
ಮುಖ್ಯ ಆರ್ಥಿಕ ನಿರ್ವಹಣಾಧಿಕಾರಿ ಪಂಕಜ್ ಮದನ್ ಸೇರಿದಂತೆ 5 ಜನರನ್ನು ಭಾರ್ತಿ ವಾಲ್ಮಾರ್ಟ್ ಅಮಾನತುಗೊಳಿಸಿದೆ.
ಯುಎಸ್ ನ ರೀಟೈಲ್ ದಿಗ್ಗಜ ವಾಲ್ಮಾರ್ಟ್ ಕಂಪನಿ ಮೇಲೆ ಭ್ರಷ್ಟಾಚಾರ ಆರೋಪದ ಮೇಲೆ ಜಾಗತಿಕ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ.
ಹೀಗಾಗಿ ಭಾರತದಲ್ಲಿ ವಾಲ್ಮರ್ಟ್ ನ ಮಳಿಗೆಗಳು ಸದ್ಯಕ್ಕಂತೂ ಆರಂಭಿಸುವುದು ಕಷ್ಟವೆನಿಸಿದೆ.
ಅಮಾನತು ಆದೇಶದ ಸುದ್ದಿಯನ್ನು ದೃಢಪಡಿಸಿದ ಭಾರ್ತಿ ವಾಲ್ಮಾರ್ಟ್ ನ ವಕ್ತಾರರು, " ನಮ್ಮ ಸಂಸ್ಥೆ ತನಿಖೆಗೆ ಸಂಪೂರ್ಣ ಸಹಕಾರ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ. ತನಿಖೆ ಚಾಲ್ತಿಯಲ್ಲಿರುವುದರಿಂದ ನಾವು ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ' ಎಂದಿದ್ದಾರೆ.
ಭಾರತ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ವಾಲ್ಮಾರ್ಟ್ ಸಂಸ್ಥೆ ಭ್ರಷ್ಟಾಚರದಲ್ಲಿ ತೊಡಗಿ ಎಂದು ಆರೋಪಗಳು ಕೇಳಿ ಬಂದಿತ್ತು.
ಭಾರತದಲ್ಲಿ ವಾಲ್ಮಾರ್ಟ್ ಮಳಿಗೆ ಆರಂಭ ತಡವಾಗಬಹುದು ಆದರೆ, ನಿಲ್ಲಿಸಲು ಸಾಧ್ಯವಿಲ್ಲ. ಭಾರತ ಅದ್ಭುತ ಅವಕಾಶ ಒದಗಿಸುವ ಉತ್ತಮ ಮಾರುಕಟ್ಟೆ ಹೊಂದಿದೆ. ರೈತ ಹಾಗೂ ಮಧ್ಯಮ ಮತ್ತು ಕೆಳ ಕ್ರಮಾಂಕದ ಜೀವನ ಶೈಲಿ ಹೊಂದಿರುವವರಿಗೆ ಎಫ್ ಡಿಐ ಉತ್ತಮ ಫಲಿತಾಂಶ ಒದಗಿಸಬಲ್ಲದು ಎಂದು ಭಾರ್ತಿ ವಾಲ್ಮಾರ್ಟ್ ಸಂಸ್ಥೆ ಹೇಳಿದೆ.
ಭಾರ್ತಿ ಹಾಗೂ ವಾಲ್ಮಾರ್ಟ್ ಸಂಸ್ಥೆ ಭಾರತದಲ್ಲಿ 50:50 ರ ಅನುಪಾತದಲ್ಲಿ ರೀಟೈಲ್ ಮಳಿಗೆ ಆರಂಭಿಸಲು ಮುಂದಾಗಿದೆ.
ಯುಎಸ್ ನ Foreign Corrupt Practices Act (FCPA) ನ ಅಡಿಯಲ್ಲಿ ಪ್ರಕರಣ ಎದುರಿಸುತ್ತಿರುವ ವಾಲ್ಮಾರ್ಟ್ ಗೆ ಭಾರತ ಪ್ರವೇಶಕ್ಕೆ ವಿಘ್ನ ಉಂಟಾಗಿದೆ. ಭಾರತ ಅಲ್ಲದೆ ಬ್ರೆಜಿಲ್, ಚೀನಾ ದೇಶದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ವಾಲ್ಮಾರ್ಟ್ ಅಧಿಕಾರಿಗಳು ಎದುರಿಸುತ್ತಿದ್ದಾರೆ.ಮೆಕ್ಸಿಕೋ ದೇಶದಲ್ಲೂ ವಾಲ್ಮಾರ್ಟ್ ಮೇಲೆ ತನಿಖೆ ನಡೆಯುತ್ತಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications