BSNLನ ಸ್ವಯಂ ನಿವೃತ್ತಿ ಯೋಜನೆ (VRS) ಪ್ಯಾಕೇಜ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ ಒಂದು ವಾರದೊಳಗೆ 70 ಸಾವಿರ BSNL ಉದ್ಯೋಗಿಗಳು VRS ಆಯ್ಕೆ ಮಾಡಿಕೊಂಡಿದ್ದಾರೆ.
ಒಂದೂವರೆ ಲಕ್ಷ ಉದ್ಯೋಗಿಗಳನ್ನ ಹೊಂದಿರುವ BSNLನಲ್ಲಿ, ಸುಮಾರು 1 ಲಕ್ಷ ಉದ್ಯೋಗಿಗಳು ಸ್ವಯಂ ನಿವೃತ್ತಿ ಯೋಜನೆಗೆ ಅರ್ಹರಾಗಿದ್ದಾರೆ. ಈ ಯೋಜನೆ ಆಯ್ಕೆ ಮಾಡಿಕೊಳ್ಳಲು ಡಿಸೆಂಬರ್ 3 ಕೊನೆಯ ದಿನಾಂಕವಾಗಿದೆ. ಈಗಾಗಲೇ 70 ಸಾವಿರ ಜನರು ಸ್ವಯಂ ಪ್ರೇರಿತರಾಗಿ VRS ಆಯ್ಕೆ ಮಾಡಿಕೊಂಡಿದ್ದಾರೆ ಎಂದು BSNL ಅಧ್ಯಕ್ಷ ಮತ್ತು ಎಂಡಿ ಪಿ.ಕೆ ಪುರ್ವಾರ್ ಪಿಟಿಐಗೆ ತಿಳಿಸಿದ್ದಾರೆ.

BSNL ಒಟ್ಟಾರೆಯಾಗಿ 77 ಸಾವಿರ ಉದ್ಯೋಗಿಗಳಿಂದ VRS ಪಡೆಯಬೇಕೆಂದು ಗುರಿ ಹಾಕಿಕೊಂಡಿತ್ತು. ಇದರಿಂದ ವರ್ಷಕ್ಕೆ ೭ ಸಾವಿರ ಕೋಟಿ ಉಳಿತಾಯಕ್ಕೆ ಯೋಜನೆ ಮಾಡಿಕೊಂಡಿದೆ. ಇದಕ್ಕೂ ಮೊದಲು ಮುಂಬೈ ಮತ್ತು ದೆಹಲಿಯಲ್ಲಿ ಸೇವೆಗಳನ್ನು ಒದಗಿಸುವ ಎಂಟಿಎನ್ಎಲ್ ಅನ್ನು BSNL ನೊಂದಿಗೆ ಸಂಯೋಜಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಎಂಟಿಎನ್ಎಲ್ ಕೂಡ ತನ್ನ ಉದ್ಯೋಗಿಗಳಲ್ಲಿ VRS ಆಯ್ಕೆಗೆ ಅವಕಾಶ ನೀಡಿದ್ದು, ಡಿಸೆಂಬರ್ 3 ಕೊನೆಯ ದಿನಾಂಕವಾಗಿದೆ.
BSNL ವಿಆರ್ ಎಸ್ ಯೋಜನೆಗೆ ಯಾರು ಅರ್ಹರು?
ಎಲ್ಲ ರೆಗ್ಯುಲರ್ ಮತ್ತು ಕಾಯಂ ಬಿಎಸ್ಎನ್ಎಲ್ ಉದ್ಯೋಗಿಗಳು ಅರ್ಹರು. ಬೇರೆ ಸಂಸ್ಥೆಗಳಿಗೆ ನಿಯೋಜನೆ ಮೇಲೆ ತೆರಳಿದವರು ಅಥವಾ ನಿಯೋಜನೆ ಮೇಲೆ ಬಿಎಸ್ಎನ್ಎಲ್ ನ ಆಚೆಗೆ ಪೋಸ್ಟ್ ಆಗಿರುವವರು, 50 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಈ ಯೋಜನೆಗೆ ಅರ್ಹರು.
ವಿಆರ್ ಎಸ್ ಪರಿಹಾರ ಮೊತ್ತ ಲೆಕ್ಕಾಚಾರ ಹೇಗೆ?
ಇನ್ನು VRS ನಲ್ಲಿ ಎಕ್ಸ್ ಗ್ರೇಷಿಯಾ ಹೇಗೆ ಲೆಕ್ಕ ಹಾಕುತ್ತಾರೆ ಅಂದರೆ, ಈಗಾಗಲೇ ಪೂರ್ಣಗೊಳಿಸಿರುವ ಸೇವೆಯ ವರ್ಷಗಳಿಗೆ ಒಂದು ವರ್ಷಕ್ಕೆ 35 ದಿನದಂತೆ ಹಾಗೂ ಬಾಕಿ ಇರುವ ಸೇವೆಗೆ ವರ್ಷಕ್ಕೆ 25 ದಿನದಂತೆ ವೇತನ ಲೆಕ್ಕ ಹಾಕಿ ನೀಡಲಾಗುತ್ತದೆ. ಉದಾಹರಣೆಗೆ ಇಪ್ಪತ್ತೈದು ವರ್ಷ ಸೇವೆ ಪೂರ್ಣಗೊಳಿಸಿ, ಇನ್ನು ಹತ್ತು ವರ್ಷ ಸೇವೆ ಬಾಕಿ ಇದ್ದಲ್ಲಿ ಲೆಕ್ಕಾಚಾರ ಹೀಗಿರುತ್ತದೆ. ಪೂರ್ಣಗೊಂಡ ವರ್ಷಗಳಿಗೆ 25X35= 875 ಹಾಗೂ ಬಾಕಿ ಇರುವ ವರ್ಷಗಳಿಗೆ 10X25= 250 ಮತ್ತು ಎರಡೂ ಒಟ್ಟು ಮಾಡಿದರೆ 1125 ದಿನಗಳ ವೇತನ ದೊರೆಯುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications