ಚಂಡಮಾರುತ, ಭೂಕಂಪ, ಪ್ರವಾಹ, ನೆರೆ, ಆಲಿಕಲ್ಲು ಮಳೆಯಂತಹ ನೈಸರ್ಗಿಕ ವಿಕೋಪಗಳು ಅನಿರೀಕ್ಷಿತವಾಗಿದೆ. ಪ್ರಸ್ತುತ ಹವಾಮಾನ ಇಲಾಖೆಯು ಹವಾಮಾನ ಹೇಗೆ ಇರಲಿದೆ ಎಂಬ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತದೆಯಾದರೂ ನಾವು ಈ ಮಳೆ, ಚಂಡಮಾರುತವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಕಳೆದ ಹಲವಾರು ವರ್ಷಗಳಿಂದ ಭಾರತದ ವಿವಿಧ ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಆಸ್ತಿಗಳಿಗೆ ಹಾನಿಯಾಗಿದೆ.
ಪ್ರಸ್ತುತ ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶಲ್ಲಿ ಭಾರೀ ಮಳೆಯಾಗಿದೆ. ಹಲವು ಪ್ರದೇಶಗಳಲ್ಲಿ ನೆರೆಯಾಗಿದೆ. ದಾರಿಯಲ್ಲಿ ನೀರು ತುಂಬಿಕ ಜನರ ಓಡಾಟ್ಟಕ್ಕೆ ಭಾರೀ ಕಷ್ಟವಾಗಿದೆ. ಇನ್ನು ಹಲವಾರು ವಾಹನಗಳಿಗೆ ಹಾನಿಯಾಗಿದೆ. ಈ ಸಂದರ್ಭದಲ್ಲಿ ನೀವು ನಿಮ್ಮ ಕಾರಿನ ವಿಮೆಯನ್ನು ಕ್ಲೈಮ್ ಮಾಡಿಕೊಳ್ಳಬಹುದು.
ಈ ನೆರೆ ಸಂದರ್ಭದಲ್ಲಿ ನೀವು ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದೆಯೇ ನಿಮ್ಮ ಕಾರಿಗೆ ಆದ ಹಾನಿಗಾಗಿ ವಿಮೆ ಕ್ಲೈಮ್ ಮಾಡಿಕೊಳ್ಳಬಹುದು. ಇದರಿಂದಾಗಿ ನಿಮ್ಮ ಸಮಯ ಹಾಗೂ ಹಣ ಎರಡನ್ನು ಕೂಡಾ ಉಳಿತಾಯ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಕೆಲವು ವಿಮಾ ಪಾಲಿಸಿಗಳು ಕಳ್ಳತನ ಹಾಗೂ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿಯೂ ಕ್ಲೈಮ್ ಮಾಡಲು ಸಾಧ್ಯವಾಗಲಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
ಕೂಡಲೇ ಕಾರನ್ನು ಸ್ಟಾರ್ಟ್ ಮಾಡಬೇಡಿ
ನೀವು ಈ ಕಾರು ವಿಮೆಯ ಬಗ್ಗೆ ಪ್ರಮುಖವಾಗಿ ಕೆಲವು ಅಂಶಗಳನ್ನು ತಿಳಿದರಲೇ ಬೇಕಾಗುತ್ತದೆ. ಇಲ್ಲವಾದರೆ ನಿಮಗೆ ಭಾರೀ ನಷ್ಟವಾಗಬಹುದು. ನಿಮ್ಮ ಕಾರು ನೆರೆಯಿಂದಾಗಿ ಹಾನಿಯಾದಾಗ ನೀವು ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆಯೂ ತಿಳಿದಿರಬೇಕಾಗುತ್ತದೆ. ನೆರೆಯಿಂದಾಗಿ ಕಾರು ಹಾನಿಯಾದಾಗ ನೀವು ಕಾರನ್ನು ಕೂಡಲೇ ಸ್ಟಾರ್ಟ್ ಮಾಡಲು ಮುಂದಾಗಬಹುದು. ಆದರೆ ಗಮನದಲ್ಲಿ ಇರಲಿ, ಈ ಸಂದರ್ಭದಲ್ಲಿ ಕೂಡಲೇ ಕಾರನ್ನು ಸ್ಟಾರ್ಟ್ ಮಾಡಬೇಡಿ. ನೀವು ನೆರೆಯಿಂದಾಗಿ ಕಾರು ಹಾನಿಯಾಗಿರುವಾಗ ಕಾರನ್ನು ಸ್ಟಾರ್ಟ್ ಮಾಡಿದರೆ ಕಾರಿನ ಇಂಜಿನ್ಗೆ ಹಾನಿಯಾಗುತ್ತದೆ. ಇದು ನಿಮ್ಮ ವಿಮೆಯಲ್ಲಿ ಕವರ್ ಆಗದೆ ಇರುವ ಸಾಧ್ಯತೆ ಇದೆ. ಆದ್ದರಿಂದಾಗಿ ಕಾರನ್ನು ಹಾಗೆಯೇ ಇರಿಸಿ ಅದರ ಫೋಟೋವನ್ನು ತೆಗೆಯುವುದು ಉತ್ತಮ. ಕಾರಿನಲ್ಲಿ ಬೇರೆ ಏನಾದರೂ ಹಾನಿಯಾಗಿದ್ದರೆ ಅದರ ಫೋಟೋವನ್ನು ಕೂಡಾ ತೆಗಿಯಿರಿ.
ನಿಮ್ಮ ವಿಮಾ ಸಂಸ್ಥೆ ಶೀಘ್ರ ಮಾಹಿತಿ ನೀಡಿ
ನೆರೆಯಿಂದಾಗಿ ಒಂದೆರಡಲ್ಲ ಹಲವಾರು ಕಾರು, ವಾಹನಗಳಿಗೆ ಹಾನಿ ಉಂಟಾಗಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯಿಂದ ಹಲವಾರು ಮಂದಿ ಒಂದೇ ಸಮಯಕ್ಕೆ ವಿಮಾ ಕ್ಲೈಮ್ ಮಾಡಬಹುದು. ಆದ್ದರಿಂದಾಗಿ ನಿಮ್ಮ ವಿಮಾ ಸಂಸ್ಥೆಗೆ ಆದಷ್ಟು ಶೀಘ್ರವಾಗಿ ಕಾರಿಗೆ ಹಾನಿ ಆಗಿರುವ ಬಗ್ಗೆ ಮಾಹಿತಿ ನೀಡಿ. ಕೂಡಲೇ ನಿಮ್ಮ ಕಾರನ್ನು ಸರ್ವಿಸ್ ಸೆಂಟರ್ಗೆ ಕಳುಹಿಸಿ. ನೀವು ಗ್ರಾಹಕರ ಸಹಾಯವಾಣಿ ಮೂಲಕ ಅಥವಾ ಇಮೇಲ್ ಮೂಲಕ ನಿಮ್ಮ ಕಾರಿನ ವಿಮಾ ಸಂಸ್ಥೆಯನ್ನು ಸಂಪರ್ಕ ಮಾಡಬಹುದಾಗಿದೆ. ನೀವುವಿಮಾ ಕ್ಲೈಮ್ಗಾಗಿ ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಬೇಕಾಗುತ್ತದೆ. ಫೋಟೋಗಳನ್ನು ಕೂಡಾ ನೀವು ಹಾಕಬಹುದು. ನೀವು ನಿಮ್ಮ ವಿಮಾ ಸಂಸ್ಥೆಯ ಮೊಬೈಲ್ ಆಪ್ನಲ್ಲಿಯೂ ಈ ಕಾರ್ಯವನ್ನು ಮಾಡಬಹುದು. ಆದರೆ ಹೆಚ್ಚು ಸಮಯ ತೆಗೆದುಕೊಳ್ಳಬೇಡಿ. ಯಾಕೆಂದರೆ ಅಧಿಕ ಸಮಯವನ್ನು ನೀವು ತೆಗೆದುಕೊಂಡಂತೆ ನಿಮ್ಮ ಕಾರಿಗೆ ಹಾನಿ ಹೆಚ್ಚಾಗಲಿದೆ. ನಿಮ್ಮ ವಿಮಾ ಸಂಸ್ಥೆಯಿಂದ ಕ್ಲೈಮ್ ಪಡೆಯಲು ಕೂಡಾ ಅಧಿಕ ಸಮಯ ಬೇಕಾಗಬಹುದು.
ವಿಮೆ ಕ್ಲೈಮ್ ರಿಜಿಸ್ಟರ್ ಮಾಡುವ ಹಂತಗಳು
ಹಂತ 1: ನಿಮ್ಮ ಕಾರು ವಿಮಾ ಸಂಸ್ಥೆಗೆ ಕರೆ ಮೂಲಕ, ಇಮೇಲ್ ಮೂಲಕ ಮಾಹಿತಿ ನೀಡಿ
ಹಂತ 2: ನೆರೆ ಸಂದರ್ಭ ಕಾರು ಎಲ್ಲಿತ್ತು ಹಾಗೂ ವಿಮೆಯ ಬಗ್ಗೆ ವಿವರಿಸಿ
ಹಂತ 3: ಸಂಸ್ಥೆ ಕ್ಲೈಮ್ ರಿಜಿಸ್ಟರ್ ಸಂಖ್ಯೆ ನೀಡಲಿದೆ. ಇದನ್ನು ನೀವು ರೆಫೆರೆನ್ಸ್ ಸಂಖ್ಯೆಯಾಗಿ ಬಳಸಬಹುದು
ಹಂತ 4: ಕಾರನ್ನು ಪಿಕ್ಅಪ್ ಮಾಡಲು ನಿಮಗೆ ನಿರ್ದಿಷ್ಟ ಸಮಯವನ್ನು ನೀಡಲಾಗುತ್ತದೆ.
ಹಂತ 5: ಕಾರಿನ ಹಾನಿ ಪರಿಶೀಲನೆ ಮಾಡಲಾಗುತ್ತದೆ. ಇದಾದ ಬಳಿಕ ಕಾರು ರಿಪೇರಿ ಮೊತ್ತದ ಬಗ್ಗೆ ನಿರ್ಧಾರವಾಗಲಿದೆ
ಹಂತ 6: ಎಲ್ಲ ಪ್ರಕ್ರಿಯೆ ಬಳಿಕ ಕ್ಲೈಮ್ ಅಪ್ರುವಲ್ ಫಾರ್ಮ್ ಮೇಲೆ ಸಹಿ ಮಾಡಿ, ಕಾಪಿಯನ್ನು ಇಟ್ಟುಕೊಳ್ಳಿ
ಹಂತ 7: ಕಾರು ಯಾವಾಗ ರಿಪೇರಿ ಆಗಲಿದೆ, ನಿಮಗೆ ಯಾವಾಗ ಲಭ್ಯವಾಗಲಿದೆ ಎಂಬ ಮಾಹಿತಿ ತಿಳಿಯಲಿದೆ.
ಹಂತ 8: ನಗದುರಹಿತ ಕ್ಲೈಮ್ ಆಗಿದ್ದರೆ ವಿಮಾ ಸಂಸ್ಥೆ ನೇರವಾಗಿ ಗ್ಯಾರೆಜ್ಗೆ ಹಣ ಪಾವತಿ ಮಾಡಲಿದೆ.
ಹಂತ 9: ಹಣ ಮರುಪಾವತಿಯಾಗಿದ್ದರೆ ನಿಮಗೆ ಹಣ ಲಭ್ಯವಾಗಲಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications