ಈ ಹಿಂದಿನ ವರ್ಷದ ಆರ್ಥಿಕತೆ ಸ್ಥಿತಿಗತಿ ಅಥವಾ ಪ್ರದರ್ಶನ, ಭವಿಷ್ಯದ ಸವಾಲುಗಳು ಈ ಬಗೆಗಿನ ಸಂಪೂರ್ಣ ವರದಿಯನ್ನು ಭಾರತದ ಆರ್ಥಿಕ ಸಮೀಕ್ಷೆ (ಎಕನಾಮಿಕ್ ಸರ್ವೇ ಆಫ್ ಇಂಡಿಯಾ) ಎನ್ನಲಾಗುತ್ತದೆ. ಕೇಂದ್ರ ಬಜೆಟ್ ಗೆ ಒಂದು ದಿನದ ಮೊದಲು ಆರ್ಥಿಕ ಸಮೀಕ್ಷೆ ಮಂಡಿಸಲಾಗುತ್ತದೆ.
ಮುಖ್ಯ ಆರ್ಥಿಕ ಸಲಹೆಗಾರರ (ಸಿಇಎ) ಮಾರ್ಗದರ್ಶನದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ ಅರ್ಥಶಾಸ್ತ್ರ ವಿಭಾಗದಿಂದ ಈ ವರದಿಯನ್ನು ಸಿದ್ಧಪಡಿಸಲಾಗುತ್ತದೆ. ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು 2018ರ ಡಿಸೆಂಬರ್ ನಲ್ಲಿ ಸಿಇಎ ಆಗಿ ನೇಮಿಸಲಾಗಿದೆ. ಈ ವರ್ಷದ ಸಮೀಕ್ಷೆಯನ್ನು ಅವರೇ ಮಂಡಿಸಲಿದ್ದಾರೆ.
ಸಾಮಾನ್ಯವಾಗಿ ಬಜೆಟ್ ಗೆ ಒಂದು ದಿನದ ಮೊದಲು ಆರ್ಥಿಕ ಸಮೀಕ್ಷೆ ಮಂಡಿಸಲಾಗುತ್ತದೆ. ಆದರೆ ಈ ವರ್ಷ ಸ್ವಲ್ಪ ಬದಲಾವಣೆ ಆಗಬಹುದು. ಟೈಮ್ ಆಫ್ ಇಂಡಿಯಾ ವರದಿ ಪ್ರಕಾರ, ಆರ್ಥಿಕ ಸಮೀಕ್ಷೆ 2021 ವರದಿಯು ಜನವರಿ 29ರಂದು ಮಂಡಿಸಲಾಗುತ್ತದೆ. ಕೇಂದ್ರ ಬಜೆಟ್ ಫೆಬ್ರವರಿ 1ರ ಸೋಮವಾರ ಮಂಡನೆ ಆಗಲಿದೆ.

ಆರ್ಥಿಕ ಸಮೀಕ್ಷೆ ಎಂದರೇನು?
ಕಳೆದ ಒಂದು ವರ್ಷದಲ್ಲಿ ದೇಶದ ಸ್ಥಿತಿ ಹೇಗಿದೆ ಎಂದು ತಿಳಿಸುವ ದಾಖಲೆಯಿದು. ಭವಿಷ್ಯದಲ್ಲಿನ ಸವಾಲುಗಳ ಬಗ್ಗೆ ಕೂಡ ಅದರಲ್ಲಿ ಪ್ರಸ್ತಾವ ಮಾಡಲಾಗುತ್ತದೆ. ಬಜೆಟ್ ಮಂಡನೆ ಆಗುವ ಮುನ್ನ ಈ ವರದಿಯು ಅಡಿಪಾಯದಂತೆ. ಆರ್ಥಿಕ ಸಮೀಕ್ಷೆಯು ಆರ್ಥಿಕ ಬೆಳವಣಿಗೆ ಅಂದಾಜು ಹಾಗೂ ಅದಕ್ಕೆ ಕಾರಣ ಮತ್ತು ವಿಸ್ತರಣೆ ಅಥವಾ ಕುಗ್ಗುವಂತಿದ್ದರೆ ಕಾರಣ ಏನು ಎಂಬುದನ್ನು ತಿಳಿಸುತ್ತದೆ.
ಆರ್ಥಿಕ ಸಮೀಕ್ಷೆ ಬಹಳ ಹಿಂದಿನಿಂದಲೂ ಮಂಡಿಸಲಾಗುತ್ತಿದೆ. ಮೊದಲಿಗೆ ಮಂಡನೆ ಆಗಿರುವುದು 1950- 51ರಲ್ಲಿ. ಕಳೆದ ಕೆಲ ವರ್ಷಗಳಿಂದ ಎರಡು ಸಂಪುಟದಲ್ಲಿ ಬಿಡುಗಡೆ ಆಗುತ್ತಿದೆ. ಮೊದಲ ಸಂಪುಟದಲ್ಲಿ ಭಾರತದ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಇರುತ್ತದೆ. ಎರಡರಲ್ಲಿ ಹಿಂದಿನ ವರ್ಷದ ವಿಮರ್ಶೆ ಇರುತ್ತದೆ. ಜತೆಗೆ ಸರ್ಕಾರದ ಪ್ರಮುಖ ಯೋಜನೆಗಳು, ನೀತಿಗಳು ಮತ್ತು ಅದರ ಫಲಿತಾಂಶಗಳನ್ನು ಒಳಗೊಂಡಿರುತ್ತದೆ.
ಆರ್ಥಿಕ ಸಮೀಕ್ಷೆ ಮಹತ್ವ ಏನು?
ಈ ದಾಖಲೆಯು ದೇಶದ ಆರ್ಥಿಕ ಸ್ಥಿತಿಯನ್ನು ಮಾತ್ರವಲ್ಲ, ಜತೆಗೆ ಹಣದ ಪೂರೈಕೆ, ಕೃಷಿ ಮತ್ತು ಕೈಗಾರಿಕೆ ಉತ್ಪಾದನೆ, ಮೂಲಸೌಕರ್ಯ, ಬೆಲೆಗಳು, ಉದ್ಯೋಗ, ರಫ್ತು, ಆಮದು, ವಿದೇಶಿ ವಿನಿಮಯ ನಿಧಿ ಮತ್ತು ಇತರ ಸಂಬಂಧಪಟ್ಟ ಆರ್ಥಿಕ ವಿಚಾರಗಳು, ಬಜೆಟ್ ಗೆ ಸಂಬಂಧಿಸಿದಂತೆ ಒಳಗೊಂಡಿರುತ್ತದೆ.
ಆರ್ಥಿಕ ಸಮೀಕ್ಷೆ 2021 ಬಹಳ ಮಹತ್ತರವಾದದ್ದು ಏಕೆಂದರೆ, ಕೊರೊನಾ ಬಿಕ್ಕಟ್ಟಿನ ಹೊಡೆತಕ್ಕೆ ಸಿಲುಕಿ, ಈಗಷ್ಟೇ ದೇಶ ಆಚೆ ಬಂದಿದೆ. ಸರ್ಕಾರವು ಮೊದಲ ಬಾರಿಗೆ ಮಂಡಿಸಿದ ಮುಂಗಡ ಅಂದಾಜಿನ ಪ್ರಕಾರ, ಆರ್ಥಿಕತೆಯು 7.7 ಪರ್ಸೆಂಟ್ ಕುಗ್ಗಬಹುದು. ಇನ್ನು ಸರ್ಕಾರವು 2019ರಲ್ಲಿ $ 5 ಟ್ರಿಲಿಯನ್ ಆರ್ಥಿಕತೆ ಆಗುವ ಬಗ್ಗೆ ಪ್ರಸ್ತಾವ ಮಾಡಿತ್ತು. ಅದನ್ನು ಸಾಧಿಸಲು ಯೋಜನೆಗಳನ್ನು ಮುಂದಿಡಬಹುದು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!



Click it and Unblock the Notifications