ಯುನಿಟೆಕ್ ಗ್ರೂಪ್ನ ಬೇನಾಮಿ ಸಂಸ್ಥೆಗಳಿಗೆ ಸೇರಿದ 18.14 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಯಲ್ಲಿ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದ ಆಸ್ತಿಗಳಲ್ಲಿ ಗುರುಗ್ರಾಮದಲ್ಲಿ (ಹರಿಯಾಣ) ಇರುವ ಮಲ್ಟಿಪ್ಲೆಕ್ಸ್ಗಳು, ಗುರುಗ್ರಾಮ ಹಾಗೂ ಲಕ್ನೋ (ಉತ್ತರ ಪ್ರದೇಶ) ದಲ್ಲಿ ಇರುವ ಆರು ವಾಣಿಜ್ಯ ಆಸ್ತಿಗಳು ಮತ್ತು ಎರಡು ಡಜನ್ ಬ್ಯಾಂಕ್ ಖಾತೆಗಳನ್ನು ಕೂಡಾ ಜಪ್ತಿ ಮಾಡಿದೆ. ಒಟ್ಟು ಇದರ ಮೌಲ್ಯ 18.14 ಕೋಟಿ ರೂಪಾಯಿ ಆಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಾರಿ ನಿರ್ದೇಶನಾಲಯವು, "ಎನೋವಾ ಫೆಸಿಲಿಟಿ ಮ್ಯಾನೇಜ್ಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಫ್ಎನ್ಎಂ ಪ್ರಾಪರ್ಟಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಈ ಆಸ್ತಿಯು ಇದೆ. ಈ ಸಂಸ್ಥೆಗಳು ಬೇನಾಮಿ ಸಂಸ್ಥೆಗಳು ಆಗಿದೆ. ಯುನಿಟೆಕ್ ಮುಖ್ಯಸ್ಥ ಅಜಯ್ ಚಂದ್ರ ಮತ್ತು ಸಂಜಯ್ ಚಂದ್ರರಿಗೆ ಸೇರಿದ ಬೇನಾಮಿ ಆಸ್ತಿ ಇದಾಗಿದೆ," ಎಂದು ತಿಳಿಸಿದೆ.
ಈ ಎರಡು ಬೇನಾಮಿ ಸಂಸ್ಥೆಗಳನ್ನು "ಯುನಿಟೆಕ್ ಮುಖ್ಯಸ್ಥ ಅಜಯ್ ಚಂದ್ರ ಮತ್ತು ಸಂಜಯ್ ಚಂದ್ರ ಅವರು ತಮ್ಮ ನಿಕಟವರ್ತಿಗಳ ಮೂಲಕ ಈ ಬೇನಾಮಿ ಆಸ್ತಿಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಯುನಿಟೆಕ್ ಗುಂಪಿನಿಂದ ಆಸ್ತಿಯ ಆದಾಯದಿಂದ ಇದನ್ನು ಸೃಷ್ಟಿಸಲಾಗಿದೆ," ಎಂದು ಕೂಡಾ ಮಾಹಿತಿ ನೀಡಿದೆ.

ಈ ಎಲ್ಲಾ ಬೇನಾಮಿ ಆಸ್ತಿಯನ್ನು ಅಜಯ್ ಚಂದ್ರ ಮತ್ತು ಸಂಜಯ್ ಚಂದ್ರ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಬೇನಾಮಿ ಆಸ್ತಿಯನ್ನು ಅಜಯ್ ಚಂದ್ರ ಮತ್ತು ಸಂಜಯ್ ಚಂದ್ರ ತಮ್ಮ ಆಪ್ತರ ಮೂಲಕ ನಿರ್ವಹಣೆ ಮಾಡುತ್ತಿದ್ದಾರೆ.
ಬೇನಾಮಿ ಆಸ್ತಿ ಎಂದರೆ ಓರ್ವ ವ್ಯಕ್ತಿಯು ತನ್ನ ಆಸ್ತಿಯನ್ನು ಬೇರೆಯವರನ್ನು ಬೇನಾಮಿದಾರರಾಗಿಸುತ್ತಾರೆ. ಆ ಆಸ್ತಿಯನ್ನು ಸಂಪೂರ್ಣವಾಗಿ ಬೇನಾಮಿದಾರರಿಗೆ ವರ್ಗಾವಣೆ ಮಾಡುತ್ತಾರೆ. ಆದರೆ ವಾಸ್ತವವಾಗಿ ಬೇರೊಬ್ಬ ವ್ಯಕ್ತಿಯ ಹೆಸರಿನಲ್ಲಿ ಈ ಆಸ್ತಿ ಇದ್ದರೂ ಕೂಡಾ ಈ ಆಸ್ತಿಯನ್ನು ಆ ವ್ಯಕ್ತಿಯು ಅನುಭವಿಸುತ್ತಾರೆ.
ಈ ಮನಿ ಲಾಂಡರಿಂಗ್ ಪ್ರಕರಣವು ಯುನಿಟೆಕ್ ಗ್ರೂಪ್ ಹಾಗೂ ಅದರ ಪ್ರವರ್ತಕರ ವಿರುದ್ಧ ಮನೆ ಖರೀದಿದಾರರು ದಾಖಲಿಸಿದ ಹಲವಾರು ದೆಹಲಿ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗ ಮತ್ತು ಸಿಬಿಐ ಎಫ್ಐಆರ್ ಅನ್ನು ಆಧರಿಸಿದೆ.
ಮಾಲೀಕರಾದ ಸಂಜಯ್ ಚಂದ್ರ ಮತ್ತು ಅಜಯ್ ಚಂದ್ರ ಸೈಪ್ರಸ್ ಮತ್ತು ಕೇಮನ್ ದ್ವೀಪಗಳಿಗೆ ಅಕ್ರಮವಾಗಿ 2,000 ಕೋಟಿ ರೂ.ಗಳ ವ್ಯವಹಾರ ನಡೆಸಿದ ಆರೋಪದ ಮೇಲೆ ಯುನಿಟೆಕ್ ಗ್ರೂಪ್ ಮತ್ತು ಅದರ ನಿರ್ವಹಕರ ವಿರುದ್ಧ ಇಡಿ ಈ ವರ್ಷದ ಆರಂಭದಲ್ಲಿ ಪಿಎಂಎಲ್ಎ ಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿದೆ. ಈ ಪ್ರಕರಣದಲ್ಲಿ ಈವರೆಗೆ ಒಟ್ಟು 690.66 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.
ಯುನಿಟೆಕ್ ಸ್ಥಾಪಕ ರಮೇಶ್ ಚಂದ್ರರನ್ನು ಕಳೆದ ತಿಂಗಳು ಬಂಧನ ಮಾಡಲಾಗಿದೆ. ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಯುನಿಟೆಕ್ ಸ್ಥಾಪಕ ರಮೇಶ್ ಚಂದ್ರ ಮತ್ತು ಅವರ ಸೊಸೆ ಪ್ರೀತಿ ಚಂದ್ರ, ಸಂಜಯ್ ಚಂದ್ರ ಅವರ ಪತ್ನಿಯನ್ನ ಪಿಎಂಎಲ್ಎ 2002ರ ಅಡಿಯಲ್ಲಿ ಬಂಧನ ಮಾಡಿದೆ.
ಮನೆ ಖರೀದಿದಾರರಿಗೆ ಹಣ ವಂಚನೆ ಮಾಡಿದ ಆರೋಪವು ಈ ಚಂದ್ರ ಸಹೋದರರಿಗೆ ಇದೆ. ಈ ಸಹೋದರರು ತಿಹಾರಿ ಜೈಲಿನಲ್ಲೇ ಕುಳಿತು ತಮ್ಮ ವ್ಯಾಪಾರ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಇಡಿಯು 35 ಪ್ರದೇಶಗಳಲ್ಲಿ ದಾಳಿ ನಡೆಸಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications