ದೇಶದ ಪ್ರಮುಖ ವಹಿವಾಟು ವಿಧಾನವಾದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ವಹಿವಾಟು ನಡೆಸಲು ಸಾಧ್ಯವಾಗುವ ಆಪ್ ಆದ ಗೂಗಲ್ ಪೇ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ. ನೆಟ್ಟಿಗರು ಗೂಗಲ್ ಪೇ ಅನ್ನು ಸಂಪೂರ್ಣವಾಗಿ ಕೆಲಸಕ್ಕೆ ಬಾರದ್ದು ಎಂದು ಕರೆದಿದ್ದಾರೆ.
ಜನರ ವಹಿವಾಟನ್ನು ಅತೀ ಸರಳವಾಗಿಸುವ ನಿಟ್ಟಿನಲ್ಲಿ ಗೂಗಲ್ ಈ ಹಣಕಾಸು ವಹಿವಾಟು ಮಾಡಲು ಸಾಧ್ಯವಾಗುವ ಗೂಗಲ್ ಪೇ ಅನ್ನು ಜಾರಿಗೆ ತಂದಿದೆ. ಭಾರತದಲ್ಲಿ ಪ್ರತಿ ನಿತ್ಯದ ಸಣ್ಣ ಸಣ್ಣ ವಹಿವಾಟಿಗೂ ಕೂಡಾ ಗೂಗಲ್ ಪೇ ಅನ್ನು ಬಳಕೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಈ ಹಿಂದೆ ಗೂಗಲ್ ಪೇ ಸ್ಕ್ರಾಚ್ ಕಾರ್ಡ್ಗಳು ನೀಡುವ ಆಫರ್ಗಳ ಮೂಲಕ ಜನರನ್ನು ತನ್ನೆಡೆ ಸೆಳೆದುಕೊಂದಿದೆ ಎಂಬುವುದನ್ನು ನಾವು ಮರೆಯುವಂತಿಲ್ಲ.
ಈ ಸ್ಕ್ರಾಚ್ ಕಾರ್ಡ್ಗಳಲ್ಲಿ ಕ್ಯಾಷ್ಬ್ಯಾಕ್ ನೀಡಲಾಗುತ್ತಿತ್ತು. ಹಾಗೆಯೇ ಜ್ಯೊಮ್ಯಾಟೋ, ಸ್ವಿಗ್ಗಿ ಮೊದಲಾದವುಗಳಲ್ಲಿ ಆಫರ್ಗಳನ್ನು ನೀಡಲಾಗುತ್ತಿತ್ತು. ಈ ಸ್ಕ್ರಾಚ್ ಕಾರ್ಡ್ಗಳಿಂದಾಗಿ ಜನರಿಗೆ ಹೆಚ್ಚು ಹಣಕಾಸು ಸಹಾಯ ಉಂಟಾಗಿದೆ. ನಾವು ಮಾಡುವ ಆನ್ಲೈನ್ ಆರ್ಡರ್ಗಳಿಗೆ ರಿಯಾಯಿತಿಯೂ ಲಭ್ಯವಾಗಿದೆ. ಇವೆಲ್ಲದವರ ನಡುವೆ ಈಗ ನೆಟ್ಟಿಗರು ಗೂಗಲ್ ಪೇ ವಿರುದ್ಧ ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಆದರೆ ನೆಟ್ಟಿಗರು ಇಷ್ಟೊಂದು ಆಕ್ರೋಶ ವ್ಯಕ್ತಪಡಿಸಿರುವುದು ಯಾಕೆ, ಏನು ಕಾರಣ ಎಡಂದು ತಿಳಿಯೋಣ ಮುಂದೆ ಓದಿ...
ಗೂಗಲ್ ಪೇ ಮೇಲೆ ನೆಟ್ಟಿಗರ ಯಾವ ವಿಚಾರದಲ್ಲಿ ಆಕ್ರೋಶ?
ಪ್ರಮುಖವಾಗಿ ಗೂಗಲ್ ಪೇ ಜನರನ್ನು ತಲುಪುವ ವಿಧಾನದಲ್ಲಾದ ಬದಲಾವಣೆಯೇ ಈ ಆಕ್ರೋಶಕ್ಕೆ ಕಾರಣವಾಗಿದೆ. ಗೂಗಲ್ ಪೇ ಹೆಚ್ಚಿನ ಗ್ರಾಹಕರಿಗೆ ಹಣಕಾಸು ಪ್ರಯೋಜನವನ್ನು ನೀಡುತ್ತದೆ. ಅದಕ್ಕಾಗಿ ಕ್ಯಾಷ್ಬ್ಯಾಕ್ ಕೂಡಾ ನೀಡುತ್ತದೆ ಎಂಬುವುದನ್ನು ನಾವು ಈ ಮೇಲೆಯೇ ತಿಳಿಸಿದ್ದೇವೆ. ಪ್ರಸ್ತುತ ಈ ಸ್ಕ್ರಾಚ್ ಕಾರ್ಡ್ ವಿಚಾರದಲ್ಲಿಯೇ ನೆಟ್ಟಿಗರು ಗೂಗಲ್ ಪೇ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದೆ.
ಬಳಕೆ ಮಾಡಲಾಗದ ಸ್ಕ್ರಾಚ್ ಕಾರ್ಡ್
ಗೂಗಲ್ ಪೇ ಇತ್ತೀಚೆಗೆ ಈ ಸ್ಕ್ರಾಚ್ ಕಾರ್ಡ್ ವಿಚಾರದಲ್ಲಿ ಬೇರೆಯೇ ಹಾದಿಯನ್ನು ಹಿಡಿದಿದೆ. ಗೂಗಲ್ ಪೇ ತನ್ನ ಬಳಕೆದಾರರಿಗೆ ಸ್ಕ್ರಾಚ್ ಕಾರ್ಡ್ ಅನ್ನು ನೀಡುತ್ತದೆ. ಆದರೆ ಗೂಗಲ್ ಪೇ ಈಗ ನೀಡುತ್ತಿರುವ ಸ್ಕ್ರಾಚ್ ಕಾರ್ಡ್ ಯಾವುದೇ ಪ್ರಯೋಜನಕ್ಕೆ ಬಾರದ್ದು ಎಂಬುವುದು ನೆಟ್ಟಿಗರ ಆರೋಪವಾಗಿದೆ. ಗೂಗಲ್ ಪೇ ಸದ್ಯ ನೀಡುವ ಸ್ಕ್ರಾಚ್ ಕಾರ್ಡ್ ನಮಗೆ ಸದುಪಯೋಗ ಮಾಡಲು ಸಾಧ್ಯವಾದಂತಹ ಸ್ಕ್ರಾಚ್ ಕಾರ್ಡ್. ನಾವು ಬಳಕೆ ಮಾಡುವುದಕ್ಕೂ ಮುನ್ನವೇ ಆಫರ್ ಕೊನೆ ದಿನಾಂಕ ಅಂತ್ಯವಾಗಿರುತ್ತದೆ.
ಗೂಗಲ್ ಪೇ ಬಗ್ಗೆ ನೆಟ್ಟಿಗರು ಹೇಳುವುದೇನು?
"ಗೂಗಲ್ ಪೇ ಜನರನ್ನು ಮಂಗ ಮಾಡುವ ತಂತ್ರ ಮಾಡುತ್ತಿದೆ. ಬರೀ ನಮ್ಮ ಪ್ರಯೋಜನವನ್ನು ಪಡೆಯಲಾಗುತ್ತಿದೆ," ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದರೆ, "ಗೂಗಲ್ ಪೇ ಇಷ್ಟು ಕೆಟ್ಟದಾಗಿದೆ. ಯಾವುದೇ ಪ್ರಯೋಜನಕ್ಕೆ ಬಾರದ ಆಫರ್ ನೀಡುತ್ತದೆ," ಎಂದು ಮತ್ತೋರ್ವ ನೆಟ್ಟಿಗರು ಹೇಳಿಕೊಂಡಿದ್ದಾರೆ. "ಗೂಗಲ್ ಪೇನಲ್ಲಿ ನೀಡಲಾಗುವ ರಿವಾರ್ಡ್ಗಳನ್ನು ಪ್ರಯೋಜನಕ್ಕೆ ಬಾರದು ಎಂದು ಕರೆಯಲಾಗುತ್ತದೆ," ಎಂದು ಇನ್ನೋರ್ವ ನೆಟ್ಟಿಗರು ತಿಳಿಸಿದ್ದಾರೆ. "ನಾನು ಕೊನೆಯ ದಿನ ಮುಗಿದು ಬಳಕೆ ಮಾಡಲಾಗದ ರಿವಾರ್ಡ್ಗಳನ್ನು ನೋಡಿ ಬೇಸರ ಪಡುತ್ತಿದ್ದೇವೆ. ಈ ಕಾರ್ಡ್ಗಳನ್ನು ಯಾರೂ ಕೂಡಾ ರಿಡೀಮ್ ಮಾಡಲು ಬಯಸುವುದಿಲ್," ಎಂದು ತಿಳಿಸಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications