ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಹಲವು ವಿಧದ ಯೋಜನೆಗಳನ್ನು ರೂಪಿಸಿವೆ. ಅನೇಕ ಸ್ಕೀಮ್ಗಳನ್ನು ಬಹಳಷ್ಟು ರೈತರು ಉಪಯೋಗಿಸಿಕೊಳ್ಳುತ್ತಿರುವುದು ಹೌದು. ಪಿಎಂ ಕಿಸಾನ್ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಸಾವಯವ ಕೃಷಿ ಯೋಜನೆ, ಕೃಷಿ ಭಾಗ್ಯ, ಸಣ್ಣ ನೀರಾವರಿ, ಹನಿ ನೀರಾವರಿ, ಬೆಳೆ ವಿಮೆ, ಕೃಷಿ ಹೊಂಡ ಇತ್ಯಾದಿ ನಾನಾ ಯೋಜನೆಗಳು ರೈತರಿಗೆಂದು ಸರ್ಕಾರಗಳು ರೂಪಿಸಿವೆ.
ಇವೆಲ್ಲವೂ ರೈತರ ಕೃಷಿಗಾರಿಕೆಯ ಕಷ್ಟವನ್ನು ಕಡಿಮೆ ಮಾಡಲು ನೆರವಾಗುತ್ತವೆ ಎಂಬುದು ಹೌದು. ಬೆಳೆ ಬೆಳೆಗೆ ಸರಿಯಾದ ಮಾರುಕಟ್ಟೆ ಮತ್ತು ದರ ಸಿಗುವ ವಿಚಾರದಲ್ಲಿ ಮತ್ತು ಮಳೆ ಮತ್ತು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟವಾದಾಗ ಸಿಗುವ ಪರಿಹಾರ ವಿಚಾರದಲ್ಲಿ ಅನಿಶ್ಚಿತತೆ ಹೊರತುಪಡಿಸಿದರೆ ರೈತ ತನ್ನ ನೆಲದ ಕಾಯಕದಲ್ಲಿ ನೆಮ್ಮದಿಯಿಂದ ತೊಡಗಿಸಿಕೊಳ್ಳಲು ಅಡ್ಡಿ ಇಲ್ಲ.
ಡ್ರೋನ್ಗೆ ಸಬ್ಸಿಡಿ
ಇದೇ ವೇಳೆ, ಸರ್ಕಾರ ಕೃಷಿಗಾರಿಕೆಯಲ್ಲಿ ಡ್ರೋನ್ ಬಳಕೆಗೆ ಉತ್ತೇಜನ ಕೊಡಲು ನಿರ್ಧರಿಸಿದೆ. ಆ ನಿಟ್ಟಿನಲ್ಲಿ ಭಾರೀ ಸಬ್ಸಿಡಿ ಒದಗಿಸುವ ಯೋಜನೆಯನ್ನು ಹೊರತಂದಿದೆ. ಕೃಷಿಯಲ್ಲಿ ಬಳಸಲು ಡ್ರೋನ್ ಕೊಳ್ಳುವ ರೈತರಿಗೆ ಸರ್ಕಾರ ಭಾರೀ ಸಬ್ಸಿಡಿ ನೀಡುತ್ತದೆ. ಡ್ರೋನ್ ಬೆಲೆಯ ಶೇ. 50ರವರೆಗಿನ ಹಣ ಅಥವಾ ಗರಿಷ್ಠ 5 ಲಕ್ಷ ರೂವರೆಗಿನ ಹಣವನ್ನು ಸರ್ಕಾರ ಸಬ್ಸಿಡಿಯಾಗಿ ನೀಡುತ್ತದೆ.
ಕೃಷಿಯಲ್ಲಿ ಡ್ರೋನ್ ಬಳಕೆ ಯಾಕೆ?
ಡ್ರೋನ್ಗಳು ಒಂದು ರೀತಿಯಲ್ಲಿ ಮಿನಿ ಕಾಪ್ಟರ್ಗಳಿದ್ದಂತೆ. ರಿಮೋಟ್ ಕಂಟ್ರೋಲ್ ಮೂಲಕ ಡ್ರೋನ್ಗಳನ್ನು ಮೇಲೆ ಹಾರಾಡಿಸಬಹುದು. ಮಿಲಿಟರಿ, ಕೈಗಾರಿಕಾ ಚಟುವಟಿಕೆಗಳಿಗೆ ಇದು ಸಾಮಾನ್ಯವಾಗಿ ಬಳಕೆಯಾಗುತ್ತಿತ್ತು. ಈಗ ಕೃಷಿಯಲ್ಲಿ ಇದರ ಉಪಯುಕ್ತತೆ ಹೆಚ್ಚಿರುವುದು ಋಜುವಾತಾಗಿದೆ. ಕೃಷಿ ಭೂಮಿಯಲ್ಲಿ ಇವುಗಳನ್ನು ಸರಿಯಾಗಿ ಬಳಸಿಕೊಳ್ಳಬಹುದು. ಬೆಳೆಗೆ ಔಷಧ, ರಾಸಾಯನಿಕ ಇತ್ಯಾದಿಯನ್ನು ಸಿಂಪಡಿಸಲು ಡ್ರೋನ್ಗಳನ್ನು ಬಳಸಬಹುದು. ಇದರಿಂದ ಬಹಳಷ್ಟು ಮಾನವ ಸಂಪನ್ಮೂಲವನ್ನು ಉಳಿಸಬಹುದು.
ಬೆಳೆ ಹಾನಿ ಪರಿಶೀಲನೆ, ದೊಡ್ಡ ಪ್ರಮಾಣದ ಪಶುಗಳ ನಿರ್ವಹಣೆಗೆ ಇದು ಸಹಕಾರಿ ಆಗುತ್ತದೆ. ಕೃಷಿ ಇಲಾಖೆಗಳು ರೈತರ ಜಮೀನಿನ ಮಣ್ಣಿನ ಪರಿಶೀಲನೆ, ಬೆಳೆ ಅಂದಾಜು ಇತ್ಯಾದಿ ಕಾರ್ಯವನ್ನು ಮಾಡಬಹುದು.
ಸಣ್ಣ ರೈತರಿಗೆ ಹೆಚ್ಚು ಸಬ್ಸಿಡಿ
ಕೃಷಿಗಾಗಿ ಬಳಸಲಾಗುವ ಒಂದು ಡ್ರೋನ್ನ ಬೆಲೆ ಅಂದಾಜು 10 ಲಕ್ಷ ರೂ ಇದೆ. ಡ್ರೋನ್ ಸಬ್ಸಿಡಿ ಸ್ಕೀಮ್ನಲ್ಲಿ ಎಲ್ಲಾ ರೈತರಿಗೂ 5 ಲಕ್ಷ ರೂ ಅಥವಾ ಶೇ. 50 ಸಬ್ಸಿಡಿ ಸಿಗುತ್ತದೆ ಎಂದಲ್ಲ. ಸಣ್ಣ ಮತ್ತು ಅತಿಸಣ್ಣ ರೈತರು, ಮಹಿಳಾ ಕೃಷಿಕರು ಮತ್ತು ಈಶಾನ್ಯ ರಾಜ್ಯಗಳ ರೈತರಿಗೆ ಹೆಚ್ಚಿನ ಸಬ್ಸಿಡಿ ನೀಡಲಾಗುತ್ತಿದೆ. ಈ ರೈತರು ಡ್ರೋನ್ ಖರೀದಿಸಿದಾಗ ಗರಿಷ್ಠ 5 ಲಕ್ಷ ರೂಪಾಯಿಯವರೆಗೂ ಸಬ್ಸಿಡಿ ಕೊಡಲಾಗುತ್ತದೆ. ಅಥವಾ ಡ್ರೋನ್ ಬೆಲೆಯ ಅರ್ಧದಷ್ಟು ಹಣವನ್ನು ಸಬ್ಸಿಡಿಯಾಗಿ ಸರ್ಕಾರ ಕೊಡುತ್ತದೆ.
ಮೇಲೆ ತಿಳಿಸಿದ ವರ್ಗಕ್ಕೆ ಸೇರದ ಇತರೆಲ್ಲಾ ರೈತರಿಗೂ 5 ಲಕ್ಷ ಬದಲು 4 ಲಕ್ಷ ರೂವರೆಗೂ ಸಬ್ಸಿಡಿ ಕೊಡಲಾಗುತ್ತದೆ. ಅಥವಾ ಡ್ರೋನ್ ಬೆಲೆಯ ಶೇ. 40ರಷ್ಟು ಹಣವನ್ನು ಸಬ್ಸಿಡಿಯಾಗಿ ಕೊಡಲಾಗುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications