ರೂ. 453 ಕೋಟಿ ಪಾವತಿಸದೆ ಹೋದರೆ ಅನಿಲ್ ಅಂಬಾನಿಗೆ ಜೈಲು
ಉದ್ಯಮಿ ಅನಿಲ್ ಅಂಬಾನಿಗೆ ಎರಿಕ್ಸನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಭಾರೀ ಹಿನ್ನಡೆಯಾಗಿದೆ.
ಉದ್ಯಮಿ ಅನಿಲ್ ಅಂಬಾನಿಗೆ ಎರಿಕ್ಸನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಭಾರೀ ಹಿನ್ನಡೆಯಾಗಿದೆ.
ಅನಿಲ್ ಅಂಬಾನಿ ಹಾಗೂ ಇಬ್ಬರು ನಿರ್ದೇಶಕರು ಎರಿಕ್ಸನ್ ಇಂಡಿಯಾಗೆ ರೂ. 453 ಕೋಟಿ ನೀಡಬೇಕಿದ್ದು, ನಾಲ್ಕು ವಾರಗಳಲ್ಲಿ ಹಣವನ್ನು ಪಾವತಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ನಾಲ್ಕು ವಾರಗಳಲ್ಲಿ ಹಣ ಹಿಂದಿರುಗಿಸಿ ಇಲ್ಲದಿದ್ದರೆ ಜೈಲು ಶಿಕ್ಷೆ ಅನುಭವಿಸಲು ಸಿದ್ದರಾಗಿ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಆದೇಶ ಮಾಡಿದೆ.
ಎರಿಕ್ಸನ್ ಪ್ರಕರಣದಲ್ಲಿ ಅನಿಲ್ ಅಂಬಾನಿ ಹಾಗೂ ಇನ್ನಿಬ್ಬರು ನಿರ್ದೇಶಕರು ನ್ಯಾಯಾಂಗ ನಿಂದನೆ ಮಾಡಿರುವುದು ಸ್ಪಷ್ಟವಾಗಿದೆ. ನಾಲ್ಕು ವಾರದಲ್ಲಿ ಹಣ ಪಾವತಿ ಮಾಡದೆ ಹೋದರೆ ಪ್ರತಿಯೊಬ್ಬರು ರೂ. 1 ಕೋಟಿ ದಂಡ ಹಾಗು 1 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ಕೋರ್ಟ್ ಹೇಳಿದೆ.
ರಿಲಯನ್ಸ್ ಕಮ್ಯುನಿಕೇಷನ್ಸ್ಸಂಸ್ಥೆ ಉದ್ದೇಶಪೂರ್ವಕವಾಗಿಯೇ ಹಣ ಪಾವತಿಸಿಲ್ಲ. ಈ ಹಿಂದೆ ಸೂಚನೆ ನೀಡಲಾಗಿತ್ತಾದರೂ ಪಾಲಿಸಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಹೇಳಿದೆ. ರಫೇಲ್ ಜೆಟ್ ಒಪ್ಪಂದಕ್ಕೆ ರಿಲಯನ್ಸ್ ಗ್ರೂಪ್ ಬಳಿ ಹಣವಿದೆ. ಆದರೆ ಸಾಲ ತೀರಿಸಲು ಹಣವಿಲ್ಲವೆಂದು ಅನಿಲ್ ಅಂಬಾನಿ ಸುಳ್ಳು ಹೇಳ್ತಿದ್ದಾರೆಂದು ಎರಿಕ್ಸನ್ ಆರೋಪ ಮಾಡಿತ್ತು.
2014 ರಲ್ಲಿ ಎರಿಕ್ಸನ್ ಇಂಡಿಯಾ RCom ನೊಂದಿಗೆ ಏಳು ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಿತ್ತು. ಕಳೆದ ವರ್ಷ ಎರಿಕ್ಸನ್ ಅನಿಲ್ ಅಂಬಾನಿ ಕಂಪೆನಿ ವಿರುದ್ಧ ರೂ. 550 ಕೋಟಿ ಬಾಕಿ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು
The other two directors are Reliance Telecom chairman Satish Seth and Reliance Infratel chairperson Chhaya Virani https://t.co/Cy8c6pQTGq
— ANI (@ANI) February 20, 2019