ಸತತವಾಗಿ ಮೂರನೇ ವರ್ಷ ಲಾಭದಲ್ಲಿ ಇಳಿಕೆ ಕಂಡಿರುವ ಎಚ್ ಎಸ್ ಬಿಸಿಯು (ಹಾಂಕಾಂಗ್ ಅಂಡ್ ಶಾಂಘೈ ಬ್ಯಾಂಕಿಂಗ್ ಕಾರ್ಪೊರೇಷನ್) ಮಂಗಳವಾರ ಹಲವು ಯೋಜನೆಗಳನ್ನು ಘೋಷಿಸಿದೆ. 35 ಸಾವಿರ ಉದ್ಯೋಗಗಳ ಕಡಿತ, ಯುಎಸ್ ಎ ಮತ್ತು ಯುರೋಪ್ ನಲ್ಲಿ ಕಾರ್ಯ ನಿರ್ವಹಣೆ ಪ್ರಮಾಣ ಕಡಿಮೆ ಮಾಡುವುದು ಸೇರಿದಂತೆ ವಿವಿಧ ಕ್ರಮಗಳನ್ನು ಘೋಷಿಸಿದೆ.
ಅಮೆರಿಕ- ಚೀನಾ ಮಧ್ಯದ ವಾಣಿಜ್ಯ ಸಮರ, ಬ್ರೆಕ್ಸಿಟ್ ಮತ್ತು ಚೀನಾದ ಕೊರೊನಾ ವೈರಾಣು ಪರಿಣಾಮವನ್ನು ಎದುರಿಸುತ್ತಿರುವ ಎಚ್ ಎಸ್ ಬಿಸಿ, ವೆಚ್ಚ ಕಡಿಮೆ ಮಾಡುವ ಪ್ರಯತ್ನದಲ್ಲಿದೆ. ಏಷ್ಯಾ ಮೂಲದ ಎಚ್ ಎಸ್ ಬಿಸಿ ಈಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಉತ್ತಮವಾಗಿಯೇ ಕಾರ್ಯ ನಿರ್ವಹಣೆ ಮಾಡುತ್ತಿದೆ. ಯುರೋಪ್ ಮತ್ತು ಚೀನಾದಲ್ಲಿ ಎಚ್ ಎಸ್ ಬಿಸಿ ಫಲಿತಾಂಶ ನಿರಾಶಾದಾಯಕವಾಗಿದೆ.
50ಕ್ಕೂ ಹೆಚ್ಚು ದೇಶಗಳಲ್ಲಿ ಎಚ್ ಎಸ್ ಬಿಸಿ ಕಾರ್ಯ ನಿರ್ವಹಿಸುತ್ತದೆ. ಅದರಲ್ಲಿ ಲಾಭದ ಬಹುಪಾಲು ಬರುವುದು ಏಷ್ಯಾ ಖಂಡದಿಂದಲೇ. ಕಳೆದ ಆಗಸ್ಟ್ ನಲ್ಲಿ ಜಾನ್ ಫ್ಲಿಂಟ್ ನಿರ್ಗಮನದ ನಂತರ ನೋಯೆಲ್ ಕ್ವಿನ್ ಅವರು ಹಂಗಾಮಿ ಸಿಇಒ ಆಗಿ ಅಧಿಕಾರ ವಹಿಸಿದ್ದು, ಎಚ್ ಎಸ್ ಬಿಸಿಯನ್ನು ಗಟ್ಟಿಗೊಳಿಸುವ ಪ್ರಯತ್ನದಲ್ಲಿ ಇದ್ದಾರೆ.

ನಮ್ಮ ಕೆಲವು ವ್ಯವಹಾರ ಒಪ್ಪಿಕೊಳ್ಳಬಹುದಾದ ರಿಟರ್ನ್ಸ್ ನೀಡುತ್ತಿಲ್ಲ. ಆದ್ದರಿಂದ ಹೂಡಿಕೆದಾರರಿಗೆ ರಿಟರ್ನ್ಸ್ ಜಾಸ್ತಿ ಮಾಡುವ ಪ್ರಯತ್ನದಲ್ಲಿ ಇದ್ದೇವೆ ಎಂದು ಕ್ವಿನ್ ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಎಚ್ ಎಸ್ ಬಿಸಿಗೆ 2,35,000 ಸಿಬ್ಬಂದಿ ಇದ್ದು, ಅದನ್ನು ಮುಂದಿನ ಮೂರು ವರ್ಷದಲ್ಲಿ 2 ಲಕ್ಷಕ್ಕೆ ಇಳಿಸಲಾಗುವುದು ಎಂದಿದ್ದು, ಎಲ್ಲಿ ಮತ್ತು ಯಾವ ಉದ್ಯೋಗ ಕಡಿತ ಮಾಡಲಾಗುವುದು ಎಂಬ ಮಾಹಿತಿ ನೀಡಿಲ್ಲ.
2022ರ ಹೊತ್ತಿಗೆ 4.5 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಕಡಿತ ಮಾಡಿ, ಒಟ್ಟು ವೆಚ್ಚವನ್ನು 6 ಬಿಲಿಯನ್ ಅಮೆರಿಕನ್ ಡಾಲರ್ ಗೆ ತರುವ ಗುರಿ ಎಚ್ ಎಸ್ ಬಿಸಿಗೆ ಇದೆ. ಮೆಕ್ಸಿಕನ್ ಅಕ್ರಮ ಹಣ ವರ್ಗಾವಣೆ ಹಗರಣದ ನಂತರ 2012ರಿಂದಲೂ ಎಚ್ ಎಸ್ ಬಿಸಿ ಪುನಾರಚನೆ ಯೋಜನೆಯಲ್ಲಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications