ವಿಶ್ವದಲ್ಲಿ ಸದ್ಯ ಅತಿ ಹೆಚ್ಚು ಕೊರೊನಾವೈರಸ್ ಸೋಂಕಿಗೆ ತುತ್ತಾಗಿರುವ ರಾಷ್ಟ್ರ ಅಮೆರಿಕಾ. ವಿಶ್ವದ ದೊಡ್ಡಣ್ಣನ ಸ್ಥಿತಿ ಚಿಂತಾಜನಕವಾಗಿದ್ದು, ಲಕ್ಷಾಂತರ ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಹಣವೂ ಇಲ್ಲದೆ ಊಟಕ್ಕೆ ಪರಡಾಡುವ ಪರಿಸ್ಥಿತಿಯು ಎದುರಾಗಿದೆ.
ಅಮೆರಿಕಾ ನಿರುದ್ಯೋಗಿಗಳಿಗೆ ನೆರವಾಗಿರುವ ಇ ಕಾಮರ್ಸ್ ದಿಗ್ಗಜ ಅಮೆಜಾನ್ ಸಂಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಅಮೆರಿಕಾ ಆಹಾರ ಬ್ಯಾಂಕ್ಗಳಿಗೆ 100 ಮಿಲಿಯನ್ ಡಾಲರ್( ಭಾರತದ ರುಪಾಯಿಗಳಲ್ಲಿ ಸುಮಾರು 764 ಕೋಟಿ) ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದಿರುವ ಬೇಜೋಸ್ ' ದೇಶದ ಆಹಾರ ಬ್ಯಾಂಕುಗಳ ಮೇಲೆ ಆಹಾರಕ್ಕಾಗಿ ಅವಲಂಭಿಸಿರುವವರಿಗೆ ಊಟ ಒದಗಿಸಲು 100 ಮಿಲಿಯನ್ ಡಾಲರ್ ಫೀಡಿಂಗ್ ಅಮೆರಿಕಾಗೆ(ಆಹಾರ ಬ್ಯಾಂಕ್) ನೀಡುವುದಾಗಿ' ತಿಳಿಸಿದ್ದಾರೆ.

"ಫೀಡಿಂಗ್ ಅಮೆರಿಕಾ ಹಣವನ್ನು ತಮ್ಮ ರಾಷ್ಟ್ರೀಯ ಆಹಾರ ಬ್ಯಾಂಕುಗಳು ಮತ್ತು ಆಹಾರ ಪ್ಯಾಂಟ್ರಿಗಳಿಗೆ ತ್ವರಿತವಾಗಿ ವಿತರಿಸುತ್ತದೆ. ಇದರಿಂದ ಅಗತ್ಯವಿರುವ ಅಸಂಖ್ಯಾತ ಕುಟುಂಬಗಳು ಆಹಾರವನ್ನು ಪಡೆಯುತ್ತದೆ" ಎಂದು ಬೇಜೋಸ್ ಶುಕ್ರವಾರ ತಡರಾತ್ರಿ ಹೇಳಿದ್ದಾರೆ.
''ಅನೇಕ ರೆಸ್ಟೋರೆಂಟ್ಗಳು ಹೆಚ್ಚುವರಿ ಆಹಾರವನ್ನು ದಾನ ಮಾಡುತ್ತವೆ. ಆದರೆ ಸದ್ಯ ಲಾಕ್ಡೌನ್ನ ಈ ಸಮಯದಲ್ಲಿ, ರೆಸ್ಟೋರೆಂಟ್ಗಳನ್ನು ಮುಚ್ಚಲಾಗಿದೆ ಮತ್ತು ಹೆಚ್ಚುವರಿ ಆಹಾರದ ಪೂರೈಸುವ ವ್ಯವಸ್ಥೆಯು ಸ್ಥಗಿತಗೊಂಡಿವೆ. ಹೀಗಾಗಿ ಪೂರೈಕೆ ಕ್ಷೀಣಿಸುತ್ತಿರುವುದರಿಂದ, ಆಹಾರ ಬ್ಯಾಂಕ್ ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಿದೆ" ಎಂದು ಬೆಜೋಸ್ ಹೇಳಿದರು.
ಅಮೆರಿಕಾದಲ್ಲಿ ಕೊರೊನಾವೈರಸ್ನಿಂದಾಗಿ ಸುಮಾರು 6 ಮಿಲಿಯನ್ ಜನರು ಉದ್ಯೋಗ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ ಎನ್ನಲಾಗಿದೆ. ಈ ಕಷ್ಟದ ಸಮಯದಲ್ಲಿ ಲಕ್ಷಾಂತರ ಅಮೆರಿಕನ್ನರು ಆಹಾರ ಬ್ಯಾಂಕುಗಳತ್ತ ಮುಖ ಮಾಡುತ್ತಿದ್ದಾರೆ.
ಜೆಫ್ ಬೇಜೋಸ್ ನೀಡಿರುವ 764 ಕೋಟಿ ದೇಣಿಗೆ ಕುರಿತು ಕೆಲವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಇದು ಬೆಜೋಸ್ನ ಸುಮಾರು 120 ಶತಕೋಟಿ ಡಾಲರ್ ಮೌಲ್ಯದ ಸಂಪತ್ತು ಮತ್ತು ಆಸ್ತಿಗಳಲ್ಲಿನ .08 ಪರ್ಸೆಂಟ್ರಷ್ಟು ಮಾತ್ರ ಇದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications