ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ರ ಸಾಲಿನ ಕೇಂದ್ರ ಬಜೆಟ್ ಫೆಬ್ರವರಿ 1, 2023ರಂದು ಮಂಡನೆ ಮಾಡಲಿದ್ದಾರೆ. ಮುಂದಿನ ವರ್ಷ ಅಂದರೆ 2024ರಲ್ಲಿ ಲೋಕಸಭೆ ಚುನಾವಣೆ ಬರಲಿರುವ ಕಾರಣ ಈ ಬಜೆಟ್ ಕೇಂದ್ರ ಸರ್ಕಾರದ ಈ ಆಡಳಿತಾವಧಿಯ ಕೊನೆಯ ಬಜೆಟ್ ಆಗಿದೆ. ಚುನಾವಣೆಗೂ ಮುನ್ನ ಬರುವ ಬಜೆಟ್ ಆದ್ದರಿಂದ ನಿರೀಕ್ಷೆಗಳು ಹೆಚ್ಚೇ ಇದೆ.
ಈಗಾಗಲೇ ಹಲವಾರು ವಲಯಗಳು ಬಜೆಟ್ನ ಮೇಲೆ ತಮ್ಮ ವಲಯದ ನಿರೀಕ್ಷೆಗಳೇನಿದೆ, ಯಾವೆಲ್ಲ ಬೇಡಿಕೆಗಳು ಇದೆ ಎಂದು ತಿಳಿಸಿದೆ. ಪ್ರಮುಖವಾಗಿ ಎಲ್ಲ ವಲಯಕ್ಕೂ ತೆರಿಗೆ ಸ್ಲ್ಯಾಬ್ ಮೇಲೆ ಕಣ್ಣಿದೆ. ಹಿರಿಯ ನಾಗರಿಕರು, ಗೃಹ ಖರೀದಿದಾರರು, ರಿಯಲ್ ಇಂಡಸ್ಟ್ರಿ ತೆರಿಗೆ ಸ್ಲ್ಯಾಬ್ನ ಪರಿಷ್ಕರಣೆಗಾಗಿ ಕಾಯುತ್ತಿದೆ. ಈ ನಡುವೆ ಟಿವಿ ಇಂಡಸ್ಟ್ರಿ ಕೂಡಾ ತೆರಿಗೆ ಸಂಬಂಧಿತ ಬೇಡಿಕೆ ಸೇರಿ ಹಲವಾರು ಬೇಡಿಕೆ, ನಿರೀಕ್ಷೆಯನ್ನುಈ ಬಾರಿಯ ಕೇಂದ್ರ ಬಜೆಟ್ನ ಮೇಲೆ ಹೊಂದಿದೆ.
ಕೋವಿಡ್ ಸಾಂಕ್ರಾಮಿಕ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟಿನಿಂದಾಗಿ ತತ್ತಿರಿಸಿ ಹೋಗಿರುವ ಟೆಲಿವಿಜನ್ ಇಂಡಸ್ಟ್ರಿ ಅಥವಾ ಟಿವಿ ಇಂಡಸ್ಟ್ರಿಯಲ್ಲಿ ಟಿವಿ ಉತ್ಪಾದಕರು ತಮಗೆ ಸರ್ಕಾರವು ಈ ಬಾರಿಯ ಬಜೆಟ್ನಲ್ಲಿ ಸಿಹಿಸುದ್ದಿಯನ್ನು ನೀಡಲಿದೆ ಎಂಬ ನಿರೀಕ್ಷೆ ಹೊಂದಿದ್ದಾರೆ. ತೆರಿಗೆ ಸ್ಲ್ಯಾಬ್ ಕಡಿತ, ಭತ್ಯೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಹೊಂದಿದ್ದಾರೆ. ಈ ಇಂಡಸ್ಟ್ರಿಯ ಬೇಡಿಕೆಯ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
ತೆರಿಗೆ ಸ್ಲ್ಯಾಬ್ ಪರಿಷ್ಕರಣೆ
ಕಳೆದ ವರ್ಷದಲ್ಲಿ ಆರ್ಥಿಕ ಸ್ಥಿತಿ ಹಾಗೂ ಮಧ್ಯಮ ವರ್ಗದಲ್ಲಿನ ಗ್ರಾಹಕರ ಪ್ರಮಾಣ ಕಡಿಮೆಯಾದ ಕಾರಣದಿಂದಾಗಿ ಟಿವಿ ಇಂಡಸ್ಟ್ರಿ ಮೇಲೆ ಭಾರೀ ಪ್ರಭಾವ ಉಂಟಾಗಿದೆ. ಇಂಡಸ್ಟ್ರಿಯಲ್ಲಿ ಯಾವುದೇ ಬೆಳವಣಿಗೆಯು ಕಂಡುಬಂದಿಲ್ಲ. ಪ್ರಮುಖವಾಗಿ ಜಿಎಸ್ಟಿ ಕೂಡಾ ಹೆಚ್ಚಾಗಿರುವುದು ಈ ಉದ್ಯಮಕ್ಕೆ ಏಟು ನೀಡಿದೆ. ಆದ್ದರಿಂದಾಗಿ ಈ ಕೇಂದ್ರ ಬಜೆಟ್ನಲ್ಲಿ ಜಿಎಸ್ಟಿಯನ್ನು ಪರಿಷ್ಕರಿಸುವ ನಿರೀಕ್ಷೆಯನ್ನು ಉದ್ಯಮವು ಹೊಂದಿದೆ. ಕಳೆದ ವರ್ಷದಂತೆಯೇ ಟಿವಿ ಮೇಲಿನ ಜಿಎಸ್ಟಿ ಸ್ಲ್ಯಾಬ್ ಕಡಿಮೆ ಮಾಡಬೇಕು ಎಂಬುವುದು ಇಂಡಸ್ಟ್ರಿಯ ಬೇಡಿಕೆಯಾಗಿದೆ. ಇದರಿಂದಾಗಿ ಟಿವಿ ಜನರ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ, ಮಾರಾಟ ಪ್ರಮಾಣ ಹೆಚ್ಚಾಗಿ ಉದ್ಯಮಕ್ಕೆ ಸಹಾಯವಾಗಲಿದೆ ಎಂಬ ಅಭಿಪ್ರಾಯವಿದೆ.
ಪ್ರಸ್ತುತ ಜಿಎಸ್ಟಿ ಸ್ಲ್ಯಾಬ್ ಹೇಗಿದೆ?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಡಿಯೋಕೆಕ್ಸ್ ಇಂಟರ್ನ್ಯಾಷನಲ್ನ ಡೈರೆಕ್ಟರ್, ಅರ್ಜುನ್ ಬಜಾಜ್, "ಟಿವಿ ಇಂಡಸ್ಟ್ರಿಗೆ ಜಿಎಸ್ಟಿ ಸ್ಲ್ಯಾಬ್ ದೊಡ್ಡ ಸಮಸ್ಯೆಯಾಗಿದೆ. ಹಲವಾರು ವರ್ಷಗಳಿಂದ ಸ್ಲ್ಯಾಬ್ ಪರಿಷ್ಕರಣೆಗೆ ಉದ್ಯಮ ಕಾಯುತ್ತಿದೆ. ಪ್ರಸ್ತುತ 32 ಇಂಚಿನವರೆಗಿನ ಟಿವಿಗೆ ಶೇಕಡ 18ರಷ್ಟು ಜಿಎಸ್ಟಿ ಇದೆ. ಹಾಗೆಯೇ 32 ಇಂಚಿಗಿಂತ ಅಧಿಕ ಗಾತ್ರದ ಟಿವಿಗೆ ಶೇಕಡ 28ರಷ್ಟು ಜಿಎಸ್ಟಿ ಇದೆ. ಈ ಸ್ಲ್ಯಾಬ್ ಅನ್ನು ಇಳಿಸುವುದರಿಂದ ಜನರಲ್ಲಿ ಕೊಂಡುಕೊಳ್ಳುವಿಕೆ ಶಕ್ತಿ ಹೆಚ್ಚಾಗಲಿದೆ. ಅಂದರೆ ಬೆಲೆ ಕಡಿಮೆಯಾದಂತೆ ಜನರು ಆ ವಸ್ತು ಖರೀದಿಸಲು ಮುಂದೆ ಬರುತ್ತದೆ. ಇದು ಟಿವಿ ಉದ್ಯಮದ ಮಾರುಕಟ್ಟೆಗೆ ಸಹಾಯವಾಗಲಿದೆ," ಎಂದು ತಿಳಿಸಿದ್ದಾರೆ. "ಸರ್ಕಾರವು ಆಮದಿನ ಮೇಲಿನ ಶೇಕಡ 5ರಷ್ಟು ಸುಂಕ ವಿಧಿಸುವ ನಿರ್ಧಾರವನ್ನು ಹಿಂಪಡೆಯಬೇಕು," ಎಂದು ತಜ್ಞರು ಹೇಳಿದ್ದಾರೆ.
ಟಿವಿ ಇಂಡಸ್ಟ್ರಿಗೆ ಭತ್ಯೆ ಆಕಾಂಕ್ಷೆ
ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರವು ಮೊಬೈಲ್ ಫೋನ್, ಐಟಿ ಹಾರ್ಡ್ವೇರ್, ಏರ್ ಕಂಡಿಷನಲ್ (ಎಸಿ) ಉದ್ಯಮವನ್ನು ಬೆಳೆಸಲು ಉತ್ಪಾದನೆ ಆಧಾರದಲ್ಲಿ ಭತ್ಯೆ ನೀಡುವ ಪಿಎಲ್ಐ (Production Linked Incentive) ಯೋಜನೆಯನ್ನು ಪರಿಚಯಿಸಿದೆ. ಟಿವಿ ಇಂಡಸ್ಟ್ರಿಯು ಕೂಡಾ ಈ ಉದ್ಯಮಕ್ಕಾಗಿ ಪಿಎಲ್ಐ ಯೋಜನೆಯನ್ನು ಜಾರಿ ಮಾಡಬೇಕು ಎಂಬ ಬೇಡಿಕೆಯನ್ನು ಹೊಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ, ಅರ್ಜುನ್ ಬಜಾಜ್, "ಭಾರತದ ಸ್ಮಾರ್ಟ್ ಟಿವಿ ಉತ್ಪಾದನಾ ವಲಯವು ಈಗಲೂ ಪಿಎಲ್ಐ ಯೋಜನೆಯ ಪ್ರಯೋಜನವನ್ನು ಪಡೆಯಲು ಕಾಯುತ್ತಿದೆ. ಈ ಬಜೆಟ್ ಮೂಲಕ ಸರ್ಕಾರವು ಆತ್ಮನಿರ್ಭರ ಭಾರತಕ್ಕೆ ಪ್ರೋತ್ಸಾಹ ನೀಡಲಿದೆ ಎಂಬ ನಂಬಿಕೆಯಿದೆ," ಎಂದು ತಿಳಿಸಿದ್ದಾರೆ. ಸೂಪರ್ ಪ್ಲಾಸ್ಟ್ರೋನಿಕ್ ಪ್ರೈವೇಟ್ ಲಿಮಿಟೆಡ್ನ ಸಿಇಒ ಅವನೀತ್ ಸಿಂಗ್ ಮಾರ್ವಾಹ, "ಕೋವಿಡ್ ಸಂದರ್ಭದಲ್ಲಿ ಆರ್ಥಿಕತೆಗೆ ಸಹಾಯ ಮಾಡುವ ಹಲವಾರು ಕಾರ್ಯಗಳನ್ನು ಟಿವಿ ಇಂಡಸ್ಟ್ರಿ ಮಾಡಿದೆ. ಇನ್ನೂ ಅಧಿಕ ಹೂಡಿಕೆಯನ್ನು ಮಾಡುವಾಗ ಉದ್ಯಮಿಗಳು ಹಾಗೂ ಇಂಡಸ್ಟ್ರಿಗೆ ಸುರಕ್ಷಿತ ಭಾವನೆ ಬರುವುದು ಮುಖ್ಯವಾಗಿದೆ," ಎಂದು ಹೇಳಿದ್ದಾರೆ.
ಸಾರಿಗೆ ಮೂಲಸೌಕರ್ಯ ಬೆಳವಣಿಗೆ
ಸರ್ಕಾರವು ಈ ಬಜೆಟ್ನಲ್ಲಿ ಸಾರಿಗೆ ಮೂಲಸೌಕರ್ಯದ ಬೆಳವಣಿಗೆಗೆ ಉತ್ತಮ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಇಂಡಸ್ಟ್ರಿ ಭರವಸೆಯನ್ನು ಹೊಂದಿದೆ. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ ನಡುವೆ ಒಂದು ನಂಟು ಇರುವುದು ಮುಖ್ಯವಾಗಿದೆ. ಸಾರಿಗೆ, ಹೆದ್ದಾರಿ, ರೋಡ್ ಅಭಿವೃದ್ಧಿಯಿಂದಾಗಿ ಈ ಕಾರ್ಯ ಸಾಧ್ಯವಾಗಲಿದೆ. ಗ್ರಾಮೀಣ ಪ್ರದೇಶಕ್ಕೆ ಪ್ರಯಾಣ ಮಾಡಲು ಸೌಕರ್ಯ ಹೆಚ್ಚಾದರೆ ಅಲ್ಲಿಯೂ ಟಿವಿ ಇಂಡಸ್ಟ್ರಿ ಬೆಳವಣಿಗೆ ಕಾಣಲಿದೆ. ರಸ್ತೆಯು ಹಳ್ಳ-ಕೊಳ್ಳಗಳಿಲ್ಲದೆ ಸರಿಯಾಗಿದ್ದರೆ ಟಿವಿ ಡೆಲಿವರಿ ಮಾಡಲು ಸಹಾಯವಾಗಲಿದೆ ಎಂಬ ಅಭಿಪ್ರಾಯವನ್ನು ಕೂಡಾ ಇಂಡಸ್ಟ್ರಿ ವ್ಯಕ್ತಪಡಿಸಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications