ಇಎಸ್ ಐಸಿ ಅಡಿಯಲ್ಲಿ ಅಟಲ್ ಬಿಮಿತ್ ಕಲ್ಯಾಣ್ ಯೋಜನಾ (ABVKY)ಗೆ ಕ್ಲೇಮ್ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ ಎಂದು ಸರ್ಕಾರ ಭಾನುವಾರ ತಿಳಿಸಲಾಗಿದೆ. ಇನ್ನು ಮುಂದೆ ಕ್ಲೇಮ್ ಗೆ ಅಫಿಡವಿಟ್ ಅರ್ಜಿಯ ಅಗತ್ಯ ಇರುವುದಿಲ್ಲ ಎಂದು ಮಾಹಿತಿಯನ್ನು ನೀಡಲಾಗಿದೆ.
ಅಟಲ್ ಬಿಮಿತ್ ಕಲ್ಯಾಣ್ ಯೋಜನಾವನ್ನು 1 ಜುಲೈ 2020ರಿಂದ ಜೂನ್ 30ರ 2021ರ ತನಕ ಈ ಯೋಜನೆ ವಿಸ್ತರಣೆ ಮಾಡುವ ಬಗ್ಗೆ ಇಎಸ್ ಐ ಕಾರ್ಪೊರೇಷನ್ ಕಳೆದ ಆಗಸ್ಟ್ ನಲ್ಲಿ ನಿರ್ಧರಿಸಿತ್ತು. ಇದರ ಜತೆಗೆ ಪರಿಹಾರವನ್ನು ಕೂಡ ಸರಾಸರಿ ಇಪ್ಪತ್ತೈದು ಪರ್ಸೆಂಟ್ ದಿನದ ಗಳಿಕೆಯಿಂದ ಐವತ್ತು ಪರ್ಸೆಂಟ್ ಗೆ ಹೆಚ್ಚಿಸಲು ನಿರ್ಧರಿಸಲಾಗಿತ್ತು. ಅರ್ಹತೆಯ ಮಾನದಂಡವನ್ನು 24.3.2020ರಿಂದ 31.12.2020ರ ಮಧ್ಯೆ ವಿನಾಯಿತಿ ನೀಡಿತ್ತು.
ಯಾವ ಕಾರ್ಮಿಕರು ಕೊರೊನಾ ಬಿಕ್ಕಟ್ಟಿನಿಂದ ಉದ್ಯೋಗ ಕಳೆದುಕೊಂಡಿರುತ್ತಾರೋ ಅಂಥವರಿಗೆ ಪರಿಹಾರ ದೊರಕಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ಈ ಹೇಳಿಕೆ ನೀಡಲಾಗಿತ್ತು.

ಆದರೆ, ಈ ಸ್ಕೀಮ್ ಅಡಿಯಲ್ಲಿ ಕ್ಲೇಮ್ ಮಾಡಲು ಅಫಿಡವಿಟ್ ಅರ್ಜಿ ಸಲ್ಲಿಸಬೇಕಿತ್ತು. ಇದು ಕೆಲವರಿಗೆ ಸಮಸ್ಯೆಯಾಗಿತ್ತು ಎಂಬುದು ಫಲಾನುಭವಿಗಳ ಪ್ರತಿಕ್ರಿಯೆ ಮೂಲಕ ಗಮನಕ್ಕೆ ಬಂದಿತ್ತು. "ಫಲಾನುಭವಿಗಳು ಎದುರಿಸುವ ಕಷ್ಟಗಳನ್ನು ಗಮನದಲ್ಲಿ ಇಟ್ಟುಕೊಂಡು, ಅಟಲ್ ಬಿಮಿತ್ ಕಲ್ಯಾಣ್ ಯೋಜನಾ ಅಡಿಯಲ್ಲಿ ಸ್ಕ್ಯಾನ್ ಮಾಡಿರುವ ಪ್ರತಿಗಳಾದ ಆಧಾರ್, ಬ್ಯಾಂಕ್ ಮಾಹಿತಿ ಇತರ ದಾಖಲೆಗಳನ್ನು ಫಿಸಿಕಲ್ ಕ್ಲೇಮ್ ಮಾಡುವ ಅಗತ್ಯ ಇಲ್ಲ," ಎಂದು ಸಚಿವಾಲಯ ಹೇಳಿದೆ.
ಆನ್ ಲೈನ್ ಕ್ಲೇಮ್ ಫೈಲಿಂಗ್ ಮಾಡುವ ವೇಳೆ ದಾಖಲಾತಿಗಳನ್ನು ಅಪ್ ಲೋಡ್ ಮಾಡದಿದ್ದಲ್ಲಿ ಕ್ಲೇಮೆಂಟ್ ಪ್ರಿಂಟ್ ಔಟ್ ಸಹಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು. ಅಫಿಡವಿಟ್ ಫಾರ್ಮ್ ನಲ್ಲಿ ಕ್ಲೇಮ್ ಸಲ್ಲಿಸುವ ಅಗತ್ಯವನ್ನು ಕೈ ಬಿಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications