ಕೊರೊನಾ ಲಾಕ್ ಡೌನ್ ನಿಂದಾಗಿ ಹೊರದೇಶಗಳಲ್ಲಿ ಸಿಲುಕಿಕೊಂಡಿರುವ 15,000 ಭಾರತೀಯರನ್ನು ವಾಪಸ್ ಕರೆಸಿಕೊಳ್ಳುವ ಸಲುವಾಗಿ ಮೇ 7ರಿಂದ 13ನೇ ತಾರೀಕಿನ ಮಧ್ಯೆ ಏರ್ ಇಂಡಿಯಾದಿಂದ 64 ವಿಮಾನಗಳು ಕಾರ್ಯ ನಿರ್ವಹಿಸಲಿವೆ ಎಂದು ನಾಗರಿಕ ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ತಿಳಿಸಿದ್ದಾರೆ.
ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 13ರ ನಂತರ ವಾಪಸ್ ಕರೆತರುವ ಪ್ರಯತ್ನಗಳಲ್ಲಿ ಭಾರತದ ಖಾಸಗಿ ವಿಮಾನಗಳು ಸಹ ಕೈ ಜೋಡಿಸಬಹುದು ಎಂದು ಸಚಿವರು ಹೇಳಿದ್ದಾರೆ. ಯಾರಿಗೆ ವಾಪಸಾತಿ ವಿಮಾನದಲ್ಲಿ ಅವಕಾಶ ದೊರೆಯುತ್ತದೋ ಅಂತಹವರು ಹಣವನ್ನು ಪಾವತಿ ಮಾಡಬೇಕಾಗುತ್ತದೆ.
ವಿಮಾನ ಪ್ರಯಾಣ ದರ ಎಷ್ಟು?
ಯಾವ ದೇಶದಿಂದ ಭಾರತಕ್ಕೆ ವಿಮಾನ ದರ ಎಷ್ಟು ತಗುಲುತ್ತದೆ ಎಂಬ ವಿವರ ಹೀಗಿದೆ: ಲಂಡನ್- ದೆಹಲಿ ರು. 50,000, ಢಾಕಾ- ದೆಹಲಿ ರು. 12,000, ಗಲ್ಫ್ ರಾಷ್ಟ್ರಗಳಾದ ಅಬುಧಾಬಿ, ದುಬೈ ಹಾಗೂ ದೋಹಾದಿಂದ ಕೇರಳದ ಕೊಚ್ಚಿಗೆ ಒಂದು ಕಡೆಯ ದಾರಿಗೆ 15 ರಿಂದ 16 ಸಾವಿರ ರುಪಾಯಿ ದರ ವಿಧಿಸಲಾಗುತ್ತದೆ. ಇನ್ನು ಯುನೈಟೆಡ್ ಸ್ಟೇಟ್ಸ್ ನಿಂದ ಭಾರತಕ್ಕೆ 1,00,000 ರುಪಾಯಿ ಆಗುತ್ತದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡುತ್ತದೆ.
14 ದಿನಗಳ ಕಾಲ ಕ್ವಾರಂಟೇನ್
ಹೊರ ದೇಶಗಳಿಂದ ಬಂದ ಮೇಲೆ ಎಲ್ಲ ಪ್ರಯಾಣಿಕರ ಸ್ಕ್ರೀನಿಂಗ್ ಮಾಡಲಾಗುತ್ತದೆ ಹಾಗೂ Covid- 19 ಮುಂಜಾಗ್ರತಾ ಕ್ರಮವಾಗಿ 14 ದಿನಗಳ ಕಾಲ ಕ್ವಾರಂಟೇನ್ ನಲ್ಲಿ ಇಡಲಾಗುತ್ತದೆ ಎಂದು ಕೇಂದ್ರ ಸಚಿವ ಪುರಿ ಮಾಹಿತಿ ನೀಡಿದ್ದಾರೆ. ಏರ್ ಇಂಡಿಯಾ ಮತ್ತು ಅದರ ಅಂಗ ಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್ ಪ್ರೆಸ್ ನ 64 ವಿಮಾನಗಳು ಯುಎಇ, ಯು.ಕೆ., ಯು.ಎಸ್., ಕತಾರ್, ಸೌದಿ ಅರೇಬಿಯಾ, ಸಿಂಗಪೂರ್, ಮಲೇಷಿಯಾ, ಫಿಲಿಪೈನ್ಸ್, ಬಾಂಗ್ಲಾದೇಶ್, ಬಹರೇನ್, ಕುವೈತ್ ಮತ್ತು ಒಮನ್ ನಿಂದ ಭಾರತೀಯರನ್ನು ವಾಪಸ್ ತಾಯ್ನಾಡಿಗೆ ಕರೆತರಲಿವೆ.
ಯಾವ ದೇಶಕ್ಕೆ ಭಾರತದ ಎಷ್ಟು ವಿಮಾನ?
ಯುಎಇಗೆ 10 ವಿಮಾನ, ಯುಎಸ್ ಹಾಗೂ ಯು.ಕೆ.ಗೆ ತಲಾ ಏಳು ವಿಮಾನಗಳು, ಸೌದಿ ಅರೇಬಿಯಾ ಮತ್ತು ಸಿಂಗಪೂರ್ ಗೆ ತಲಾ ಐದು ವಿಮಾನ, ಕತಾರ್ ಗೆ ಎರಡು ವಿಮಾನ ಮೇ 7ರಿಂದ 13ನೇ ತಾರೀಕಿನ ಮಧ್ಯೆ ತೆರಳುತ್ತವೆ. ಇದೇ ಅವಧಿಯಲ್ಲಿ ಮಲೇಷ್ಯಾ ಹಾಗೂ ಬಾಂಗ್ಲಾದೇಶ್ ಗೆ ತಲಾ ಏಳು ವಿಮಾನ, ಕುವೈತ್ ಮತ್ತು ಫಿಲಿಪೈನ್ಸ್ ಗೆ ತಲಾ ಐದು ವಿಮಾನ ಮತ್ತು ಒಮನ್, ಬಹರೇನ್ ಗೆ ತಲಾ ಎರಡು ವಿಮಾನಗಳು ತೆರಳಲಿವೆ ಎಂದು ಕೇಂದ್ರ ಸಚಿವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications