ಎಲ್ಲಾ ದಾಖಲೆಗಳ ಪೈಕಿ ಈಗ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ನಮ್ಮ ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಹೀಗೆ ಮೊದಲಾದ ಎಲ್ಲಾ ಪ್ರಮುಖ ದಾಖಲೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲು ಆಯಾ ಇಲಾಖೆಗಳು ಸೂಚನೆ ನೀಡುತ್ತಾ ಬಂದಿದೆ. ಆದರೆ ಹಲವಾರು ಮಂದಿಗೆ ಇನ್ನೂ ಕೂಡಾ ಆಧಾರ್ ಕಾರ್ಡ್ ಲಭ್ಯವಾಗಿಲ್ಲ. ಆದರೆ ಸರ್ಕಾರದ ಎಲ್ಲ ಸಬ್ಸಿಡಿ, ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಮುಖ್ಯವಾಗಿದೆ. ಹಾಗಿರುವಾಗ ಆಧಾರ್ ಕಾರ್ಡ್ ಇಲ್ಲದೆಯೇ ಹೇಗೆ ಸಬ್ಸಿಡಿಯನ್ನು ಪಡೆಯುವುದು?
ನಿಮಗೆ ಈವರೆಗೆ ಆಧಾರ್ ಕಾರ್ಡ್ ಲಭ್ಯವಾಗಿಲ್ಲದಿದ್ದರೆ ಆದರೆ ನೀವು ಸರ್ಕಾರದ ಸಬ್ಸಿಡಿ ಹಾಗೂ ಪ್ರಯೋಜನಗಳನ್ನು ಪಡೆಯಲು ಬಯಸಿದರೆ, ನಿಮಗೆ ಆ ಅವಕಾಶವಿದೆ. ಕೇಂದ್ರ ಹಾಗೂ ರಾಜ್ಯಕ್ಕೆ ಕಳೆದ ವಾರ ನೀಡಲಾದ ಸುತ್ತೋಲೆಯಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಕಾಯ್ದೆಯ ಸೆಕ್ಷನ್ 7 ರಲ್ಲಿ ಅಸ್ತಿತ್ವದಲ್ಲಿರುವ ನಿಬಂಧನೆಯನ್ನು ಉಲ್ಲೇಖಿಸಿದೆ.
ಈ ಸುತ್ತೋಲೆಯ ಪ್ರಕಾರ ಆಧಾರ್ ಕಾರ್ಡ್ ಹೊಂದಿಲ್ಲದ ಯಾವುದೇ ವ್ಯಕ್ತಿ ಅರ್ಜಿ ಮತ್ತು ಸಬ್ಸಿಡಿ, ಪ್ರಯೋಜನ ಅಥವಾ ಸೇವೆಯನ್ನು ಪಡೆಯಲು ಪರ್ಯಾಯ ವ್ಯವಸ್ಥೆಯನ್ನು ಪಾಲನೆ ಮಾಡಬಹುದು. ಇದಕ್ಕಾಗಿ ಪರ್ಯಾಯವಾದ ಗುರುತನ್ನು ವ್ಯಕ್ತಿಗೆ ನೀಡಲಾಗುತ್ತದೆ.
ಸುತ್ತೋಲೆ ಏನು ಹೇಳುತ್ತದೆ?
ಈ ಸುತ್ತೋಲೆಯಲ್ಲಿ, "ಮೇಲಿನ ಕಾರಣದಿಂದಾಗಿ ಕಾಯಿದೆಯ ಸೆಕ್ಷನ್ 7 ರ ನಿಬಂಧನೆಯನ್ನು ಪರಿಗಣಿಸಿ ಒಬ್ಬ ವ್ಯಕ್ತಿಗೆ ಯಾವುದೇ ಆಧಾರ್ ಸಂಖ್ಯೆ ಇಲ್ಲವಾದರೆ ಅವನು/ಅವಳು ದಾಖಲಾತಿಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಅಂತಹ ವ್ಯಕ್ತಿಗೆ ಆಧಾರ್ ಸಂಖ್ಯೆಯನ್ನು ನಿಗದಿಪಡಿಸುವವರೆಗೆ, ಅವನು/ಅವಳು ಆಧಾರ್ ದಾಖಲಾತಿ ಗುರುತಿನ ಸಂಖ್ಯೆ/ಸ್ಲಿಪ್ನೊಂದಿಗೆ ಪರ್ಯಾಯ ಗುರುತಿನ ವಿಧಾನಗಳ ಮೂಲಕ ಪ್ರಯೋಜನಗಳು, ಸಬ್ಸಿಡಿಗಳು ಮತ್ತು ಸೇವೆಗಳನ್ನು ಪಡೆಯಬಹುದು," ಎಂದು ಉಲ್ಲೇಖ ಮಾಡಲಾಗಿದೆ.
ಆಧಾರ್ ಕಾಯಿದೆ, 2016 ರ ಸೆಕ್ಷನ್ 7 ರ ಅಡಿಯಲ್ಲಿ ಸೂಚಿಸಲಾದ ಯೋಜನೆಗಳ ಅಡಿಯಲ್ಲಿ ವ್ಯಕ್ತಿಗೆ, ಸಬ್ಸಿಡಿಗಳು, ಪ್ರಯೋಜನಗಳು ಅಥವಾ ಸೇವೆಗಳಿಗೆ ಆಧಾರ್ ಅನ್ನು ನೀಡುವವರೆಗೆ ಈ ಕೆಳಗಿನ ದಾಖಲೆಗಳನ್ನು ಪರ್ಯಾಯ ದಾಖಲೆಯಾಗಿ ಪರಿಗಣಿಸಲಾಗುತ್ತದೆ.
ಪರ್ಯಾಯ ದಾಖಲೆಗಳು ಯಾವುದು?
* ಅರ್ಜಿದಾರರ ಬ್ಯಾಂಕ್ ಪಾಸ್ಬುಕ್: ಇದರಲ್ಲಿ ವ್ಯಕ್ತಿಯ ಫೋಷಕರೊಂದಿಗೆ ಹೆಸರು ಜಂಟಿಯಾಗಿರಬೇಕು ಮತ್ತು ಅರ್ಜಿದಾರರ ಭಾವಚಿತ್ರ ಇರಬೇಕು
* ಆಧಾರ್ಗಾಗಿ ನೋಂದಣಿ ಮಾಡಿಕೊಂಡಿದ್ದರೆ, ಆಧಾರ್ ನೋಂದಣಿ ಐಡಿ ಸ್ಲಿಪ್ ನೀಡಿದರೆ ಸಾಕಾಗುತ್ತದೆ
* ಆಧಾರ್ ನೋಂದಣಿಗಾಗಿ ಮಾಡಿದ ಅರ್ಜಿ ಕೋರಿಕೆಯ ಪ್ರತಿ
ಗುರುತಿನ ಪುರಾವೆಗಳು ಯಾವುದು?
* ಭಾರತದ ಚುನಾವಣಾ ಆಯೋಗವು ನೀಡಿದ ಮತದಾರರ ಗುರುತಿನ ಚೀಟಿ
* ಆದಾಯ ತೆರಿಗೆ ಇಲಾಖೆ ನೀಡಿದ ಶಾಶ್ವತ ಖಾತೆ ಸಂಖ್ಯೆ/ಪ್ಯಾನ್ (PAN) ಕಾರ್ಡ್
* ಪಾಸ್ಪೋರ್ಟ್
* ಮೋಟಾರು ವಾಹನಗಳ ಕಾಯಿದೆ, 1988 (1988 ರ 59) ಅಡಿಯಲ್ಲಿ ಪರವಾನಗಿ ಪ್ರಾಧಿಕಾರವು ನೀಡಿದ ಚಾಲನಾ ಪರವಾನಗಿ
* ಅಧಿಕೃತ ಲೆಟರ್ ಹೆಡ್ನಲ್ಲಿ ಗೆಜೆಟೆಡ್ ಅಧಿಕಾರಿ ಅಥವಾ ತಹಸೀಲ್ದಾರ್ ನೀಡಿದ ಸದಸ್ಯರ ಫೋಟೋ ಹೊಂದಿರುವ ಗುರುತಿನ ಪ್ರಮಾಣಪತ್ರ
* ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಿದ ಯಾವುದೇ ಇತರ ದಾಖಲೆ
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications