ಬಿಪಿಸಿಎಲ್ (ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) ಷೇರಿನ ಪಾಲು ಮಾರಾಟಕ್ಕೆ ಬಿಡ್ ಸಲ್ಲಿಸಲು ಇನ್ನೊಂದು ವಾರ ಅವಧಿ ಇದೆ. ಈಗ ಕಂಪೆನಿಯು ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್ ಎಸ್) ಮುಂದಿಟ್ಟಿದೆ. ಬಿಪಿಸಿಎಲ್ ನಲ್ಲಿ 52.98 ಪರ್ಸೆಂಟ್ ಷೇರಿನ ಪಾಲು ಮಾರಾಟಕ್ಕೆ ಜುಲೈ 31 ಕೊನೆ ದಿನವಾಗಿದೆ. ಈಗಾಗಲೇ ಅಂತಿಮ ಗಡುವು ಎರಡು ಬಾರಿ ಮುಂದಕ್ಕೆ ಹೋಗಿದೆ.
ಭಾರತ್ ಪೆಟ್ರೋಲಿಯಂ ವಾಲಂಟರಿ ರಿಟೈರ್ ಮೆಂಟ್ ಸ್ಕೀಮ್- 2020 (BPVRS- 2020) ಜುಲೈ 23ನೇ ತಾರೀಕಿನಿಂದ ಆರಂಭವಾಗಿದ್ದು, ಆಗಸ್ಟ್ 13ನೇ ತಾರೀಕಿಗೆ ಕೊನೆಯಾಗುತ್ತದೆ. ವೈಯಕ್ತಿಕ ಕಾರಣಗಳಿಗಾಗಿ ಯಾರಿಗೆ ಕಂಪೆನಿಯಲ್ಲಿ ಸೇವೆ ಮುಂದುವರಿಸಲು ಸಾಧ್ಯವಿಲ್ಲವೋ ಅಂಥವರನ್ನು ಗಮನದಲ್ಲಿಟ್ಟುಕೊಂಡು, ಯಾರಿಗೆ 45 ವರ್ಷ ಮೇಲ್ಪಟ್ಟು ವಯಸ್ಸಾಗಿದೆಯೋ ಅಂಥವರಿಗೆ ಈ ಯೋಜನೆ ತರಲಾಗಿದೆ.
ಲೆಕ್ಕಾಚಾರ ಹೇಗಿರುತ್ತದೆ?
ಯಾರು ವಿಆರ್ ಎಸ್ ಆಯ್ಕೆ ಮಾಡಿಕೊಳ್ಳುತ್ತಾರೋ ಅಂಥವರಿಗೆ ಈಗಾಗಲೇ ಪೂರ್ತಿ ಮಾಡಿದ ಸರ್ವೀಸ್ ಗೆ ವರ್ಷಕ್ಕೆ ಎರಡು ತಿಂಗಳ ಸಂಬಳದಂತೆ ಲೆಕ್ಕ ಹಾಕಲಾಗುತ್ತದೆ ಅಥವಾ ವಾಲಂಟರಿ ರಿಟೈರ್ ಮೆಂಟ್ ಪಡೆಯುವಾಗ ತೆಗೆದುಕೊಳ್ಳುತ್ತಿರುವ ವೇತನವನ್ನು ಬಾಕಿ ಇರುವ ಸೇವೆಗೆ ತಿಂಗಳುಗಳಿಗೆ ಗುಣಿಸಿ- ಇವೆರಡರಲ್ಲಿ ಯಾವುದು ಕಡಿಮೆಯೋ ಆ ಮೊತ್ತವನ್ನು ನೀಡಲಾಗುತ್ತದೆ.
ನೂರರಷ್ಟು ವಿಚಾರಣೆ ಬಂದಿವೆ
ಬಿಪಿಸಿಎಲ್ ನಿಂದ ಸರ್ಕಾರದ ಬಂಡವಾಳ ಹಿಂತೆಗೆತಕ್ಕೆ ಜಾಗತಿಕ ಮಟ್ಟದ ತೈಲ ಹಾಗೂ ನೈಸರ್ಗಿಕ ಸಂಸ್ಥೆಗಳು ಆಸಕ್ತಿ ವ್ಯಕ್ತಪಡಿಸಿವೆ. ಜತೆಗೆ ಭಾರತದ ಸಂಸ್ಥೆಗಳು ಆಸಕ್ತಿ ತೋರಿವೆ. ಈ ಪ್ರಕ್ರಿಯೆಯಲ್ಲಿ ನೂರರಷ್ಟು ವಿಚಾರಣೆಗಳು ಬಂದಿವೆ. ಈ ಕಂಪೆನಿ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದರೂ ಕೊರೊನಾದ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಿತ್ತು.
ರಿಲಯನ್ಸ್ ಕೂಡ ಆಸಕ್ತಿ
ಸೌದಿ ಅರಾಮ್ಕೋ, ಅಬು ಧಾಬಿ ನ್ಯಾಷನಲ್ ಆಯಿಲ್ ಕಂಪೆನಿ, ರಾಸ್ ನೆಫ್ಟ್ ಆಫ್ ರಷ್ಯಾ ಮತ್ತು ಎಕ್ಸಾನ್ ಮೊಬಿಲ್ ಈ ಬಿಡ್ಡಿಂಗ್ ನಲ್ಲಿ ಪಾಲ್ಗೊಳ್ಳುವ ಯೋಜನೆಯಲ್ಲಿವೆ. ಇನ್ನು ಭಾರತದ ಕಂಪೆನಿಗಳು ಸಹ ಸ್ಪರ್ಧೆಯಿಂದ ಹೊರಬಿದ್ದಿಲ್ಲ. ಮುಖ್ಯವಾಗಿ ರಿಲಯನ್ಸ್ ಹೆಸರು ಕೇಳಿಬರುತ್ತಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications