ದೇಶದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ, ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮುಕೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ತನ್ನ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಜನವರಿ 19ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.
ಹಲವಾರು ಸೆಲೆಬ್ರಿಟಿಗಳು ಹಾಗೂ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಮುಕೇಶ್ ಅಂಬಾನಿಯ ಮನೆಯಾದ ಅಂಟಿಲಿಯಾದಲ್ಲಿ ಈ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ. ಈ ಹಿಂದೆ ಈ ಜೋಡಿಯು ಮೆಹೆಂದಿ ಸಮಾರಂಭವನ್ನು ಮಾಡಿದ್ದರು. ಇದರಲ್ಲಿ ರಾಧಿಕಾ ಮರ್ಚೆಂಟ್ ಅಬು ಜನಿ ಸಂದೀಪ್ ಕೋಸ್ಲಾ ಡಿಸೈನ್ ಮಾಡಿದ ಗುಲಾಬಿ ಬಣ್ಣದ ಲೆಹೆಂಗಾವನ್ನು ಧರಿಸಿದ್ದರು.
ಭರತನಾಟ್ಯ ತರಭೇತಿ ಪಡೆದಿರುವ ರಾಧಿಕಾ ಮರ್ಚೆಂಟ್ ಈ ಹಿಂದೆ ಮೆಹೆಂದಿ ವೇಳೆ ನೃತ್ಯವನ್ನು ಕೂಡಾ ಮಾಡಿದ್ದರು. ಅದಕ್ಕೂ ಮುನ್ನ ರಾಧಿಕಾ ಮರ್ಚೆಂಟ್ಗಾಗಿ ಅರಂಗೇತ್ರಂ ಕಾರ್ಯಕ್ರಮವನ್ನು ಮುಕೇಶ್ ಅಂಬಾನಿ ದಂಪತಿಗಳು ಆಯೋಜನೆ ಮಾಡಿದ್ದರು. ರಾಧಿಕ ಮರ್ಚೆಂಟ್ ಸುಮಾರು ಎಂಟು ವರ್ಷಗಳ ಕಾಲ ತನ್ನ ಗುರು ಭಾವನ ಠಾಕರ್ ಬಳಿ ಮುಂಬೈನ ಶ್ರೀ ನಿಭಾ ಆರ್ಟ್ಸ್ ಡ್ಯಾನ್ಸ್ ಅಕಾಡೆಮಿಯಲ್ಲಿ ಭರತನಾಟ್ಯ ಕಲಿತಿದ್ದಾರೆ.

ರೋಕಾ ಕಾರ್ಯಕ್ರಮ ಮಾಡಿಕೊಂಡಿದ್ದ ಜೋಡಿ
ಕಳೆದ ತಿಂಗಳು ರೋಕಾ ಕಾರ್ಯಕ್ರಮವನ್ನು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ರಾಜಸ್ಥಾನದ ನತದ್ವಾರದಲ್ಲಿರುವ ಶ್ರೀನಾಥಜಿ ದೇವಾಲಯದಲ್ಲಿ ಮಾಡಿಕೊಂಡಿದ್ದರು. ಬರೀ ತಮ್ಮ ಕುಟುಂಬದವರು ಮಾತ್ರ ಸೇರಿಕೊಂಡು ಈ ಸಮಾರಂಭವನ್ನು ನಡೆಸಿದ್ದರು. ಅದಾದ ಬಳಿಕ ಅಂಟಿಲಿಯಾದಲ್ಲಿ ಮನೆಯಲ್ಲಿ ಕಾರ್ಯಕ್ರಮವನ್ನು ಮುಕೇಶ್ ಅಂಬಾನಿ ಆಯೋಜಿಸಿದ್ದರು. ಆ ಕಾರ್ಯಕ್ರಮಕ್ಕೆ ಶಾರುಖ್ ಖಾನ್, ಅಲಿಯಾ ಭಟ್, ರಣ್ಬೀರ್ ಕಪೂರ್, ಜಾನ್ವಿ ಕಪೂರ್ ಮೊದಲಾದವರುಗಳು ಭಾಗಿಯಾಗಿದ್ದರು.
ರಾಧಿಕ ಮೆರ್ಚೆಂಟ್ ವ್ಯಾಪಾರ ಹಾಗೂ ಕ್ಲಾಸಿಕಲ್ ಡ್ಯಾನ್ಸ್ ಎರಡರಲ್ಲೂ ಹಿಡಿತವನ್ನು ಹೊಂದಿರುವ ಬಹು ಪ್ರತಿಭೆ ಹೊಂದಿರುವ ಯುವತಿ. ಡಿಸೆಂಬರ್ 18, 1994ರಲ್ಲಿ ಮುಂಬೈನಲ್ಲಿ ಜನಿಸಿದ ರಾಧಿಕ ಮರ್ಚೆಂಟ್, ವಿರೇನ್ ಹಾಗೂ ಶೈಲಾ ಮರ್ಚೆಂಟ್ರ ಪುತ್ರಿಯಾಗಿದ್ದಾರೆ. ಆಕೆಯ ತಂದೆ ಭಾರತದ ಪ್ರಮುಖ ಫಾರ್ಮಾ ಕಂಪನಿಗಳಲ್ಲಿ ಒಂದಾದ ಎನ್ಕೋರ್ ಹೆಲ್ತ್ಕೇರ್ನ ಸಿಇಒ ಆಗಿದ್ದಾರೆ. ಹಾಗೆಯೇ ಭಾರತದ ಶ್ರೀಮಂತ ಬಿಲಿಯನೇರ್ ಕೂಡಾ ಆಗಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications