ನೋಟು ನಿಷೇಧದಿಂದ ಹಬ್ಬಿರುವ ವದಂತಿ - ಸತ್ಯಾಂಶಗಳೇನು ಗೊತ್ತೆ?
ನೋಟು ರದ್ದತಿ ಹಲವು ಧನಾತ್ಮಕ ಹಾಗೂ ನಕಾರಾತ್ಮಕ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕರು ನೋಟು ವಿನಿಮಯ/ಬದಲಾವಣೆ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದು, ಕೆಲ ಜನರು ಅಂತೆ ಕಂತೆಯ ಕಟ್ಟುಕತೆ ಹಾಗೂ ವದಂತಿಗಳನ್ನು ಹರಡಿಸುತ್ತಿದ್ದಾರೆ.
ನೋಟು ರದ್ದತಿ ಹಲವು ಧನಾತ್ಮಕ ಹಾಗೂ ನಕಾರಾತ್ಮಕ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕರು ನೋಟು ವಿನಿಮಯ/ಬದಲಾವಣೆ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದು, ಕೆಲ ಜನರು ಅಂತೆ ಕಂತೆಯ ಕಟ್ಟುಕತೆ ಹಾಗೂ ವದಂತಿಗಳನ್ನು ಹರಡಿಸುತ್ತಿದ್ದಾರೆ. ಭಾರತ ಸರ್ಕಾರ ಈಗಾಗಲೇ ಇಂತಹ ವದಂತಿಗಳಿಗೆ ಕಿವಿಗೊಡದೆ ಜಾಗೃತಿ ಮೂಡಿಸಲು ವಿನಂತಿಸಿದೆ. ನೋಟು ನಿಷೇಧದಿಂದ ದೇಶದ ಮೇಲಾಗುವ ಪರಿಣಾಮಗಳೇನು?
ಈಗಾಗಲೇ ದೇಶದಾದ್ಯಂತ ಹಬ್ಬಿರುವ ಕಟ್ಟುಕತೆ/ವದಂತಿ ಹಾಗೂ ಸತ್ಯಾಂಶಗಳು ಏನು ಎಂಬುದನ್ನು ನೋಡೋಣ...
1. ಸಣ್ಣ ನೋಟುಗಳ ನಿಷೇಧ
ವದಂತಿ: ಪ್ರಧಾನಿ ದೇಶವನ್ನು ಉದ್ದೇಶಿಸಿ ರೂ. 50, 100 ಮುಖಬೆಲೆಯ ನೋಟುಗಳ ರದ್ದತಿ ಪ್ರಕಟಿಸಲಿದ್ದಾರೆ.
ಸತ್ಯಾಂಶ: ಆಧಾರರಹಿತವಾದ್ದು, ಪ್ರಸ್ತುತ ರೂ. 50೦, 100೦ ನೋಟುಗಳ ನಿಷೇಧದ ಹೊರತಾಗಿ ಬೇರೆ ಯಾವುದೇ ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಉದ್ದೇಶ ಇಲ್ಲ.
2. ಮಾಹಿತಿ ಸೋರಿಕೆ
ವದಂತಿ: ನೋಟುಗಳ ನಿಷೇಧದ ಮುಂಚೆಯೇ ಕೆಲ ಕಾರ್ಪೊರೇಟ್ ಸಂಸ್ಥೆ ಮತ್ತು ಪಕ್ಷದ ಸದಸ್ಯರಿಗೆ ಈ ವಿಷಯ ತಿಳಿದಿತ್ತು.
ಸತ್ಯಾಂಶ: ಸಂಪೂರ್ಣ ರಹಸ್ಯ ಕಾಪಾಡಿಕೊಳ್ಳಲಾಗಿತ್ತು. ಸೋರಿಕೆ ಹಿಂದೆ ಸರ್ಕಾರದ ಯಾವುದೇ ಸದುದ್ದೇಶ ಇರಲಿಲ್ಲ.
3. ಲಾಭಕ್ಕಿಂತ ವೆಚ್ಚ ಹೆಚ್ಚು
ವದಂತಿ: ಜನರಿಗಾಗುವ ಪ್ರಯೋಜನಕ್ಕಿಂತ ಅನುಷ್ಠಾನ ವೆಚ್ಚವೇ ಹೆಚ್ಚು.
ಸತ್ಯಾಂಶ: ಕಪ್ಪುಹಣ, ಖೋಟಾ ನೋಟು, ಭ್ರಷ್ಟಾಚಾರದಿಂದ ದೇಶದ ಆರ್ಥಿಕತೆ ಹದಗೆಡುತ್ತಿದೆ. ಶ್ರೀಮಂತರಿಗಿಂತ ಮಧ್ಯಮ ವರ್ಗ ಮತ್ತು ಬಡವರಿಗೆ ಈ ಯೋಜನೆಯ ಅನುಷ್ಠಾನದಿಂದ ಪ್ರಯೋಜನ ಹೆಚ್ಚು.
4. ಬ್ಲಾಕ್ ಮನಿ
ವದಂತಿ: ನೋಟುಗಳ ನಿಷೇಧ ಕೇವಲ ಪ್ರದರ್ಶನಕ್ಕಾಗಿ ಹೋರತು ಜನ ಕಪ್ಪುಹಣ ಇರಿಸಿಕೊಳ್ಳಲು ಬೇರೆ ಮಾರ್ಗಗಳನ್ನು ಅನುಸರಿಸುತ್ತಾರೆ. ಈಗಾಗಲೇ ಕೈಗಾರಿಕೆಗಳು ಮತ್ತು ಕಂಪನಿಗಳು ಕಪ್ಪುಹಣ ಭದ್ರತೆಗಾಗಿ ಬೇರೆ ಮಾರ್ಗಗಳಿಗಾಗಿ ಯೋಜನೆ ರೂಪಿಸುತ್ತಿವೆ.
ಸತ್ಯಾಂಶ: ಸಂಬಂಧಪಟ್ಟ ಏಜೆನ್ಸಿ, ಇಲಾಖೆಗಳು ಅವರ ಮೇಲೆ ಕಣ್ಣಿಡುತ್ತವೆ. ಬೇನಾಮಿ ವ್ಯವಹಾರ ಕಾಯಿದೆ ತಿದ್ದುಪಡಿಯಾಗಿದ್ದು, ಕಪ್ಪುಹಣ ಪರಿಕ್ಷೀಸಲು ವಿದೇಶಿ ಸರ್ಕಾರಗಳೊಂದಿಗೆ ಒಪ್ಪಂದ ಆಗಿದೆ.
5. ಚಿಪ್ ಇಲ್ಲ
ವದಂತಿ: ಹೊಸ ನೋಟುಗಳಲ್ಲಿ ಚಿಪ್ ಇದ್ದು, ಪ್ರತಿಯೊಬ್ಬರ ಬಳಿ ಇರುವ ಆಸ್ತಿ, ಕಪ್ಪುಹಣವನ್ನು ಪತ್ತೆಹಚ್ಚಲಾಗುವುದು.
ಸತ್ಯಾಂಶ: ಹೊಸ ನೋಟುಗಳನ್ನು ಯಾವುದೇ ತರಹದ ಚಿಪ್ ತಂತ್ರಾಂಶ ಅಳವಡಿಸಲಾಗಿಲ್ಲ.
6. ಕಳಪೆ ಗುಣಮಟ್ಟ
ವದಂತಿ: ರೂ. 2000 ಮುಖಬೆಲೆಯ ನೋಟುಗಳು ಕಳಪೆ ಮಟ್ಟದಾಗಿದ್ದು, ಬಣ್ಣ ಕಳೆದುಕೊಳ್ಳುತ್ತದೆ.
ಸತ್ಯಾಂಶ: ಕರೆನ್ಸಿ ನೋಟು ಉತ್ಕೃಷ್ಟ ಮಟ್ಟದ ಮುದ್ರಣ ಮತ್ತು ಭದ್ರತಾ ವೈಶಿಷ್ಟ್ಯತೆ ಹೊಂದಿದೆ.
7. ಬ್ಯಾಂಕ್ ಲಾಕರ್ಸ್, ಚಿನ್ನಾಭರಣ ವಶ
ವದಂತಿ: ಮುಂದಿನ ಹಂತದಲ್ಲಿ ಬ್ಯಾಂಕ್ ಲಾಕರ್ಸ್ ಸೀಲ್, ಚಿನ್ನಾಭರಣ, ವಜ್ರ ಮಳಿಗೆಗಳನ್ನು ವಶಪಡಿಸಿ ಮುದ್ರೆ ಒತ್ತಲಾಗುವುದು.
ಸತ್ಯಾಂಶ: ಬ್ಯಾಂಕ್ ಲಾಕರ್ಸ್ ಸೀಲ್ ಮಾಡುವ ಅಥವಾ ಚಿನ್ನಾಭರಣಗಳನ್ನು ವಶಪಡಿಸುವ ಯಾವುದೇ ಕ್ರಮ ಇಲ್ಲ.