ಭಾರತದಲ್ಲಿ ಸಾಮಾನ್ಯವಾಗಿ ನಾವು ಗಳಿಸುವ ಯಾವುದೇ ಆದಾಯದ ಮೇಲೆಯೂ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಅದಕ್ಕಾಗಿ ದೇಶದಲ್ಲಿ ಪ್ರತ್ಯೇಕ ಕಾಯ್ದೆಯೂ ಕೂಡಾ ಇದೆ. ಆದರೆ ನಾವು ವಿದೇಶದಿಂದ ಪಡೆದ ಆದಾಯದ ಮೇಲೆ ತೆರಿಗೆ ಇದೆಯೇ?
ಹೌದು, ನಾವು ಯಾವುದೇ ಮೂಲದಿಂದ ಪಡೆದ ಆದಾಯದ ಮೇಲೆ ತೆರಿಗೆ ಇದೆ. ಅದಕ್ಕೆ ಕೆಲವೊಂದು ಮಿತಿ, ವಿನಾಯಿತಿಗಳು ಕೂಡಾ ಇದೆ. ಭಾರತದಲ್ಲಿ ಒಂದು ಹಣಕಾಸು ವರ್ಷದಲ್ಲಿ ಒಬ್ಬ ವ್ಯಕ್ತಿ ಗಳಿಸುವ ನಿವ್ವಳ ಆದಾಯವು 2,50,000 ರೂಪಾಯಿಗಿಂತ ಅಧಿಕವಾಗಿದ್ದರೆ, ಆದಾಯ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ.
ಹಿರಿಯ ನಾಗರಿಕರಾದರೆ 3,00,000 ರೂಪಾಯಿಗಿಂತ ಅಧಿಕ ಆದಾಯದ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. 80 ವರ್ಷಕ್ಕಿಂತ ಮೇಲಿನವರಾದರೆ 5,00,000 ರೂಪಾಯಿಗಿಂತ ಅಧಿಕ ಮೊತ್ತದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.

ಕೊರೊನಾ ಸಾಂಕ್ರಾಮಿಕದ ಬಳಿಕ ಪ್ರಸ್ತುತ ಹಲವಾರು ಸಂಸ್ಥೆಗಳು ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ನೀಡಿದೆ. ಈ ಹಿಂದೆ ವಿದೇಶದಲ್ಲಿ ದುಡಿಯುತ್ತಿದ್ದ ಅದೆಷ್ಟೋ ಮಂದಿ ಈಗ ಭಾರತದಲ್ಲಿಯೇ ಇದ್ದು ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಆದರೆ ನಾವು ವಿದೇಶದಿಂದ ಗಳಿಸುವ ಆದಾಯದ ಮೇಲಿನ ತೆರಿಗೆಯನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ? ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ವಿದೇಶದಿಂದ ವಿತ್ಹೋಲ್ಡ್ ಮಾಡಲಾಗಿರುವ ತೆರಿಗೆ
ನಮ್ಮ ದೇಶದಲ್ಲಿರುವ ಟಿಡಿಎಸ್ನಂತೆಯೇ ವಿದೇಶಗಳು ಭಾರತದಲ್ಲಿರುವಸ ಒಬ್ಬ ಉದ್ಯೋಗಿಯ ವೇತನವನ್ನು ವರ್ಗಾವಣೆ ಮಾಡುವಾಗ ತೆರಿಗೆಯನ್ನು ವಿತ್ಹೋಲ್ಡ್ ಮಾಡಬಹುದು. ಉದಾಹರಣೆಗೆ ಯುಎಸ್ ಸಂಸ್ಥೆಗಳು ತಮ್ಮ ಸ್ಥಳೀಯ ಕಾನೂನು ಪ್ರಕಾರವಾಗಿ ತೆರಿಗೆಯನ್ನು ಕಡಿತ ಮಾಡುತ್ತದೆ. ಉದ್ಯೋಗವನ್ನು ಆಧಾರಿಸಿ ಸುಮಾರು ಶೇಕಡ 10-12ರವರೆಗೆ ತೆರಿಗೆಯನ್ನು ಕಡಿತ ಮಾಡಲಾಗುತ್ತದೆ. ಆದ್ದರಿಂದಾಗಿ ಭಾರತದಲ್ಲಿದ್ದು ವಿದೇಶದ ಸಂಸ್ಥೆಯಲ್ಲಿ ದುಡಿಯುವವರು ತಮ್ಮ ವೇತನದಲ್ಲಿ ಎಷ್ಟು ಮೊತ್ತವನ್ನು ತೆರಿಗೆಯಾಗಿ ವಿತ್ಹೋಲ್ಡ್ ಮಾಡಲಾಗುತ್ತದೆ ಎಂದು ತಿಳಿದಿರಬೇಕು.
ರೂಪಾಯಿಗೆ ವರ್ಗಾಯಿಸುವುದಕ್ಕೆ ತೆರಿಗೆ
ವಿದೇಶದ ಕರೆನ್ಸಿಯನ್ನು ಭಾರತದ ರೂಪಾಯಿಗೆ ವರ್ಗಾವಣೆ ಮಾಡುವ ಸಂದರ್ಭದಲ್ಲಿಯೂ ತೆರಿಗೆಯನ್ನು ಕಡಿತ ಮಾಡಲಾಗುತ್ತದೆ. ಇದು ಕೂಡಾ ಯಾವ ಮೂಲದಿಂದ ಆದಾಯ ಲಭ್ಯವಾಗುತ್ತಿದೆ ಎಂಬ ಮೇಲೆ ನಿರ್ಧರಿತವಾಗುತ್ತದೆ. ಇನ್ನು ಇಂತಹ ಆದಾಯವನ್ನು ನಿಗದಿತ ಅವಧಿಯಲ್ಲೇ ವರ್ಗಾವಣೆ ಮಾಡಬೇಕು ಎಂಬುವುದು ಆರ್ಬಿಐ ನಿಯಮವಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications