ಭಾರತದಲ್ಲಿ ಅತಿ ದೊಡ್ಡ ಸಂಖ್ಯೆಯ ಸಾಗಾಟ ವಾಣಿಜ್ಯ ವಾಹನಗಳನ್ನು ಹೊಂದಿರುವ ವಿಆರ್ ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಹೊಸ ವಾಹನಗಳ ಖರೀದಿ ಮಾಡುವುದಿಲ್ಲ ಹಾಗೂ ರಿಪೇರಿ ವೆಚ್ಚದ ಕಾರಣಕ್ಕಾಗಿ ಹಳೆ ವಾಹನಗಳ ಬಳಕೆ ನಿಲ್ಲಿಸಲಿದೆ. ವಿಆರ್ ಎಲ್ ನಿಂದ ಐದು ಸಾವಿರ ವಾಹನಗಳ ನಿರ್ವಹಣೆ ಮಾಡಲಾಗುತ್ತದೆ. ಅದರಲ್ಲಿ ಟ್ಯಾಂಕರ್, ಕ್ರೇನ್ ಗಳು, ಬಸ್ ಗಳು ಒಳಗೊಂಡಿವೆ.
ಕಡಿಮೆ ಸಾಮರ್ಥ್ಯದ ಏಳುನೂರು ಟ್ರಕ್ ಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಸ್ಕ್ರಾಪ್ ಮಾಡಬಹುದಾಗಿದೆ ಎಂದು ಮುಖ್ಯ ಹಣಕಾಸು ಅಧಿಕಾರಿ ಸುನೀಲ್ ನಲವಡಿ ಸೋಮವಾರ ಕಾನ್ಫರೆನ್ಸ್ ಕಾಲ್ ನಲ್ಲಿ ತಿಳಿಸಿದ್ದಾರೆ. ವೆಚ್ಚಗಳು ಕಡಿಮೆ ಮಾಡಿ ಹಾಗೂ ಹೊಸ ಹೂಡಿಕೆಗಳನ್ನು ನಿಲ್ಲಿಸಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಲಾಭವನ್ನು ದಾಖಲಿಸುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.
ಕೊರೊನಾ ವೈರಾಣು ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಿಸಿದ್ದರಿಂದ ವಿಆರ್ ಎಲ್ ಕಾರ್ಯ ನಿರ್ವಹಣೆ ನಿಲ್ಲಿಸಿತ್ತು. ಆ ಕಾರಣಕ್ಕೆ ಜೂನ್ ತ್ರೈಮಾಸಿಕದಲ್ಲಿ ಕಂಪೆನಿ ನಷ್ಟ ಅನುಭವಿಸಿದೆ. ಇನ್ನು ಟ್ರಕ್ ಮಾರಾಟ ಮತ್ತೆ ಚೇತರಿಸಿಕೊಳ್ಳಲು ಕನಿಷ್ಠ ಮೂರು ವರ್ಷಗಳು ಬೇಕಾಗುತ್ತವೆ ಎಂದು ಡೈಮ್ಲರ್ ಎಜಿ ತಿಳಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಭಾರತದ ಆರ್ಥಿಕತೆ ಬಗ್ಗೆ ಇಂಥದ್ದೇ ಅಂದಾಜು ಮಾಡಿದೆ.

ಒಟ್ಟು ಸಾಮರ್ಥ್ಯದ ಶೇಕಡಾ 75ರಷ್ಟು ಪ್ರಮಾಣದಲ್ಲಿ ವಿಆರ್ ಎಲ್ ಕಾರ್ಯ ನಿರ್ವಹಿಸುತ್ತಿದೆ. ವ್ಯವಹಾರದ ಶೇಕಡಾ ಎಪ್ಪತ್ತೈದಕ್ಕಿಂತ ಹೆಚ್ಚು ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳಿಂದ ಬರುತ್ತದೆ. ಆರ್ಥಿಕ ಹೊಡೆತದಲ್ಲಿ ಅವುಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಹೆಚ್ಚಿನ ಬೇಡಿಕೆ ಇಲ್ಲದ ಮಾರ್ಗಗಳು (ರೂಟ್) ತೆಗೆಯಲು ಯೋಜನೆ ಮಾಡಿದ್ದೇವೆ. ಫಾರ್ಮಾಸ್ಯುಟಿಕಲ್ಸ್, ಕೃಷಿ ವಲಯ ಚೇತರಿಸಿಕೊಳ್ಳುತ್ತಿದೆ. ಟೆಕ್ಸ್ ಟೈಲ್ಸ್ ಹಾಗೂ ಆಟೋಮೊಬೈಲ್ ದುರ್ಬಲವಾಗಿದೆ ಎಂದು ನಲವಡಿ ಹೇಳಿದ್ದಾರೆ.
ಕರ್ನಾಟಕ ಮೂಲದ ವಿಆರ್ ಎಲ್ ಆರಂಭವಾದದ್ದು 1976ರಲ್ಲಿ. ಕೇವಲ ಒಂದು ಟ್ರಕ್ ನೊಂದಿಗೆ ಕಾರ್ಯಾರಂಭ ಮಾಡಿತು. 2015ರಲ್ಲಿ ಷೇರು ಮಾರುಕಟ್ಟೆಗೆ ಪ್ರವೇಶಿಸಿದಾಗ 40% ಷೇರಿನ ಬೆಲೆ ಹೆಚ್ಚಳ ಕಂಡಿತು. ಈ ವರ್ಷ ಷೇರು ಮೌಲ್ಯವು 45% ಕಡಿಮೆ ಆಗಿದೆ. ಸತತ ಮೂರನೇ ವರ್ಷ ಇಳಿಕೆ ಆಗಿದೆ.
"ಬೆಳವಣಿಗೆ ಸಾಧಿಸಲು 2020ರ ವರ್ಷವನ್ನು ನಾವು ಕಳೆದುಕೊಂಡಿದ್ದೇವೆ ಎಂದುಕೊಳ್ಳುತ್ತೇವೆ" ಎಂದಿರುವ ವಿಆರ್ ಎಲ್ ಲಾಜಿಸ್ಟಿಕ್ಸ್ ಅಧ್ಯಕ್ಷ ವಿಜಯ್ ಸಂಕೇಶ್ವರ, ಕಂಪೆನಿ ಸಿಬ್ಬಂದಿಯನ್ನು ಈಗಿನ ಸಮಸ್ಯೆಯಿಂದ ಹೊರತರುವುದು ನಮ್ಮ ಆದ್ಯತೆ ಎಂದು ಹೇಳಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications