿನ ಅಂತಿಮ ವರ್ಷದ ಬಡ್ಡಿಯನ್ನು ಸೆಕ್ಷನ್ 80 ಸಿ ಅಡಿಯಲ್ಲಿ ಕಡಿತಗೊಳಿಸಲಾಗುವುದಿಲ್ಲ.

ಪಿಪಿಎಫ್
ಸಾರ್ವಜನಿಕ ಭವಿಷ್ಯ ನಿಧಿ ಖಾತೆದಾರರು ಯಾವುದೇ ಸ್ವತ್ತನ್ನು ಮೇಲಾಧಾರವಾಗಿ ನೀಡದೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಆದರೆ ಕೆಲವು ಷರತ್ತುಗಳೊಂದಿಗೆ:
1. ಪಿಪಿಎಫ್ ಚಂದಾದಾರರು ಸಾಲವನ್ನು ತೆಗೆದುಕೊಳ್ಳಬಹುದು. ಆರಂಭಿಕ ಚಂದಾದಾರಿಕೆಯನ್ನು ಮಾಡಿದ ವರ್ಷದ ಅಂತ್ಯದಿಂದ ಒಂದು ವರ್ಷದ ಅವಧಿ ಮುಗಿದ ನಂತರ ಆದರೆ ಆರಂಭಿಕ ಚಂದಾದಾರಿಕೆಯನ್ನು ಮಾಡಿದ ವರ್ಷದ ಅಂತ್ಯದಿಂದ ಐದು ವರ್ಷಗಳ ಅವಧಿ ಮುಗಿಯುವ ಮೊದಲು ಸಾಲ ಪಡೆಯಬಹುದು.
2. ಸಾಲದ ಮೊತ್ತವು "ಸಾಲವನ್ನು ಅರ್ಜಿ ಸಲ್ಲಿಸಿದ ವರ್ಷಕ್ಕೆ ಎರಡನೇ ವರ್ಷದ ಕೊನೆಯಲ್ಲಿ ಚಂದಾದಾರರ ಸಾಲಕ್ಕೆ ಲಭ್ಯವಿರುವ ಮೊತ್ತದ 25 ಶೇಕಡಾವನ್ನು ಮೀರಬಾರದು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications