2,300 ಕೇಜಿಗೂ ಹೆಚ್ಚು ತೂಕದ ಪಾಲಿಶ್ ಆದ ವಜ್ರಗಳು, ಮುತ್ತು ಮತ್ತು ಆಭರಣಗಳು ಭಾರತಕ್ಕೆ ಬಂದಿವೆ. ಇವುಗಳ ಮೌಲ್ಯ 1,350 ಕೋಟಿ ರುಪಾಯಿ. ಅಂದ ಹಾಗೆ ಇದು ಯಾವುದೋ ರಾಜ ಮನೆತನದ ಆಸ್ತಿಯಲ್ಲ. ವಂಚನೆ ಆರೋಪ ಹೊತ್ತಿರುವ ಆಭರಣ ವ್ಯಾಪಾರಿ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ದುಬೈಗೆ ತಲುಪಿಸಲು ಸಿದ್ಧತೆ ನಡೆಸಿದ್ದರು ಎನ್ನಲಾದವು. ಇವುಗಳನ್ನು ಜಾರಿ ನಿರ್ದೇಶನಾಲಯದಿಂದ ಭಾರತಕ್ಕೆ ವಾಪಸ್ ತರಲಾಗಿದೆ.
ನೀರವ್ ಮೋದಿ ಹಾಗೂ ಆತನ ಸಂಬಂಧಿ ಮೆಹುಲ್ ಚೋಕ್ಸಿ ನಡೆಸುತ್ತಿದ್ದ ಸಂಸ್ಥೆಗೆ ಸೇರಿದ್ದ ಇವುಗಳನ್ನು 108 ಪ್ಯಾಕೇಜ್ ಗಳಲ್ಲಿ ಹಾಂಕಾಂಗ್ ನಿಂದ ಇ.ಡಿ. "ಯಶಸ್ವಿಯಾಗಿ ಆಮದು" ಮಾಡಿಕೊಂಡಿದೆ. ಅಧಿಕಾರಿಗಳಿಂದ ತಪ್ಪಿಸಿಕೊಂಡು, 2018ರಲ್ಲಿ ಹಾಂಕಾಂಗ್ ನಿಂದ ದುಬೈಗೆ ಇವುಗಳನ್ನು ಸಾಗಿಸಲು ಇವರಿಬ್ಬರು ಯೋಜನೆ ರೂಪಿಸಿದ್ದರು.
ಸರಕಿನ ಮೌಲ್ಯ 1,350 ಕೋಟಿ ರುಪಾಯಿ
ಈಗ ವಶಪಡಿಸಿಕೊಂಡು ಭಾರತಕ್ಕೆ ತಂದಿರುವುದರಲ್ಲಿ ಪಾಲಿಶ್ ಆದ ವಜ್ರಗಳು, ಮುತ್ತು, ಮುತ್ತು ಹಾಗೂ ಬೆಳ್ಳಿ ಆಭರಣಗಳು ಇವೆ. ತನಿಖಾಧಿಕಾರಿಗಳು ಹೇಳುವಂತೆ ಈ ಸರಕಿನ ಮೌಲ್ಯ 1,350 ಕೋಟಿ ರುಪಾಯಿ. ಇನ್ನು ತೂಕ 2,340 ಕೇಜಿ. ಗುಪ್ತಚರ ದಳ ನೀಡಿದ ಸುಳಿವಿನ ಮೇರೆಗೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಅಧಿಕೃತವಾಗಿ ಜಪ್ತಿ ಮಾಡಿಕೊಂಡಿದ್ದ ಆಭರಣಗಳನ್ನು ಹಾಂಕಾಂಗ್ ನಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲು ಪ್ರಯತ್ನ ನಡೆಸಿತ್ತು.
2018ರಲ್ಲಿ ಇಬ್ಬರೂ ದೇಶ ಬಿಟ್ಟು ಪಲಾಯನ
ಈ ಪ್ಯಾಕೇಜ್ ಗಳನ್ನು ಮುಂಬೈಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಹೇಳುವಂತೆ, ಒಟ್ಟು 108 ಕನ್ ಸೈನ್ ಮೆಂಟ್ ಗಳಿದ್ದು, ಅದರಲ್ಲಿ 32 ನೀರವ್ ಮೋದಿಗೆ ಸೇರಿದೆ. 76 ಮೆಹುಲ್ ಚೋಕ್ಸಿಗೆ ಸೇರಿದ್ದಾಗಿದೆ. ನಕಲಿ ಗ್ಯಾರಂಟಿಗಳನ್ನು ನೀಡಿ, ಪಿಎನ್ ಬಿಯಿಂದ ಇವರಿಬ್ಬರೂ ಸಾಲ ಪಡೆದು, ವಂಚಿಸಿದ್ದರು. ಸಿಬಿಐ ತನಿಖೆ ಆರಂಭಿಸುವ ಮುಂಚೆಯೇ 2018ರಲ್ಲಿ ಇಬ್ಬರೂ ದೇಶ ಬಿಟ್ಟು ಪಲಾಯನ ಮಾಡಿದ್ದರು.
PMLA ಅಡಿಯಲ್ಲಿ ಇಬ್ಬರ ವಿರುದ್ಧವೂ ಪ್ರಕರಣ
ಇಬ್ಬರೂ ಉದ್ಯಮಿಗಳ ಬಗ್ಗೆ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ (PMLA) ಅಡಿಯಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ತನಿಖೆ ನಡೆಯುತ್ತಿದೆ. ಕಳೆದ ವರ್ಷ ಲಂಡನ್ ನಲ್ಲಿ ನೀರವ್ ಮೋದಿಯನ್ನು ಬಂಧಿಸಲಾಗಿದೆ. ಆತ ಜೈಲಿನಲ್ಲಿದ್ದು, ಭಾರತಕ್ಕೆ ಹಸ್ತಾಂತರ ಮಾಡುವುದನ್ನು ವಿರೋಧಿಸಿ ಹೋರಾಟ ನಡೆಸುತ್ತಿದ್ದಾನೆ. ಬ್ಯಾಂಕ್ ಗಳಿಗೆ ನೀರವ್ ಮೋದಿಯಿಂದ ಬರಬೇಕಾದ ಮೊತ್ತವನ್ನು ಸ್ವಲ್ಪವಾದರೂ ವಸೂಲಿ ಮಾಡಬೇಕು ಎಂಬ ಕಾರಣಕ್ಕೆ ಆತನಿಗೆ ಸೇರಿದ ರೋಲ್ಸ್ ರಾಯ್ಸ್ ಕಾರು, ಎಂ.ಎಫ್. ಹುಸೇನ್ ಹಾಗೂ ಅಮೃತ ಶೆರ್ಗಿಲ್ ರಚಿಸಿದ ಕಲಾಕೃತಿಗಳು, ಡಿಸೈನರ್ ಹ್ಯಾಂಡ್ ಬ್ಯಾಗ್ ಮತ್ತಿತರ ವಿಲಾಸಿ ವಸ್ತುಗಳನ್ನು ತನಿಖಾ ಸಂಸ್ಥೆಗಳು ವಶಪಡಿಸಿಕೊಂಡು, ಹರಾಜು ಹಾಕಿಸಿವೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications