ಆದಾಯ ತೆರಿಗೆ ಇಲಾಖೆಯಿಂದ ಹೊಸ ಆನ್ ಲೈನ್ ವ್ಯವಸ್ಥೆ ಆರಂಭಿಸಲಾಗಿದೆ. ಇದರ ಮೂಲಕ ಜನರು ವ್ಯಕ್ತಿ ಅಥವಾ ಸಂಸ್ಥೆಗಳ ವಿದೇಶದಲ್ಲಿ ಇರುವ ಲೆಕ್ಕಕ್ಕೆ ನೀಡದ ಆಸ್ತಿ, ಬೇನಾಮಿ ಸ್ವತ್ತು ಅಥವಾ ಯಾವುದೇ ತೆರಿಗೆ ಕಳುವಿನ ಮಾಹಿತಿ ನೀಡಬಹುದು ಎಂದು ಮಂಗಳವಾರ ಸಿಬಿಡಿಟಿ ಹೇಳಿದೆ.
ಇ ಫೈಲಿಂಗ್ ಪೋರ್ಟಲ್ https://www.incometaxindiaefiling.gov.inನಲ್ಲಿ ಸೋಮವಾರ "submit tax evasion petition or benami property holding" ಲಿಂಕ್ ಗೆ ಚಾಲನೆ ನೀಡಲಾಗಿದೆ. ಈಗಾಗಲೇ PAN ಇರುವವರು ಮತ್ತು ಆಧಾರ್ ಇರುವಂಥವರು ಅಥವಾ PAN ಅಥವಾ ಆಧಾರ್ ಯಾವುದೂ ಇಲ್ಲದವರು ದೂರು ನೀಡಬಹುದು.
ಆ ನಂತರ ನೋಂದಾಯಿತಿ ಮೊಬೈಲ್ ಮತ್ತು/ಅಥವಾ ಇ ಮೇಲ್ ಗೆ ಒಟಿಪಿ ಬರುತ್ತದೆ. ಅದನ್ನು ಬಳಸಿ, ಆದಾಯ ತೆರಿಗೆ ಕಾಯ್ದೆ 1961ರ ಉಲ್ಲಂಘನೆ ಬಗ್ಗೆ ದೂರನ್ನು ನೀಡಬಹುದು. ಅದರಲ್ಲಿ ಕಪ್ಪುಹಣ, ತೆರಿಗೆ ವಿಧಿಸುವ ಕಾಯ್ದೆ ಮತ್ತು ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ಹೀಗೆ ಮೂರು ಪ್ರತ್ಯೇಕ ಅರ್ಜಿಗಳು ಇರುತ್ತವೆ. ಆ ಮೂಲಕ ದೂರು ನೀಡಬಹುದು ಎಂದು ತಿಳಿಸಲಾಗಿದೆ.

ಒಂದು ಸಲ ದೂರು ದಾಖಲಾದ ಮೇಲೆ ಇಲಾಖೆಯಿಂದ ವಿಶಿಷ್ಟ ಅಂಕೆಯನ್ನು ನೀಡಲಾಗುತ್ತದೆ. ಅದೇ ವೆಬ್ ಲಿಂಕ್ ನಲ್ಲಿ ದೂರಿನ ಸ್ಥಿತಿಯನ್ನು ಪರಿಶೀಲಿಸಬಹುದು. ಇನ್ನು ಈ ವ್ಯವಸ್ಥೆ ಮೂಲಕ "ಮಾಹಿತಿದಾರರಾಗಿ", ಬಹುಮಾನವನ್ನು ಸಹ ಪಡೆಯಬಹುದು. ಇಷ್ಟು ಸಮಯ ಇಂಥ ದೂರು ನೀಡಬೇಕಿದ್ದಲ್ಲಿ ಭಾರತೀಯ ನಾಗರಿಕರು ಐ.ಟಿ. ತನಿಖಾ ವಿಭಾಗ ದಳದ ಕಚೇರಿಗೆ ವೈಯಕ್ತಿಕವಾಗಿ ಭೇಟಿ ನೀಡಿ, ಮಾಹಿತಿ ನೀಡಬೇಕಿತ್ತು. ವಿದೇಶಿಗರು ಸಾಕ್ಷ್ಯ ಸಹಿತ ಇಮೇಲ್ ಮಾಡಬಹುದಿತ್ತು.
ಈಗ ಇರುವ ನಿಯಮಾವಳಿಗಳ ಪ್ರಕಾರ ಬೇನಾಮಿ ಆಸ್ತಿ ಪ್ರಕರಣದಲ್ಲಿ 1 ಕೋಟಿ ರುಪಾಯಿ ತನಕ, ಇತರ ತೆರಿಗೆ ಕಳುವಿನ ಪ್ರಕರಣಗಳಲ್ಲಿ ಗರಿಷ್ಠ 5 ಕೋಟಿ ರುಪಾಯಿ ತನಕ ಬಹುಮಾನ ಇದೆ. ಅದಕ್ಕೆ ಕೆಲ ನಿಬಂಧನೆಗಳು ಸಹ ಇವೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications