ಬೆಂಗಳೂರು ಜನವರಿ 08: ನೀವು ಕೋಟ್ಯಾಧಿಪತಿಯಾಗಲು ಬಯಸುತ್ತೀರಾ? ಕೋಟಿ ಸಂಪಾದನೆ ಹೇಗೆ ಮಾಡುವುದು ಎಂದು ನೀವು ಯೋಚಿಸುತ್ತಿದ್ದೀರಾ?.ಇದು ಸಾಧ್ಯ. ಹೇಗೆ ಎಂಬುದಕ್ಕೆ ಇಲ್ಲಿದೆ ಉತ್ತರ.
ಹೌದು ಇದೀಗ ಮೇಲ್ಮಧ್ಯಮ ವರ್ಗದವರು ಇಲ್ಲವೇ ಕೋಟಿ ಗಳಿಸುವ ಆಸೆ ಇರುವವರು ಕೋಟಿ ಗೆಲ್ಲಬಹುದು. ಅದಕ್ಕೆ ಅಂಚೆ ಕಚೇರಿಯ ಸಾರ್ವಜನಿಕ ಭವಿಷ್ಯ ನಿಧಿ (PPF) ನೆರವಾಗಲಿದೆ. ಇದು ಹಣಕಾಸಿನ ಗುರಿಗಳಲ್ಲಿ ಒಂದು ದಾರಿಯಾಗಿದೆ. ನೀವು ನಿಮ್ಮ ಮಾಸಿಕ ವೇತನದ ಒಂದು ಭಾಗವನ್ನು ಸಾರ್ವಜನಿಕ ಭವಿಷ್ಯ ನಿಧಿಗೆ ಮೀಸಲಿಡಬಹುದು.
ಈ ಅಂಚೆ ಕಚೇರಿ ಸಾರ್ವಜನಿಕ ಭವಿಷ್ಯ ನಿಧಿ ಕೋಟಿ ಗಳಿಸಲು ಉತ್ತಮ ಆಯ್ಕೆಯಾಗಿದ್ದು, ಸುರಕ್ಷಿತ ಹೂಡಿಕೆಯು ಆಗಿದೆ.

ಈ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯು ನಿಮಗೆ ವಾರ್ಷಿಕ 7.1 ಶೇಕಡಾ ಬಡ್ಡಿಯನ್ನು ನೀಡುತ್ತದೆ. ಈ ಯೋಜನೆಯು ಹೂಡಿಕೆದಾರರಿಗೆ ಸಂಯುಕ್ತ ಬಡ್ಡಿಯ ಲಾಭವನ್ನು ಒಸಗಿಸುತ್ತದೆ. ಇದರ ಮೆಚ್ಯೂರಿಟಿ ಅವಧಿಯು 15 ವರ್ಷಗಳು. ಒಪ್ಪಿಗೆ ಇದ್ದಲ್ಲಿ 15ವರ್ಷದ ನಂತರ ಇನ್ನೂ 10 ವರ್ಷಗಳವರೆಗೆ ಹೂಡಿಕೆ ವಿಸ್ತರಿಸಬಹುದು. ಮುಖ್ಯ ಈ ಯೋಜನೆಯಡಿ ಹೂಡಕೆ ಮಾಡವವರಿಗೆ ಆದಾಯ ತೆರಿಗೆ ವಿನಾಯಿತಿಗಳ ಪ್ರಯೋಜನ ಸಹ ಇದೆ.
ಕೋಟ್ಯಾಧಿಪತಿಯಾಗಲು ನೀವು ವರ್ಷಕ್ಕೆ 1.5 ಲಕ್ಷ ರೂ, ತಿಂಗಳಿಗೆ 12500 ರೂ. ದೈನಂದಿನ ಅಂಕಿ ಅಂಶಗಳಲ್ಲಿ ನೋಡುವದಾದರೆ ಪ್ರತಿದಿನಕ್ಕೆ 417 ರೂ. ಹೂಡಿಕೆ ಮಾಡಬೇಕಾಗುತ್ತದೆ. ಒಬ್ಬ ವ್ಯಕ್ತಿ ತಿಂಗಳಿಗೆ 12,500 ರೂ. ಹೂಡಿಕೆ ಮಾಡಿದರೆ 15 ವರ್ಷಗಳ ನಂತರ 22.50 ಲಕ್ಷ ರೂ. ಆಗುತ್ತದೆ. ಯೋಜನೆಯಡಿ ನಿಮಗೆ ಶೇ.7.1 ರ ದರದಲ್ಲಿ ಬಡ್ಡಿಯನ್ನು ಸೇರಿಸಿದರೆ, ಒಬ್ಬ ವ್ಯಕ್ತಿಯು 18.18 ಲಕ್ಷ ರೂಪಾಯಿಗಳ ಬಡ್ಡಿಯನ್ನು ಪಡೆಯುತ್ತಾನೆ.
ಅಂದರೆ 15 ವರ್ಷಗಳ ನಂತರ ನಿಮ್ಮ ಬಳಿ 41 ಲಕ್ಷ ರೂ. ನೀವು ಈ ಹಣವನ್ನು ಹೂಡಿಕೆ ಮಾಡಬಹುದು ಮತ್ತು ಮುಂದಿನ 10 ವರ್ಷಗಳವರೆಗೆ ವರ್ಷಕ್ಕೆ 1.5 ಲಕ್ಷ ರೂಪಾಯಿಗಳನ್ನು ಸೇರಿಸಬಹುದು. ಆಗ ನೀವು ಹೂಡಿದ ಮೊತ್ತ 66 ಲಕ್ಷ ರೂ. ನೀವು ಬಡ್ಡಿಯನ್ನು ಸೇರಿಸಿದರೆ, 25 ವರ್ಷಗಳ ಹೂಡಿಕೆಯ ನಂತರ, ನೀವು ಕೋಟ್ಯಾಧಿಪತಿಯಾಗಬಹುದು.

ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯು ನಿಮಗೆ ಖಾತರಿ ಆದಾಯವನ್ನು ನೀಡುತ್ತದೆ. ಈ ಪಿಪಿಎಫ್ ಖಾತೆಯನ್ನು ಯಾವುದೇ ಪೋಸ್ಟ್ ಆಫೀಸ್ ಶಾಖೆಯ ಮೂಲಕ ತೆರೆಯಬಹುದು. ಆದರೆ ಜಂಟಿ ಖಾತೆ ತೆರೆಯಲು ಅವಕಾಶ ಇಲ್ಲ ಎನ್ನಲಾಗಿದೆ. ಭಾರತೀಯ ನಾಗರಿಕರು ಮಾತ್ರ ಪೋಸ್ಟ್ ಆಫೀಸ್ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಅನಿವಾಸಿ ಭಾರತೀಯರು ಈ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications