16 GB ಡೇಟಾದಿಂದ $ 2 (ಅಂದಾಜು 148 ರುಪಾಯಿ) ಗಳಿಸುವುದು 'ದುರಂತ'. ಇದು ಹೀಗೇ ಆದರೆ ಉಳಿದುಕೊಳ್ಳುವುದು ಸಾಧ್ಯವಿಲ್ಲ ಎಂದು ಭಾರ್ತಿ ಏರ್ ಟೆಲ್ ಮುಖ್ಯಸ್ಥ ಸುನೀಲ್ ಮಿತ್ತಲ್ ಸೋಮವಾರ ಹೇಳಿದ್ದಾರೆ. ಮೊಬೈಲ್ ಬಳಕೆ ದರ ಏರಿಕೆ ಮಾಡುವ ಅಗತ್ಯದ ಬಗ್ಗೆ ಅವರು ಮಾತನಾಡಿದ್ದಾರೆ.
ಆವರೇಜ್ ರೆವೆನ್ಯೂ ಪರ್ ಯೂಸರ್ (Arpu) ಮುಂದಿನ ಐದರಿಂದ ಆರು ತಿಂಗಳಲ್ಲಿ 200ರಿಂದ 250 ರುಪಾಯಿ ದಾಟಬೇಕು ಎಂದು ಏರ್ ಟೆಲ್ ನಿರೀಕ್ಷೆ ಮಾಡುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಏರ್ ಟೆಲ್ Arpu 157 ರುಪಾಯಿ ದಾಖಲಿಸಿದೆ. ಇದು ಟೆಲಿಕಾಂ ವಲಯದಲ್ಲೇ ಅತಿ ಹೆಚ್ಚು.
ಪ್ರಮುಖ ಸುದ್ದಿ ವಾಹಿನಿಯೊಂದರ ಜತೆ ಮಾತನಾಡಿದ ಸುನೀಲ್, ಭಾರತದ ಟೆಲಿಕಾಂ ಆಪರೇಟರ್ ಗಳು ಒಬ್ಬ ಗ್ರಾಹಕರಿಂದ 50ರಿಂದ 60ರಿಂದ ಗಳಿಸಬೇಕು ಎಂದು ಬಯಸುವುದಿಲ್ಲ. ಯು.ಎಸ್. ನಲ್ಲಿ ಇರುವಂತೆಯೇ ಇಲ್ಲೂ Arpu 300 ರುಪಾಯಿ ಆಗಲಿಲ್ಲ ಎಂದಾದರೆ ಈ ಉದ್ಯಮದಲ್ಲಿ ಉಳಿಯುವುದು ಕಷ್ಟ ಎಂದಿದ್ದಾರೆ.

ಭವಿಷ್ಯದಲ್ಲಿ ಭಾರತದಲ್ಲಿ ಎರಡೇ ಟೆಲಿಕಾಂ ಆಪರೇಟರ್ ಗಳು ಇರಬಹುದು. ಮೂರನೇ ಆಪರೇಟರ್ ಹೊಸದಾಗಿ ಬಂಡವಾಳ ಹೂಡಿಕೆ ಮಾಡಲಿಲ್ಲ ಅಂದರೆ ಇಲ್ಲಿ ಆಪರೇಟರ್ ಉಳಿದುಕೊಳ್ಳುವುದು ಅನುಮಾನ ಎಂದು ಅವರು ಹೇಳಿದ್ದಾರೆ.
AGR ಬಾಕಿ ಪಾವತಿಸುವಂತೆ ಸುಪ್ರೀಂ ಕೋರ್ಟ್ ಹೇಳಿರುವುದರಿಂದ ವೊಡಾಫೋನ್ ಐಡಿಯಾ ಉಳಿಯುವುದು ಅನುಮಾನ ಇದೆ. ಕಂಪೆನಿಗಳಿಂದ ಎಜಿಆರ್ ಬಾಕಿ ವಸೂಲಿಗೆ ಹದಿನೈದರಿಂದ ಇಪ್ಪತ್ತು ವರ್ಷ ಸಮಯ ನೀಡುವಂತೆ ಪ್ರಸ್ತಾವ ಮುಂದಿಟ್ಟಿದೆ. ಈ ಕುರಿತಂತೆ ಆದೇಶವನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
ಟೆಲಿಕಾಂ ವಲಯ ಒಂದರಲ್ಲೇ ಎಲ್ಲ ಕಡೆಯೂ ವಕೀಲರನ್ನು ಕಾಣಬಹುದು ಎಂದಿರುವ ಸುನೀಲ್, ಈ ವ್ಯಾಜ್ಯಗಳು ಕಡಿಮೆ ಆಗಬೇಕು ಎಂಬ ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರದ 'ವಿವಾದ್ ಸೇ ವಿಶ್ವಾಸ್' ಉತ್ತಮ ಕಾರ್ಯಕ್ರಮ ಎಂದು ಕರೆದಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications