ನಗದು ವಹಿವಾಟುಗಳನ್ನು ಕಡಿಮೆಗೊಳಿಸಲು ಮತ್ತು ತೆರಿಗೆ ಆಕರಣೆಯನ್ನು ಹೆಚ್ಚಿಸಲು, ಆದಾಯ ತೆರಿಗೆ ಇಲಾಖೆ, ಈ ತಿಂಗಳಿನಿಂದ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಿಂದ ಹಣವನ್ನು ಹಿಂಪಡೆಯಲು ಕೆಲ ಟಿಡಿಎಸ್ ನಿಯಮಗಳನ್ನು ಬದಲಾಯಿಸಿದೆ.
ಇಲ್ಲಿಯವರೆಗೆ, ನೀವು ಒಂದು ವರ್ಷದಲ್ಲಿ 1 ಕೋಟಿ ರುಪಾಯಿ ಮೀರಿದ ನಗದು ಹಿಂಪಡೆಯುವಿಕೆಯ ಮೇಲೆ 2% ರಷ್ಟು ಟಿಡಿಎಸ್ ಪಾವತಿಸಬೇಕಾಗಿತ್ತು. 1 ಜುಲೈ 2020 ರಿಂದ ಜಾರಿಗೆ ಬರುವಂತೆ, ಇದೀಗ ಇದನ್ನು ಇನ್ನಷ್ಟು ಹೆಚ್ಚಿಸಲಾಗಿದೆ.
ಒಂದು ನಿರ್ದಿಷ್ಟ ಹಣಕಾಸು ವರ್ಷದಲ್ಲಿ 20 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ನಗದು ವಹಿವಾಟುಗಳಿಗೆ, ಟಿಡಿಎಸ್ ದರವು ಕಳೆದ ಮೂರು ವರ್ಷಗಳಿಂದ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಅನ್ನು ಸಲ್ಲಿಸಿದ್ದೀರಾ ಅಥವಾ ಇಲ್ಲವೇ ಎಂಬುದರ ಮೇಲೆ ನೇರವಾಗಿ ಅವಲಂಬಿತವಾಗಿರುತಿತ್ತು. ಕಳೆದ 3 ವರ್ಷಗಳಿಂದ ಐಟಿಆರ್ ಸಲ್ಲಿಸಿದವರಿಗೆ ಟಿಡಿಎಸ್ ನಿಯಮಗಳು ಇಂತಿವೆ.
ಸೆಕ್ಷನ್ 194 ಎನ್ ಅನ್ನು ಪರಿಚಯಿಸಿತ್ತು
2019 ರ ಕೇಂದ್ರ ಬಜೆಟ್ ನಲ್ಲಿ, ಆದಾಯ ತೆರಿಗೆ ಕಾಯ್ದೆಯಲ್ಲಿ ಸರ್ಕಾರವು ಹೊಸ ಸೆಕ್ಷನ್ 194 ಎನ್ ಅನ್ನು ಪರಿಚಯಿಸಿತ್ತು, ಇದರ ಅಡಿಯಲ್ಲಿ 1 ಕೋಟಿಗಿಂತ ಹೆಚ್ಚಿನ ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಹಿಂಪಡೆಯುವ ಬಗ್ಗೆ ಟಿಡಿಎಸ್ ವಿಧಿಸಲಾಗುತ್ತದೆ. ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳು ಇದರ ವ್ಯಾಪ್ತಿಗೆ ಬರುತ್ತವೆ.
20% ಹೆಚ್ಚಿನ ಟಿಡಿಎಸ್
ಆದಾಗ್ಯೂ, ಬ್ಯಾಂಕಿನ ದಾಖಲೆಗಳಲ್ಲಿ ಯಾರ ಪ್ಯಾನ್ ನವೀಕರಿಸದಿದ್ದಲ್ಲಿ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 206 ಎಎ ಅಡಿಯಲ್ಲಿ 20% ಹೆಚ್ಚಿನ ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ.
ಕಳೆದ ಮೂರು ವರ್ಷಗಳಿಂದ ಐಟಿಆರ್ ಸಲ್ಲಿಸಿದ್ದರೆ
ನೀವು ಪ್ಯಾನ್ ಸಲ್ಲಿಸಿದ್ದರೆ ಮತ್ತು ಕಳೆದ ಮೂರು ವರ್ಷಗಳಿಂದ ಐಟಿಆರ್ ಅನ್ನು ಸಹ ಸಲ್ಲಿಸಿದ್ದರೆ, ಒಟ್ಟು 1 ಕೋಟಿ ರುಪಾಯಿಗಿಂತ ಕಡಿಮೆ ಹಣವನ್ನು ಹಿಂಪಡೆಯಲು ಯಾವುದೇ ಟಿಡಿಎಸ್ ವಿಧಿಸಲಾಗುವುದಿಲ್ಲ.
ಬ್ಯಾಂಕ್ಗೆ ವಿನಂತಿಸಬಹುದು
ಕಳೆದ ಮೂರು ವರ್ಷಗಳ ಐಟಿಆರ್-ವಿ (ಐಟಿಆರ್ ಸಲ್ಲಿಸುವ ಸ್ವೀಕೃತಿ) ಅನ್ನು ಪುರಾವೆಯಾಗಿ ಸಲ್ಲಿಸಲು ನಿಮ್ಮ ಬ್ಯಾಂಕ್ ನಿಮ್ಮನ್ನು ಕೇಳಬಹುದು. ಪರ್ಯಾಯವಾಗಿ, ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ನಲ್ಲಿ ಟಿಡಿಎಸ್ ದರವನ್ನು ನೇರವಾಗಿ ಪರಿಶೀಲಿಸಲು ನೀವು ಬ್ಯಾಂಕ್ಗೆ ವಿನಂತಿಸಬಹುದು, ಅಲ್ಲಿ ಸೆಕ್ಷನ್ 194 ಎನ್ ಅಡಿಯಲ್ಲಿ ಟಿಡಿಎಸ್ ದರವನ್ನು ನಿರ್ಧರಿಸುವ ಸಾಧನವನ್ನು ಸಕ್ರಿಯಗೊಳಿಸಲಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications