ಸಣ್ಣ ಪ್ರಮಾಣದಲ್ಲಿ ಪಾಕ್ಷಿಕವಾಗಿ ಬೆಲೆ ಏರಿಕೆ ಮಾಡುವ ಮೂಲಕ ಸರ್ಕಾರದಿಂದ ಸೀಮೆ ಎಣ್ಣೆ ಮೇಲಿನ ಸಬ್ಸಿಡಿಯನ್ನು ತೆಗೆಯಲಾಗಿದೆ. ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್)ಯಲ್ಲಿ ಮಾರಾಟ ಆಗುವ ದರ ಹಾಗೂ ಮಾರುಕಟ್ಟೆಯಲ್ಲಿನ ದರ ಒಂದೇ ಆಗಲಿದೆ. 2021- 22ರ ಬಜೆಟ್ ನಲ್ಲಿ ಸೀಮೆ ಎಣ್ಣೆ ಸಬ್ಸಿಡಿ ಪಾವತಿಗೆ ಹಣ ಮೀಸಲಿಟ್ಟಿಲ್ಲ. ಈ ಅಂಶವು ಸಂಸತ್ ನಲ್ಲಿ ಮಂಡಿಸಿದ ಬಜೆಟ್ ದಾಖಲೆಯಲ್ಲಿ ಬಹಿರಂಗವಾಗಿದೆ.
ಈ ವರ್ಷದ ಮಾರ್ಚ್ 31ಕ್ಕೆ ಕೊನೆಯಾದ ವರ್ಷಕ್ಕೆ ಸೀಮೆ ಎಣ್ಣೆ ಸಬ್ಸಿಡಿ ರು. 2,677.32 ಕೋಟಿ ಇತ್ತು. ಈ ಹಿಂದಿನ ಹಣಕಾಸು ವರ್ಷದಲ್ಲಿ ಸಬ್ಸಿಡಿ ರು. 4058 ಕೋಟಿ ಇತ್ತು. ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರತಿ ಹದಿನೈದು ದಿನಕ್ಕೊಮ್ಮೆ ಲೀಟರ್ ಗೆ 25 ಪೈಸೆ ಏರಿಕೆ ಮಾಡುತ್ತದೆ.
ಕಳೆದ ವರ್ಷದ ಫೆಬ್ರವರಿಯಿಂದ ಸಬ್ಸಿಡಿ ತೆಗೆಯಲಾಗಿದೆ. ಒಟ್ಟಾರೆ ದರದಲ್ಲಿ ನಾಲ್ಕು ವರ್ಷದಲ್ಲಿ ರು. 23.8 ಏರಿಕೆ ಆಗಿದೆ. ಮುಂಬೈನಲ್ಲಿ ಲೀಟರ್ ಗೆ ರು. 15.02 ಇದ್ದದ್ದು ಈಗ ರು. 36.12 ಇದೆ. 2020ರ ಮೇ ತಿಂಗಳಲ್ಲಿ ಸೀಮೆ ಎಣ್ಣೆ ಲೀಟರ್ ಗೆ ರು. 13.96ಕ್ಕೆ ಕುಸಿದಿತ್ತು. ಆ ನಂತರ ಮೊತ್ತವು ಲೀಟರ್ ಗೆ ರು. 30.12 ಆಯಿತು. ಜನವರಿಯಲ್ಲಿ ಕೊನೆಯದಾಗಿ ಬೆಲೆ ಏರಿಕೆ ಆದ ಮೇಲೆ, ದರ ಲೀಟರ್ ಗೆ ರು. 3.87 ಹೆಚ್ಚಳ ಆಗಿದೆ.

ಈ ದರ ಹೆಚ್ಚಳವು ಗಮನಕ್ಕೆ ಬಾರದೆ ಹೋಗಿದೆ. ವಿಪಕ್ಷಗಳಿಂದ ಯಾವುದೇ ಟೀಕೆ ವ್ಯಕ್ತವಾಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ದರದ ಏರಿಕೆ ಬಗ್ಗೆ ಧ್ವನಿ ಎತ್ತಿದ್ದಾರೆ. ಸೀಮೆ ಎಣ್ಣೆಯನ್ನು ಪಡಿತರ ಚೀಟಿದಾರರು ಅಡುಗೆಗಾಗಿ ಹಾಗೂ ವಿದ್ಯುತ್ ಗೆ ಪರ್ಯಾಯವಾಗಿ ಬಳಸಲಾಗುತ್ತಿದೆ. ಎಂಟು ಕೋಟಿ ಉಚಿತ ಎಲ್ ಪಿಜಿ ಸಂಪರ್ಕ ನೀಡಿದ ಮೇಲೆ ಸೀಮೆ ಎಣ್ಣೆ ಬಳಕೆ ಕಡಿಮೆ ಆಗಿದೆ.
2020ರ ಏಪ್ರಿಲ್ ನಿಂದ ಡಿಸೆಂಬರ್ ಮಧ್ಯೆ ಸೀಮೆ ಎಣ್ಣೆ ಬಳಕೆ 28.4% ಕಡಿಮೆ ಆಗಿದೆ ಎಂಬ ಅಂಶವು ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ವಿಭಾಗದಿಂದ ಬಯಲಾಗಿದೆ.
ಆಂಧ್ರಪ್ರದೇಶ, ದೆಹಲಿ, ಹರಿಯಾಣ ಮತ್ತು ಪಂಜಾಬ್ ನಿಂದ ಉಚಿತ ಸೀಮೆ ಎಣ್ಣೆ ಘೋಷಣೆ ಮಾಡಲಾಗಿದೆ. ಗುಜರಾತ್, ಬಿಹಾರ, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಸ್ವಯಂಪ್ರೇರಿತವಾಗಿ ಸಾರ್ವಜನಿಕ ವಿತರಣೆ ವ್ಯವಸ್ಥೆ ಅಡಿ ಸೀಮೆ ಎಣ್ಣೆ ಹಂಚಿಕೆ ಪ್ರಮಾಣ ಬಿಟ್ಟುಕೊಡುವ ಆಯ್ಕೆಯನ್ನು ನೀಡಲಾಗಿದೆ.
2010ರ ಜೂನ್ ನಲ್ಲಿ ಪೆಟ್ರೋಲ್ ದರ ನಿಯಂತ್ರಣದಿಂದ ಹೊರ ತರಲಾಯಿತು. ಡೀಸೆಲ್ ದರ 2014ರ ಅಕ್ಟೋಬರ್ ನಲ್ಲಿ ಮುಕ್ತಗೊಳಿಸಲಾಯಿತು. ಇದರರ್ಥ ಎರಡರ ಸಬ್ಸಿಡಿ ಕೊನೆಗೊಳಿಸಲಾಯಿತು. ಅಡುಗೆ ಅನಿಲ (ಎಲ್ ಪಿಜಿ) ಮತ್ತು ಸೀಮೆ ಎಣ್ಣೆ ಸಬ್ಸಿಡಿ ಮುಂದುವರಿದಿತ್ತು.
2021- 22ರಲ್ಲಿ ಎಲ್ ಪಿಜಿಗೆ ಬಜೆಟ್ ನಲ್ಲಿ ರು. 12,480 ಕೋಟಿ ಸಬ್ಸಿಡಿಗೆ ಮೀಸಲಿಡಲಾಗಿದೆ. ಇದಕ್ಕೂ ಮುನ್ನ 2021- 22ಕ್ಕೆ ರು. 25,520.79 ಕೋಟಿಯನ್ನು ಎತ್ತಿಟ್ಟಿದ್ದು, ಹಿಂದಿನ ವರ್ಷ ರು. 35,605 ಕೋಟಿ ಇತ್ತು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications