ಭಾರತದ ಷೇರು ಮಾರುಕಟ್ಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ (ಬಿಎಸ್ ಇ) ಅತಿ ಹೆಚ್ಚು ಕಂಪೆನಿಗಳು ಲಿಸ್ಟಿಂಗ್ ಆಗಿರುವ, ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ವಿನಿಮಯ ಕೇಂದ್ರ. ಇನ್ನು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (ಎನ್ ಎಸ್ ಇ) ಅತಿ ಹೆಚ್ಚು ವಹಿವಾಟು ದಾಖಲಿಸುತ್ತಿರುವ ವಿನಿಮಯ ಕೇಂದ್ರವಾಗಿದೆ.
ಇತ್ತೀಚೆಗೆ ' ಒನ್ ನೇಷನ್ ಒನ್ ಎಲೆಕ್ಷನ್', ' ಒನ್ ರಾಂಕ್ ಒನ್ ಪೆನ್ಷನ್' (ಒಆರ್ ಒಪಿ) ಎಂಬುದು ಚರ್ಚೆಯಲ್ಲಿ ಇರುವಾಗಲೇ ತಾಂತ್ರಿಕತೆಯ ಪರಿಣಾಮವಾಗಿ ಈಗ ' ಒನ್ ನೇಷನ್ ಒನ್ ಸ್ಟಾಕ್ ಎಕ್ಸ್ ಚೇಂಜ್' ಎನ್ನುವತ್ತ ನಮ್ಮ ದೇಶ ಸಾಗುತ್ತಿರುವಂತೆ ಕಾಣುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಜುಲೈ ಹದಿನೈದರಿಂದ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಗಳ ಮಧ್ಯೆ ಇಂಟರೊಪರಬಿಲಿಟಿ (Interoperability) ವ್ಯವಸ್ಥೆಯನ್ನು ಜಾರಿಗೊಳಿಸಲಿದೆ.
ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಪ್ರತ್ಯೇಕವಾಗಿ ಟಿಕೆಟ್ ಪಡೆದು ಪ್ರಯಾಣಿಸುವ ಈಗಿನ ಪದ್ಧತಿಯ ಬದಲು ಬಸ್ ಪಾಸ್ ಪಡೆದು, ಯಾವ ಬಸ್ಸಿನಲ್ಲಾದರೂ ಪ್ರಯಾಣಿಸುವ ಅರ್ಹತೆ, ಮಾನ್ಯತೆ ಪಡೆಯುವಂತೆ, ಯಾವ ವಿನಿಮಯ ಕೇಂದ್ರದಲ್ಲಾದರೂ ಖರೀದಿಸಿ ಮತ್ತೊಂದರಲ್ಲಿ ಮಾರಾಟ ಮಾಡಬಹುದಾದ ಅವಕಾಶವನ್ನು ಕಲ್ಪಿಸುವ ಈ ವಿಧವು ಎಷ್ಟರ ಮಟ್ಟಿಗೆ ಸಾಮಾನ್ಯ ಹೂಡಿಕೆದಾರರಿಗೂ ಪ್ರಯೋಜನಕಾರಿ ಎಂಬುದನ್ನು ಕಾದುನೋಡಬೇಕಷ್ಟೆ.

ಮುಖ್ಯವಾಗಿ ಎಷ್ಟೇ ಸೌಕರ್ಯಗಳನ್ನು ಒದಗಿಸಿದರೂ ನಿರ್ಧರಿಸುವ ಚೈತನ್ಯ, ಕೌಶಲಗಳು ನಮ್ಮ ಮನಸ್ಥಿತಿಯಲ್ಲಿ ಇರಬೇಕು. ಆಗಲೇ ಯಶಸ್ಸು ಕಾಣಲು ಸಾಧ್ಯ.
ಏನಿದು ಇಂಟರೊಪರಬಿಲಿಟಿ?:
ಸಂಸ್ಥೆಗಳ ನಡುವೆ ಅನಿಯಮಿತವಾದ ಮಟ್ಟದಲ್ಲಿ ಸಂಪನ್ಮೂಲವನ್ನು ಹಂಚಿಕೊಳ್ಳುವುದೇ ಈ ಇಂಟರೊಪರಬಿಲಿಟಿ. ಇದು ಮಾಹಿತಿಯಾಗಲಿ, ತಂತ್ರಜ್ಞಾನವಾಗಲಿ ಅಥವಾ ಅವಕಾಶಗಳಾಗಲಿ ವಿನಿಮಯ ಮಾಡಿಕೊಳ್ಳುವ ಪದ್ಧತಿ ಇದಾಗಿದೆ. ಷೇರುಪೇಟೆಯ ದಿಗ್ಗಜ ಸಂಸ್ಥೆಗಳಾದ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಗಳ ನಡುವೆ ಇಂತಹದೊಂದು ಇಂಟರೊಪರಬಿಲಿಟಿ ವ್ಯವಸ್ಥೆ ಜಾರಿಯಾಗುತ್ತಿರುವುದು ತಾಂತ್ರಿಕತೆಯ ಪ್ರಭಾವ ಬಳಕೆಯಾಗುತ್ತಿರುವುದಕ್ಕೆ ಉತ್ತಮ ಉದಾಹರಣೆಯಾಗಿದೆ.
ಷೇರು ವಿನಿಮಯ ಕೇಂದ್ರಗಳು, ಡಿಪಾಜಿಟರಿಸ್, ಚುಕ್ತಾ ಗೃಹಗಳು (Clearing Corporations) ಸೇರಿ ಪೇಟೆಯ ಮೂಲಸೌಕರ್ಯಗಳ ಸಂಸ್ಥೆಗಳಾಗಿವೆ. ಇದುವರೆಗೂ ವಿವಿಧ ವಿನಿಮಯ ಕೇಂದ್ರಗಳು ತಮ್ಮದೇ ಅದ ಚುಕ್ತಾ ಗೃಹಗಳ ಮೂಲಕ ವಹಿವಾಟನ್ನು ಚುಕ್ತಾ ಮಾಡುತ್ತಿವೆ. ಷೇರು ವಿನಿಮಯ ಕೇಂದ್ರಗಳ ವೈಯಕ್ತಿಕ ಗುರುತುಗಳನ್ನು ಗಮನಿಸಬಹುದಾದ ರೀತಿಯಲ್ಲಿ ಚಟುವಟಿಕೆಗಳನ್ನು ನಡೆಸಿ, ಉಳಿಸಿಕೊಂಡಿವೆ.
ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಗಳ ನಡುವೆ ಯಾವುದೇ ಸಂಬಂಧವಿಲ್ಲದ ರೀತಿಯಲ್ಲಿ ಕಳೆದೆರಡು ದಶಕಗಳಿಗಿಂತ ಹೆಚ್ಚಿನ ಸಮಯದಿಂದ ಕಾರ್ಯ ನಿರ್ವಹಿಸುತ್ತಿವೆ. ವಿವಿಧ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟು ನಡೆಸಲು ಆಯಾ ವಿನಿಮಯ ಕೇಂದ್ರದಿಂದ ಪ್ರತ್ಯೇಕ ಮಾನ್ಯತೆಯನ್ನು ಪಡೆಯಬೇಕಾಗಿದೆ.
ಈ ಪದ್ಧತಿಯ ಕಾರಣ ಕೆಲವು ಬಾರಿ ಷೇರಿನ ಬೆಲೆಗಳು ಹೆಚ್ಚಿನ ವ್ಯತಾಸವನ್ನು ಹೊಂದಿರುತ್ತವೆ. ಈ ಪರಿಸ್ಥಿತಿಯ ಲಾಭ ಪಡೆಯಲು ಒಂದು ಪ್ರತ್ಯೇಕವಾದ ಸಮೂಹವು ಇರುತ್ತದೆ. ಈ ವಿಧದ ಚಟುವಟಿಕೆಗೆ 'ಆರ್ಬಿಟ್ರೇಜ್' ಎನ್ನುವರು. ಬೇರೆ ಬೇರೆ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟು ನಡೆಸಲು ವಹಿವಾಟುದಾರರು, ಬ್ರೋಕರ್ ಗಳು ಹೆಚ್ಚಿನ ಬಂಡವಾಳ, ಮಾರ್ಜಿನ್ ಹಣ ಮುಂತಾದವುಗಳ ಕಡೆ ಹೆಚ್ಚು ಗಮನ ಹರಿಸಬೇಕಾಗುವುದು.
ಹಂತ ಹಂತವಾಗಿ ಜಾರಿಗೊಳಿಸಲು ಶಿಫಾರಸು:
2013ರಲ್ಲಿ ಕೆ.ವಿ. ಕಾಮತ್ ಅವರ ನೇತೃತ್ವದ ಸಮಿತಿಯ ಶಿಫಾರಸಿನಂತೆ ಇಂಟರೊಪರಬಿಲಿಟಿ ಪರಿಶೀಲಿಸಲು 2017 ರಲ್ಲಿ ಸೆಕಂಡರಿ ಮಾರ್ಕೆಟ್ ಅಡ್ವೈಸರಿ ಕಮಿಟಿಯು ರಿಸ್ಕ್ ಮ್ಯಾನೇಜ್ ಮೆಂಟ್, ಟೆಕ್ನಾಲಜಿ, ಫೈನಾನ್ಸ್ ಮತ್ತು ಟ್ಯಾಕ್ಸೆಷನ್ ಗಳ ಪರಿಶೀಲಿಸಲು ಮೂರು ಪ್ರತ್ಯೇಕ ಸಬ್ ಗ್ರೂಪ್ ಗಳನ್ನು ರಚಿಸಲಾಯಿತು.
ಅವು ನೀಡಿದ ವರದಿಯನ್ನು 2018 ರ ಮಾರ್ಚ್ ನಲ್ಲಿ ಸೆಕಂಡರಿ ಮಾರ್ಕೆಟ್ ಅಡ್ವೈಸರಿ ಕಮಿಟಿಯು ಹಂತ ಹಂತವಾಗಿ ಜಾರಿಗೊಳಿಸಲು ಶಿಫಾರಸು ಮಾಡಿತು. ಅಂತಿಮವಾಗಿ ಇಂಟರೊಪರಬಿಲಿಟಿ ಜಾರಿಗೊಳಿಸಲು ಮುಹೂರ್ತ ನಿಶ್ಚಯವಾಗಿದ್ದು, ಈ ಹೊಸ ಪದ್ಧತಿಯ ಪ್ರಕಾರ ಗ್ರಾಹಕರು, ವಹಿವಾಟುದಾರರು ಒಂದು ವಿನಿಮಯ ಕೇಂದ್ರದಲ್ಲಿ ಖರೀದಿ ಮಾಡಿದ್ದನ್ನು ಅದೇ ದಿನ ಮತ್ತೊಂದು ವಿನಿಮಯ ಕೇಂದ್ರದಲ್ಲಿ ಮಾರಾಟ ಮಾಡಬಹುದಾಗಿದೆ.
ಇದು ಜುಲೈ ಒಂದರಿಂದ ಜಾರಿಯಾಗಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಇದನ್ನು ಜುಲೈ ಹದಿನೈದಕ್ಕೆ ಮುಂದೂಡಲಾಗಿದೆ. ಇಂಟರೊಪರಬಿಲಿಟಿ ವ್ಯವಸ್ಥೆಯನ್ನು ವಿಶ್ಲೇಷಿಸಬೇಕೆಂದರೆ ಒಂದು ವಿಧದಲ್ಲಿ 'ಆರ್ಬಿಟ್ರೇಜ್' ಚಟುವಟಿಕೆಯನ್ನು ಮೊಟಕುಗೊಳಿಸಿದೆ ಎಂದರೆ ಮತ್ತೊಂದೆಡೆ ಕೇವಲ ಕೆಲವೇ ಕೆಲವರಿಗೆ ಸೀಮಿತವಾಗಿದ್ದ 'ಆರ್ಬಿಟ್ರೇಜ್' ಅವಕಾಶ ಈಗ ಎಲ್ಲರಿಗೂ ಲಭ್ಯವಾಗುವಂತಿದೆ ಎಂದು ಮತ್ತೊಂದು ವಿಧದಲ್ಲಿ ವಿಶ್ಲೇಷಿಸಬಹುದು.
ಆದರೆ, ಪೇಟೆಯು ಒದಗಿಸುವ ವಿಭಿನ್ನ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ವಹಿವಾಟಿನ ಗುರಿಯಾಗಿರಬೇಕು.
More From GoodReturns

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications