ಕೇಂದ್ರ ಸರ್ಕಾರವು 500 ರೂಪಾಯಿ ಹಾಗೂ 1 ಸಾವಿರ ರೂಪಾಯಿಯ ನೋಟನ್ನು ಅಪನಗದೀಕರಣ ಮಾಡಿ ಆರು ವರ್ಷಗಳು ಆಗಿದೆ. 2016ರ ನವೆಂಬರ್ 8ರಂದು ಸರ್ಕಾರವು ನೋಟು ಅಪನಗದೀಕರಣ ಮಾಡಿದೆ. ಆದರೆ ಪ್ರಸ್ತುತ ಜನರಲ್ಲಿ ಇರುವ ನಗದು ಪ್ರಮಾಣ ಮಾತ್ರ ಸಾರ್ವಕಾಲಿಕವಾಗಿ ಏರಿಕೆಯಾಗಿದೆ.
ಅಕ್ಟೋಬರ್ 21, 2022ರವರೆಗಿನ ಲೆಕ್ಕಾಚಾರದ ಪ್ರಕಾರ ಜನರ ಕೈಯಲ್ಲಿರುವ ನಗದು ಸಾರ್ವಕಾಲಿಕ ಏರಿಕೆಯಾಗಿದ್ದು, ಪ್ರಸ್ತುತ 30.88 ಲಕ್ಷ ಕೋಟಿ ರೂಪಾಯಿ ನಗದು ಇದೆ. ನವೆಂಬರ್ 4, 2016ರಲ್ಲಿ ಜನರ ಕೈಯಲ್ಲಿರುವ ನಗದು ಪ್ರಮಾಣ 17.97 ಲಕ್ಷ ಕೋಟಿ ರೂಪಾಯಿ ಆಗಿತ್ತು. ಆದರೆ 2022ರಲ್ಲಿ ಈ ನಗದು ಪ್ರಮಾಣ 2016ಕ್ಕೆ ಹೋಲಿಕೆ ಮಾಡಿದಾಗ ಸುಮಾರು ಶೇಕಡ 72ರಷ್ಟು ಅಥವಾ 12.91 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇನ್ನು ಕೇಂದ್ರ ಸರ್ಕಾರವು 2016ರ ನವೆಂಬರ್ 8ರಂದು 500 ರೂಪಾಯಿ ಹಾಗೂ 1 ಸಾವಿರ ರೂಪಾಯಿ ನೋಟನ್ನು ಅಪನಗದೀಕರಣ ಮಾಡಿದ ಬಳಿಕ, 2016ರ ನವೆಂಬರ್ 25ರಲ್ಲಿ ಜನರ ಬಳಿ ಸುಮಾರು 9.11 ಲಕ್ಷ ಕೋಟಿ ರೂಪಾಯಿ ಇತ್ತು. ಆ ಮೌಲ್ಯದಿಂದ ಪ್ರಸ್ತುತ ಜನರ ಕೈಯಲ್ಲಿರುವ ಇರುವ ನಗದು ಪ್ರಮಾಣವು ಸುಮಾರು ಶೇಕಡ 239ರಷ್ಟು ಏರಿಕೆಯಾಗಿದೆ. ಈ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ ಮುಂದೆ ಓದಿ...
2017ರಲ್ಲಿ ಭಾರೀ ಇಳಿಕೆಯಾಗಿದ್ದ Cash with public
ಆರ್ಬಿಐನ ಮಾಹಿತಿ ಪ್ರಕಾರ 2020ರ ಅಕ್ಟೋಬರ್ 21ರವರೆಗೆ ಜನರ ಕೈಯಲ್ಲಿ ಇರುವ ನಗದು ಪ್ರಮಾಣವು 25,585 ಕೋಟಿ ರೂಪಾಯಿ ಹೆಚ್ಚಳವಾಗಿತ್ತು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಏರಿಕೆ ಕಂಡುಬಂದಿತ್ತು. ವರ್ಷದಿಂದ ವರ್ಷಕ್ಕೆ ಶೇಕಡ 9.3ರಷ್ಟು ಅಥವಾ 2.63 ಕೋಟಿ ರೂಪಾಯಿಯಷ್ಟು ಏರಿಕೆಯಾಗಿತ್ತು. ಇನ್ನು ಕೇಂದ್ರ ಸರ್ಕಾರವು ನೋಟಿನ ಅಪನಗದೀಕರಣ ಮಾಡುವ ಮುನ್ನ 2016ರ ನವೆಂಬರ್ 4ರ ವೇಳೆಗೆ ಜನರ ಬಳಿ ಇರುವ ನಗದು ಪ್ರಮಾಣ 17.97 ಲಕ್ಷ ಕೋಟಿ ರೂಪಾಯಿ ಆಗಿತ್ತು. ಆದರೆ ಅಪನಗದೀಕರಣ ಮಾಡಿದ ಬಳಿಕ 2017ಕ್ಕೆ ಜನರ ಬಳಿಕ ಇರುವ ನಗದು ಪ್ರಮಾಣವು 7.8 ಲಕ್ಷ ಕೋಟಿ ರೂಪಾಯಿಗೆ ಇಳಿಕೆಯಾಗಿತ್ತು.
ಆನ್ಲೈನ್ ವಹಿವಾಟಿಗೆ ಒತ್ತು
ಒಟ್ಟು ಚಲಾವಣೆಯಲ್ಲಿರುವ ನಗದಿನಿಂದ ಬ್ಯಾಂಕ್ನಲ್ಲಿರುವ ನಗದನ್ನು ಕಳೆದು ಉಳಿಯುವ ನಗದು ಪ್ರಮಾಣವೇ ಜನರ ಕೈಯಲ್ಲಿರುವ ನಗದು ಎಂದು ಗುರುತಿಸಲಾಗುತ್ತದೆ. ಒಟ್ಟು ಚಲಾವಣೆಯಲ್ಲಿರುವ ನಗದು ಎಂದರೆ ಗ್ರಾಹಕರು ಹಾಗೂ ವ್ಯಾಪಾರಿಗಳ ನಡುವೆ ವ್ಯವಹಾರಕ್ಕೆ ಚಾಲ್ತಿಯಲ್ಲಿರುವ ನಗದು ಪ್ರಮಾಣವಾಗಿದೆ. ಒಟ್ಟು ನಗದು ಪ್ರಮಾಣವು ಹೆಚ್ಚಳವಾಗುತ್ತಿದೆ. ಈ ನಡುವೆ ಸರ್ಕಾರ ಹಾಗೂ ಆರ್ಬಿಐ ನಗದುರಹಿತ ವ್ಯಾಪಾರಕ್ಕಾಗಿ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಹಲವಾರು ನಿರ್ಬಂಧಗಳನ್ನು ಕೂಡಾ ಜಾರಿ ಮಾಡಿದೆ. ಇನ್ನು 2020ರಲ್ಲಿ ಕೋವಿಡ್ ಕಾರಣದಿಂದಾಗಿ ಲಾಕ್ಡೌನ್ ಮಾಡಿದ ಬಳಿಕ ಆನ್ಲೈನ್ ವಹಿವಾಟು ಅಧಿಕವಾಗಿದೆ. ಆದರೆ ಜನರು ತಮ್ಮ ದಿನಸಿ ಮೊದಲಾದ ಅಗತ್ಯಕ್ಕೆ ಬೇಕಾಗಿ ಅಧಿಕ ಹಣವನ್ನು ವಿತ್ಡ್ರಾ ಮಾಡಿಕೊಂಡು ಇಡಲು ಆರಂಭಿಸಿದರು.
ನೋಟು ಬ್ಯಾನ್ನಿಂದ ಜಿಡಿಪಿ ಕುಸಿತ
2016ರಲ್ಲಿ ದಿಡೀರ್ ಆಗಿ ಸರ್ಕಾರ ನೋಟು ಅಪನಗದೀಕರಣ ಮಾಡಿದ್ದು ಭಾರತದ ಆರ್ಥಿಕ ಪರಿಸ್ಥಿತಿಯ ಮೇಲೆ ಭಾರೀ ಪ್ರಭಾವ ಉಂಟು ಮಾಡಿದೆ. ಜಿಡಿಪಿ ತೀವ್ರ ಕುಸಿತ ಕಂಡಿದೆ. ಸುಮಾರು ಶೇಕಡ 1.5ಕ್ಕೆ ಇಳಿಕೆಯಾಗಿದೆ. ನೋಟು ಬ್ಯಾನ್ನಿಂದಾಗಿ ಹಲವಾರು ಸಣ್ಣ ಉದ್ಯಮಗಳು ನಷ್ಟದಿಂದಾಗಿ ಮುಚ್ಚಿ ಹೋಗಿದೆ. ಹಾಗೆಯೇ ಹಣದ ಅಭಾವ ಕೂಡಾ ಉಂಟು ಮಾಡಿತ್ತು. ಜನರು ದಿನಕ್ಕೆ ಇಷ್ಟೇ ಪ್ರಮಾಣದ ಹಣವನ್ನು ವಿತ್ಡ್ರಾ ಮಾಡಬೇಕು ಎಂಬ ತಾತ್ಕಾಲಿಕ ನಿಯಮವನ್ನು ಕೂಡಾ ಹೇರಲಾಗಿತ್ತು. ಸುಮಾರು ಹಣಕಾಸು ವರ್ಷ 2020ರವರೆಗೆ ಜಿಡಿಪಿ ಅನುಪಾತಕ್ಕೆ ಚಲಾವಣೆಯಲ್ಲಿರುವ ನಗದು ಶೇಕಡಾ 10-12 ರಷ್ಟಿತ್ತು. ಭಾರತದಲ್ಲಿ 2017-18 ರಲ್ಲಿ ಜಿಡಿಪಿ ಶೇಕಡ 10.7 ರಷ್ಟು ಇದ್ದರೆ, 2020-21 ರಲ್ಲಿ ಜಿಡಿಪಿ 14.4ಕ್ಕೆ ಏರಿಕೆಯಾಗಿದೆ. ಆದರೆ ಕೋವಿಡ್ ಸಾಂಕ್ರಾಮಿಕ ಬಳಿಕ ಮತ್ತೆ ಏರಿಳಿತವಾಗಿದೆ. ಈಗ ಡಿಜಿಟಲ್ ವಹಿವಾಟು ಹೆಚ್ಚಾಗಿದ್ದರೂ ಕೂಡಾ ಜನರ ಕೈಯಲ್ಲಿರುವ ಹಣದ ಪ್ರಮಾಣ ಅಧಿಕವಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications