ರಾಜ್ಯದಾದ್ಯಂತ ಆಗಸ್ಟ್ 5ರಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ಕಾರಣದಿಂದಾಗಿ ಇಂದು (ಆಗಸ್ಟ್ 4) ಮಾರುಕಟ್ಟೆಯಲ್ಲಿ ಹೂವು, ಹಣ್ಣು ಹಾಗೂ ಹಬ್ಬಕ್ಕೆ ಬೇಕಾದ ಇತರೆ ವಸ್ತುಗಳ ಖರೀದಿಯು ಭರದಿಂದ ಸಾಗುತ್ತಿದೆ. ಆದರೆ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಬೇಡಿದ ವರವನ್ನು ವರಮಹಾಲಕ್ಷ್ಮೀ ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ಈ ಹಬ್ಬ ಆಚರಣೆ ಮಾಡುವುದರಿಂದ ತಾಯಿ ಲಕ್ಷ್ಮೀಯ ಅನುಗ್ರಹಕ್ಕೆ ಪಾತ್ರವಾಗಬಹುದು ಎಂಬ ನಂಬಿಕೆ ಇದೆ. ನಾಳೆ ಹಬ್ಬದ ಹಿನ್ನೆಲೆಯಿಂದಾಗಿ ಈಗಾಗಲೇ ಹೆಣ್ಣು ಮಕ್ಕಳು ಎಲ್ಲಾ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಹಬ್ಬದ ಕಾರಣದಿಂದಾಗಿ ಬೆಂಗಳೂರಿನಲ್ಲಿ ಖರೀದಿ ಭರಾಟೆ ಅಧಿಕವಾಗಿದೆ.
ಕೆ ಆರ್ ಮಾರುಕಟ್ಟೆಯಲ್ಲಿ ಜನಜಾತ್ರೆಯಾಗಿದೆ. ಈ ಮಳೆಯ ನಡುವೆಯೂ ಜನರು ಹಬ್ಬದ ತಯಾರಿಯಲ್ಲಿ ವ್ಯಸ್ತರಾಗಿದ್ದಾರೆ. ಮೊದಲೇ ಟ್ರಾಫಿಕ್ ಜಾಮ್ ಸಾಮಾನ್ಯವಾದ ಸಮಸ್ಯೆಯಾಗಿರುವಾಗ ಜನರು ವರಮಹಾಲಕ್ಷ್ಮೀ ಹಬ್ಬದ ಶಾಫಿಂಗ್ನಲ್ಲಿ ಇರುವ ಕಾರಣದಿಂದಾಗಿ ಟ್ರಾಫಿಕ್ ಇನ್ನಷ್ಟು ಅಧಿಕವಾಗಿದೆ. ಆದರೆ ಈ ನಡುವೆ ಹೂವು ಹಣ್ಣುಗಳ ಬೆಲೆಯು ದಿಢೀರ್ ಏರಿಕೆಯಾಗಿದೆ. ಹಬ್ಬದ ತಯಾರಿಯಲ್ಲಿರುವ ಜನರಿಗೆ ಬೆಲೆ ಏರಿಕೆ ಶಾಕ್ ನೀಡಿದೆ.
ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಹೂವು, ಹಣ್ಣು ಹಾಗೂ ಇತರೆ ವಸ್ತುಗಳ ಬೆಲೆ ಹೇಗಿದೆ ಎಂಬ ಬಗ್ಗೆ ಇಲ್ಲಿ ನಾವು ವಿವರವಾದ ಮಾಹಿತಿ ನೀಡಿದ್ದೇವೆ ಮುಂದೆ ಓದಿ....
ಹೂವಿನ ಬೆಲೆ ತಿಳಿಯಿರಿ
ಚೆಂಡು ಹೂವು 80 ರೂ/ ಕೆಜಿ
ಮಲ್ಲಿಗೆ ಒಂದು ಮಾರು 200 ರೂ
ಗುಲಾಬಿ - 410 ರೂ/ ಕೆಜಿ
ಕನಕಾಂಬರ ಒಂದು ಮಾರು 300 ರೂ/ ಕೆಜಿ
ಸುಗಂಧರಾಜ 110 ರೂ/ ಕೆಜಿ
ಸೇವಂತಿಗೆ 400 ರೂ/ ಕೆಜಿ
ಹಣ್ಣಿನ ಬೆಲೆ ನೋಡಿ
ಏಲಕ್ಕಿ ಬಾಳೆಹಣ್ಣು 80 ರೂ/ ಕೆಜಿ
ಸೇಬು 180 ರೂ/ ಕೆಜಿ
ಮೂಸಂಬಿ 100 ರೂ/ ಕೆಜಿ
ಆರೆಂಜ್ 220 ರೂ/ ಕೆಜಿ
ದ್ರಾಕ್ಷಿ 200-220 ರೂ/ ಕೆಜಿ
ಸಪೋಟ 200 ರೂ/ ಕೆಜಿ
ಸೀಬೆಹಣ್ಣು 100 ರೂ/ ಕೆಜಿ
ದಾಳಿಂಬೆ 150 ರೂ/ ಕೆಜಿ
ಅಗತ್ಯ ವಸ್ತುಗಳ ಬೆಲೆ
ಬೇವಿನ ಸೊಪ್ಪು - 20 ರೂ - ಕಟ್ಟು
ಮಾವಿನ ಎಲೆ 20 ರೂ - ಕಟ್ಟು
ಬೆಲ್ಲ (ಅಚ್ಚು / ಉಂಡೆ) - 70 - 80 ರೂ/ ಕೆಜಿ
ಬಾಳೆ ಕಂಬ - 50 ರೂ
ತುಳಸಿ ತೋರಣ - 50 ರೂ- ಮಾರು
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ



Click it and Unblock the Notifications