ಪ್ರಸ್ತುತ ಹಲವಾರು ಮಂದಿ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ನಿವೃತ್ತಿ ಹಣ ಪಡೆಯಲು, ಹಲವಾರು ಯೋಜನೆಗಳ ಹಣವನ್ನು ಪಡೆಯಬೇಕಾದರೆ ಬ್ಯಾಂಕ್ ಖಾತೆ ಇರುವುದು ಮುಖ್ಯವಾಗಿದೆ. ಪ್ರಸ್ತುತ ಶಾಲೆಗಳಲ್ಲಿ ಇರುವಾಗಲೇ ಜಿರೋ ಬ್ಯಾಲೆನ್ಸ್ ಖಾತೆಯನ್ನು ತೆರೆಯಲಾಗುತ್ತದೆ. ಎಲ್ಲ ಗ್ರಾಹಕರಿಗೂ ಬ್ಯಾಂಕುಗಳು ಸೇವಾ ಶುಲ್ಕವನ್ನು ವಿಧಿಸುತ್ತದೆ. ಆದರೆ ಈ ಶುಲ್ಕವನ್ನು ಬಹುತೇಕ ಪ್ರಮುಖ ಬ್ಯಾಂಕುಗಳು ಏರಿಕೆ ಮಾಡಿದೆ.
ಹೌದು, ಎಸ್ಬಿಐ ಸೇರಿದಂತೆ ಹಲವಾರು ಬ್ಯಾಂಕುಗಳು ಗ್ರಾಹಕರಿಗೆ ನೀಡುವ ಸೇವಾ ಶುಲ್ಕವನ್ನು ಏರಿಕೆ ಮಾಡಿದೆ. ಎಟಿಎಂ ವಿತ್ಡ್ರಾ ಶುಲ್ಕವನ್ನು ಹೆಚ್ಚಳ ಮಾಡಿದೆ. ಉಚಿತ ವಿತ್ಡ್ರಾ ಮಿತಿಯನ್ನು ಮೀರಿದ ಬಳಿಕ ಮಾತ್ರವೇ ಶುಲ್ಕ ವಿಧಿಸಲಾಗುತ್ತದೆ.
ಇತ್ತೀಚೆಗೆ ಹಲವಾರು ಬ್ಯಾಂಕುಗಳು ಎಟಿಎಂ ವಿತ್ಡ್ರಾ ಶುಲ್ಕವನ್ನು ಹೆಚ್ಚಳ ಮಾಡಿದೆ. ಪ್ರಸ್ತುತ ಪ್ರತಿ ತಿಂಗಳು ಉಚಿತ ಎಟಿಎಂ ವಿತ್ಡ್ರಾ ಮಿತಿ ಮೀರಿದ ಬಳಿಕ ಗ್ರಾಹಕರಿಗೆ ಪ್ರತಿ ಎಟಿಎಂ ವಹಿವಾಟಿಗೆ ಈ ಹಿಂದಿಗಿಂತ ಅಧಿಕ ಶುಲ್ಕವನ್ನು ವಿಧಿಸಲಾಗುತ್ತದೆ. ಖಾತೆಯನ್ನು ಆಧರಿಸಿ ಈ ಶುಲ್ಕವನ್ನು ವಿಧಿಸಲಾಗುತ್ತದೆ. ಹಾಗಾದರೆ ಯಾವ ಬ್ಯಾಂಕ್ನಲ್ಲಿ ಎಷ್ಟು ಶುಲ್ಕವಿದೆ ಎಂದು ತಿಳಿಯೋಣ ಮುಂದೆ ಓದಿ...
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ)
ತನ್ನ ಎಟಿಎಂ ಸೇವೆಗೆ ಮಾಸಿಕವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪ್ರತಿ ಪ್ರದೇಶದಲ್ಲಿ ಐದು ಉಚಿತ ವಿತ್ಡ್ರಾ ಅವಕಾಶವನ್ನು ನೀಡುತ್ತದೆ. ಮುಂಬೈ, ನವದೆಹಲಿ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್ನಂತಹ ಪ್ರಮುಖ ನಗರಗಳಲ್ಲಿನ ಇತರ ಬ್ಯಾಂಕ್ ಎಟಿಎಂಗಳಲ್ಲಿ, ವಿತ್ಡ್ರಾ ಮಾಡುವುದಾದರೆ ಮೂರು ಬಾರಿ ಮಾತ್ರ ವಿತ್ಡ್ರಾ ಮಾಡಲು ಅವಕಾಶವಿದೆ. ಉಚಿತ ಮಿತಿಯನ್ನು ಮೀರಿದ ಬಳಿಕ ಎಸ್ಬಿಐ ತನ್ನ ಎಟಿಎಂನಿಂದಲೇ ಹಣ ವಿತ್ಡ್ರಾ ಮಾಡಲು ಹತ್ತು ರೂಪಾಯಿ ಹಾಗೂ ಬೇರೆ ಬ್ಯಾಂಕ್ನಲ್ಲಿ ಹಣ ವಿತ್ಡ್ರಾ ಮಾಡಲು 20 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಇನ್ನು ಹಣಕಾಸೇತರ ವಹಿವಾಟಿಗೆ ಎಸ್ಬಿಐ ಎಟಿಎಂಗಳಲ್ಲಿ 5 ರೂಪಾಯಿ ಹಾಗೂ ಇತರ ಬ್ಯಾಂಕ್ ಎಟಿಎಂಗಳಲ್ಲಿ 8 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.
ಎಚ್ಡಿಎಫ್ಸಿ ಬ್ಯಾಂಕ್
ಪ್ರತಿ ತಿಂಗಳು ಎಚ್ಡಿಎಫ್ಸಿ ಬ್ಯಾಂಕ್ ಗ್ರಾಹಕರು ತಮ್ಮ ಬ್ಯಾಂಕ್ನ ಎಟಿಎಂನಿಂದ ಐದು ಬಾರಿ ಉಚಿತವಾಗಿ ವಿತ್ಡ್ರಾ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಇನ್ನು ನಗರ ಪ್ರದೇಶದಲ್ಲಿ 3 ಹಾಗೂ ಮೆಟ್ರೋಯೇತರ ಪ್ರದೇಶದಲ್ಲಿ ಐದು ಬಾರಿ ಉಚಿತ ಎಟಿಎಂ ವಹಿವಾಟು ನಡೆಸಬಹುದು. ಅದಾದ ಬಳಿಕ ಎಟಿಎಂನಲ್ಲಿ ನಡೆಸುವ ಹಣಕಾಸು ವಹಿವಾಟಿಗೆ 21 ರೂಪಾಯಿ ಪ್ಲಸ್ ತೆರಿಗೆ ವಿಧಿಸಲಾಗುತ್ತದೆ. ಹಣಕಾಸೇತರ ವಹಿವಾಟಿಗೆ 8.50 ರೂಪಾಯಿ ಹಾಗೂ ತೆರಿಗೆಯನ್ನು ವಿಧಿಸಲಾಗುತ್ತದೆ.
ಐಸಿಐಸಿಐ ಬ್ಯಾಂಕ್
ಆರು ಮೆಟ್ರೋ ಪ್ರದೇಶಗಳಲ್ಲಿ, ಐಸಿಐಸಿಐ ಬ್ಯಾಂಕ್ 5 ಮತ್ತು 3 ಉಚಿತ ವಿತ್ಡ್ರಾ ಮಿತಿಯನ್ನು ಹೊಂದಿದೆ. ಐಸಿಐಸಿಐ ಬ್ಯಾಂಕ್ನ ಎಟಿಎಂನಿಂದಲೇ ಮಾಸಿಕವಾಗಿ ಐದು ಬಾರಿ ಉಚಿತವಾಗಿ ವಿತ್ಡ್ರಾ ಮಾಡಲು ಅವಕಾಶವಿದೆ. ಆದರೆ ಇತರೆ ಬ್ಯಾಂಕ್ಗಳಲ್ಲಿ ಮಾಸಿಕವಾಗಿ ಮೂರು ಬಾರಿ ಮಾತ್ರ ವಿತ್ಡ್ರಾ ಮಾಡುವ ಅವಕಾಶವಿದೆ. ಉಚಿತ ಮಿತಿ ಮುಗಿದ ಬಳಿಕ ಬ್ಯಾಂಕ್ ಪ್ರತಿ ಹಣಕಾಸು ವಹಿವಾಟಿಗೆ 20 ರೂಪಾಯಿ ಶುಲ್ಕವನ್ನು ವಿಧಿಸುತ್ತದೆ. ಪ್ರತಿ ಹಣಕಾಸೇತರ ವಹಿವಾಟಿಗೆ ಬ್ಯಾಂಕ್ 8.50 ರೂಪಾಯಿ ಶುಲ್ಕವನ್ನು ವಿಧಿಸುತ್ತದೆ. ಈ ಶುಲ್ಕಗಳು ಐಸಿಐಸಿಐ ಬ್ಯಾಂಕ್ ಎಟಿಎಂಗಳು ಮತ್ತು ಇತರ ಬ್ಯಾಂಕ್ಗಳ ಎಟಿಎಂನಲ್ಲಿ ಮಾಡುವ ವಿತ್ಡ್ರಾ ಎರಡಕ್ಕೂ ಅನ್ವಯವಾಗುತ್ತದೆ.
ಆಕ್ಸಿಸ್ ಬ್ಯಾಂಕ್
ಆಕ್ಸಿಸ್ ಬ್ಯಾಂಕ್ನಲ್ಲಿ ತನ್ನದೇ ಆದ ಎಟಿಎಂನಲ್ಲಿ ವಿತ್ಡ್ರಾ ಮಾಡುವುದಾದರೆ ಮಾಸಿಕವಾಗಿ ಐದು ಬಾರಿ ಉಚಿತ ವಹಿವಾಟು ಮಿತಿ ಇದೆ. ಆದರೆ ಬೇರೆ ಬ್ಯಾಂಕ್ನ ಎಟಿಎಂನಿಂದ ಮಾಸಿಕವಾಗಿ ಮೂರು ಬಾರಿ ಮಾತ್ರ ವಿತ್ಡ್ರಾ ಮಾಡಲು ಅವಕಾಶವಿದೆ. ಈ ಉಚಿತ ವಹಿವಾಟು ಮುಗಿದ ಬಳಿಕ, ಆಕ್ಸಿಸ್ ಬ್ಯಾಂಕ್ನ ಅಥವಾ ಬೇರೆ ಯಾವುದೇ ಎಟಿಎಂಗಳಲ್ಲಿ ನಡೆಸುವ ವಹಿವಾಟಿಗೆ 21 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ. ಹಣಕಾಸೇತರ ವಹಿವಾಟಿಗೆ 10 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ)
ಪಂಜಾಬ್ ನ್ಯಾಷನಲ್ ಬ್ಯಾಂಕ್ ಬೇರೆ ಬ್ಯಾಂಕ್ನಲ್ಲಿ ಮಾಸಿಕವಾಗಿ ಮೂರು ಬಾರಿ ಉಚಿತ ಎಟಿಎಂ ವಿತ್ಡ್ರಾ ಅವಕಾಶವನ್ನು ನೀಡುತ್ತದೆ. ಹಾಗೆಯೇ ತನ್ನದೇ ಎಟಿಎಂನಲ್ಲಿ ಐದು ಬಾರಿ ಉಚಿತವಾಗಿ ವಹಿವಾಟು ನಡೆಸುವ ಅವಕಾಶವನ್ನು ನೀಡುತ್ತದೆ. ಇದು ಮೆಟ್ರೋ ನಗರಗಳಿಗೆ ಅನ್ವಯವಾಗುತ್ತದೆ. ಈ ಉಚಿತ ವಹಿವಾಟಿನ ಮಿತಿಯ ಬಳಿಕ ತನ್ನದೇ ಬ್ಯಾಂಕ್ನ ಎಟಿಎಂಗಳಲ್ಲಿ ನಡೆಸುವ ಎಲ್ಲ ವಹಿವಾಟಿಗೆ ಬ್ಯಾಂಕ್ 10 ರೂಪಾಯಿ ಶುಲ್ಕವನ್ನು ವಿಧಿಸುತ್ತದೆ. ಬೇರೆ ಬ್ಯಾಂಕ್ಗಳಲ್ಲಿ ನಡೆಸುವ ಹಣಕಾಸು ವಹಿವಾಟಿಗೆ ಪಿಎನ್ಬಿ 20 ರೂಪಾಯಿ ಶುಲ್ಕವನ್ನು ವಿಧಿಸುತ್ತದೆ. ಹಣಕಾಸೇತರ ವಹಿವಾಟಿಗೆ 9 ರೂಪಾಯಿ ಶುಲ್ಕವನ್ನು ಬ್ಯಾಂಕ್ ವಿಧಿಸುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications