ಶಬರಿಮಲೆಯಲ್ಲಿ ಪ್ರಸ್ತುತ ವಾರ್ಷಿಕ ತೀರ್ಥಯಾತ್ರೆ ಆರಂಭವಾಗಿದೆ. ಈಗಾಗಲೇ ಮೊದಲ ಹಂತದ ಯಾತ್ರೆ ಕೊನೆಯಾಗುತ್ತಿದೆ. ಜನವರಿ 14ರಂದು ಮಕರ ಸಂಕ್ರಾಂತಿಯಂದು ಬೆಳಕಿನ ದರ್ಶನದ ಬಳಿಕ ಈ ವರ್ಷದ ತೀರ್ಥಯಾತ್ರೆ ಸಂಪೂರ್ಣವಾಗಲಿದೆ. ಈ ನಡುವೆ ಈ ವರ್ಷದಲ್ಲಿ ಶಬರಿಮಲೆಯ ಆದಾಯ ಹೆಚ್ಚಳವಾಗಿದೆ.
ಪ್ರಸ್ತುತ ವರ್ಚುವಲ್ ಬುಕ್ಕಿಂಗ್ ವ್ಯವಸ್ಥೆ ಇದ್ದು, ಬುಕ್ಕಿಂಗ್ ಅಧಿಕವಾಗುತ್ತಿದೆ. ಯಾತ್ರಿಕರ ಸಂಖ್ಯೆ ಅಧಿಕವಾಗುತ್ತಿದ್ದಂತೆ ಶಬರಿಮಲೆ ಆದಾಯವು ಕೂಡಾ ಹೆಚ್ಚಾಗುತ್ತಿದೆ. ಈವರೆಗೆ ಅಂದರೆ ಡಿಸೆಂಬರ್ 25ರವರೆಗೆ ಸುಮಾರು 29.08 ಲಕ್ಷ ಜನರು ಶಬರಿಮಲೆಗೆ ಭೇಟಿ ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಈ ವಾರ್ಷಿಕ ತೀರ್ಥಯಾತ್ರೆಯ ಮೊದಲ ಹಂತ ಮಂಗಳವಾರ ಕೊನೆಯಾಗಲಿದೆ. ಮಂಗಳವಾರ ಮಧ್ಯಾಹ್ನ ಮಂಡಲಪೂಜೆಯ ಮೂಲಕ ಮೊದಲ ಹಂತ ಕೊನೆಯಾಗಲಿದೆ. ಈ ಪೂಜೆ ಸರಾಗವಾಗಿ ನಡೆಯುವ ನಿಟ್ಟಿನಲ್ಲಿ ಟಿಡಿಬಿ ಹಾಗೂ ಪೊಲೀಸರು ಎಲ್ಲ ವ್ಯವಸ್ಥೆಯನ್ನು ಮಾಡಿದ್ದಾರೆ. ಎಲ್ಲ ಕಡೆ ಪೊಲೀಸ್ ಬಂದೋಬಸ್ತ್ ಇದೆ.
ಡಿಸೆಂಬರ್ 25ರವರೆಗಿನ ಲೆಕ್ಕಾಚಾರದ ಪ್ರಕಾರ ಶಬರಿಮಲೆ ದೇವಾಲಯಕ್ಕೆ ಡೊನೇಶನ್ ರೂಪದಲ್ಲಿ ಸುಮಾರು 70.10 ಕೋಟಿ ರೂಪಾಯಿ ಲಭ್ಯವಾಗಿದೆ. ಹಾಗಾದರೆ ಕಳೆದ ವರ್ಷದ ಆದಾಯ ಎಷ್ಟು ಹೆಚ್ಚಾಗಿತ್ತು, ಈ ವರ್ಷ ಎಷ್ಟು ಹೆಚ್ಚಾಗಿದೆ ಎಂದು ತಿಳಿಯೋಣ ಮುಂದೆ ಓದಿ....
ಮಕ್ಕಳ ಆಗಮನ ಹೆಚ್ಚಳ
ತಿರುವಂಕೂರು ದೇವಸ್ವ ಮಂಡಳಿಯ ಅಧ್ಯಕ್ಷ ಕೆ ಅನಂತಗೋಪನ್ ಪ್ರಕಾರ ಈ ವಾರ್ಷಿಕ ತೀರ್ಥಯಾತ್ರೆ ಸಂದರ್ಭದಲ್ಲಿ ಈವರೆಗೆ ಶಬರಿಮಲೆಗೆ ಭೇಟಿ ನೀಡಿರುವ ಭಕ್ತರ ಪೈಕಿ ಸುಮಾರು ಶೇಕಡ 20ರಷ್ಟು ಮಕ್ಕಳಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಸಂಬಂಧಿತ ನಿರ್ಬಂಧಗಳು ಅಧಿಕವಾಗಿತ್ತು. ಆದರೆ ಈ ವರ್ಷದಲ್ಲಿ ನಿರ್ಬಂಧಗಳು ಅಷ್ಟಾಗಿಲ್ಲ. ಈ ನಡುವೆ ಮಕ್ಕಳ ಸಂಖ್ಯೆ ಅಧಿಕವಾಗಿದೆ. ಇನ್ನು ಮಕ್ಕಳಿಗಾಗಿ ಪ್ರತ್ಯೇಕವಾದ ಸಾಲನ್ನು ಮಾಡಲಾಗಿದೆ. ನೂಕುನುಗ್ಗಾಟವನ್ನು ತಡೆಯುವ ನಿಟ್ಟಿನಲ್ಲಿ ಈ ಪ್ರತ್ಯೇಕ ಸಾಲುಗಳನ್ನು ಮಾಡಲಾಗಿದೆ. ಆದರೆ ಭಕ್ತರು ಸಾಮಾನ್ಯ ಸಮಯಕ್ಕಿಂತ ಅಧಿಕ ಸಮಯ ದರ್ಶನಕ್ಕಾಗಿ ಕಾಯಬೇಕಾಗಿ ಬಂದರೆ ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಕೂಡಾ ತಿಳಿಸಿದ್ದಾರೆ.
ಕಳೆದ ವರ್ಷದ ಆದಾಯ ಎಷ್ಟಿತ್ತು?
ಕಳೆದ ವರ್ಷ ಮಂಡಲ ಪೂಜೆಯವರೆಗೆ ಸುಮಾರು 10.35 ಲಕ್ಷ ತೀರ್ಥ ಯಾತ್ರಿಕರು ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಹಾಗೆಯೇ ಕಳೆದ ವರ್ಷ ಶಬರಿಮಲೆ ತೀರ್ಥ ಯಾತ್ರೆಯ ಸಂದರ್ಭದಲ್ಲಿ ಬೋರ್ಡ್ ಸುಮಾರು 78.92 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ಅರ್ವಾಣ (ಪ್ರಸಾದ) ವನ್ನು ಮಾರಾಟ ಮಾಡುವ ಮೂಲಕ ಟಿಡಿಬಿ ಸುಮಾರು 31.25 ಕೋಟಿ ರೂಪಾಯಿ ಪಡೆದುಕೊಂಡಿದೆ. ಅಪ್ಪಮ್ (ಪ್ರಸಾದ) ಮಾರಾಟ ಮಾಡುವ ಮೂಲಕ 3.52 ಕೋಟಿ ರೂಪಾಯಿಯನ್ನು ಟಿಡಿಬಿ ಸಂಗ್ರಹ ಮಾಡಿದೆ. ಕನ್ನಿಕ ಸಮರ್ಪನೆ ಮೂಲಕ ಸುಮಾರು 29.30 ಕೋಟಿ ರೂಪಾಯಿಯನ್ನು ಸಂಗ್ರಹ ಮಾಡಿದೆ. ಇನ್ನು ಕಾಣಿಕೆಯ ಮೂಲಕ ಬಂದ ಹಣದ ಒಂದು ಭಾಗದ ಎಣಿಕೆ ಇನ್ನೂ ಉಳಿದಿರುವ ಕಾರಣ ದೇವಾಲಯದ ಆದಾಯವು ಇನ್ನಷ್ಟು ಹೆಚ್ಚು ಆಗಲಿದೆ.
ಕೋವಿಡ್ಗೂ ಮುನ್ನ ಎಷ್ಟಿತ್ತು ಆದಾಯ?
2019 ರಲ್ಲಿ ಕೊರೊನಾ ವೈರಸ್ ಸೋಂಕು ದೇಶದಲ್ಲಿ ಕಾಣಿಸಿಕೊಳ್ಳುವುದಕ್ಕೂ ಮೊದಲು ಶಬರಿಮಲೆಯ ಆದಾಯವು 156 ಕೋಟಿ ರೂಪಾಯಿ ಆಗಿದೆ. ಆದರೆ ಕೊರೊನಾ ವೈರಸ್ ಸೋಂಕಿನ ಸಂದರ್ಭದಲ್ಲಿದ್ದ ನಿರ್ಬಂಧದ ಹಿನ್ನೆಲೆ ಆದಾಯವು 8.39 ಕೋಟಿಗೆ ಇಳಿಕೆ ಕಂಡಿದೆ. ಆದರೆ ಬಳಿಕ ನಿರ್ಬಂಧವನ್ನು ಸಡಿಲಿಕೆ ಮಾಡಿದ್ದು ಈ ಬಾರಿ 10.35 ಲಕ್ಷ ತೀರ್ಥಯಾತ್ರಿಕರು ಶಬರಿಮಲೆಗೆ ಭೇಟಿ ನೀಡಿದ್ದಾರೆ. ಹಾಗೆಯೇ ಆದಾಯವು 78.92 ಕೋಟಿ ರೂಪಾಯಿ ಏರಿಕೆ ಆಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications