ಕ್ರಿಕೆಟ್ ಅಂದರೆ ಭಾರತೀಯರಿಗೆ ವಿಶೇಷ ಹಬ್ಬ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ಮ್ಯಾಚ್ ಇದ್ದರಂತೂ ಕಣ್ಣು ಎವೆಯಿಕ್ಕದೇ ನೋಡುತ್ತಾರೆ. ಅಂತೆಯೇ, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊನ್ನೆಯ ಪಂದ್ಯವಂತೂ ರೋಚಕಗಳ ಸರಮಾಲೆಯನ್ನೇ ಹೊತ್ತು ತಂದಿತ್ತು. ಏಳು ಬೀಳುಗಳ ಮಧ್ಯೆ, ಸೋಲಿನ ದವಡೆಯಿಂದ ಪಾರಾಗಿ ಭಾರತೀಯರು ಜಯಭೇರಿ ಭಾರಿಸಿದ್ದರು. ಈ ವೇಳೆ, ಭಾರತದ ಆನ್ಲೈನ್ ಶಾಪಿಂಗ್ ಬಹುತೇಕ ಸ್ತಬ್ಧವಾಗಿತ್ತಂತೆ.
ಇದೇನಚ್ಚರಿ ಎನಿಸಬಹುದು, ಆದರೆ ಇದು ನಿಜ. ಹೂಡಿಕೆ ತಜ್ಞ ಮಿಹಿರ್ ವೋರಾ ಎಂಬುವವರು ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆದ ಭಾನುವಾರ ದಿನದ ಆನ್ಲೈನ್ ವ್ಯಾಪಾರ ವಹಿವಾಟಿನ ಅಂಕಿ ಅಂಶವನ್ನು ಹೊರಹಾಕಿದ್ದು, ಬಹಳ ಸೋಜಿಗ ಎನಿಸುತ್ತದೆ.
"ಭಾರತದ ಶಾಪಿಂಗ್ ಅನ್ನು ವಿರಾಟ್ ಕೊಹ್ಲಿ ನಿಲ್ಲಿಸಿದ್ದಾರೆ.!! ನಿನ್ನೆ (ಅ. 23) ಬೆಳಗ್ಗೆ 9 ಗಂಟೆಯಿಂದ ಸಂಜೆಯವರೆಗಿನ ಯುಪಿಐ ಟ್ರಾನ್ಸಾಕ್ಷನ್ಗಳಿವು. ಪಂದ್ಯ ಕುತೂಹಲ ಹಂತಕ್ಕೆ ಏರುತ್ತಿರುವಂತೆಯೇ ಆನ್ಲೈನ್ ಶಾಪಿಂಗ್ ನಿಂತಿತ್ತು. ಪಂದ್ಯದ ಬಳಿಕ ಶಾಪಿಂಗ್ ಮತ್ತೆ ಗರಿಗೆದರಿತು" ಎಂದು ಮ್ಯಾಕ್ಸ್ ಲೈಫ್ನಲ್ಲಿ ಚೀಫ್ ಇನ್ವೆಸ್ಟ್ಮೆಂಟ್ ಆಫೀಸರ್ ಆಗಿರುವ ಮಿಹಿರ್ ವೋರಾ ನಿನ್ನೆ ಸೋಮವಾರ ಟ್ವೀಟ್ ಮಾಡಿದ್ದಾರೆ.

ಭಾನುವಾರ ದಿನದ ಆನ್ಲೈನ್ ಶಾಪಿಂಗ್ನ ಹಣದ ವಹಿವಾಟಿನ ಮಾಹಿತಿಯನ್ನು ಮಿಹಿರ್ ಅವರು ಗ್ರಾಫಿಕ್ಸ್ ಸಮೇತ ಬಿಡಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಪಂದ್ಯ ಭಾನುವಾರ ಮಧ್ಯಾಹ್ನ 1 ಗಂಟೆಯ ನಂತರ ಶುರುವಾಗಿದ್ದು. ಅಲ್ಲಿಯವರೆಗೆ ದೀಪಾವಳಿಯ ಶಾಪಿಂಗ್ನಲ್ಲಿ ಜನರು ನಿರತರಾಗಿದ್ದ ಅಂಶವನ್ನು ಗಮನಿಸಬಹುದು. ಪಂದ್ಯ ಶುರುವಾದ ಬಳಿಕ ಶಾಪಿಂಗ್ ದರ ಇಳಿಮುಖವಾಗುತ್ತಾ ಹೋಗುತ್ತದೆ.
ಪಂದ್ಯ ಮುಗಿಯುವವರೆಗೂ ಇಳಿಮುಖದ ಟ್ರೆಂಡಿಂಗ್ ಕಾಣುತ್ತದೆ. ಆದರೆ, ಪಾಕಿಸ್ತಾನದ ಬ್ಯಾಟಿಂಗ್ ಮುಗಿದು ಭಾರತದ ಚೇಸಿಂಗ್ ನಿರ್ಣಾಯಕ್ಕೆ ಹಂತಕ್ಕೆ ಬಂದಾಗ ಶಾಪಿಂಗ್ ದರ ಬಹಳ ತೀರಾ ಕೆಳಗೆ ಕುಸಿದಿರುವುದನ್ನು ಕಾಣಬಹುದು. ಈ ಪಂದ್ಯ ಮುಗಿದ ಬಳಿಕ ಗ್ರಾಫಿಕ್ಸ್ನಲ್ಲಿ ಹಳದಿ ಪಟ್ಟಿ ಮತ್ತೆ ಮೇಲೆದ್ದಿರುವುದುನ್ನೂ ಕಾಣಬಹುದು.
ಭಾರತದಲ್ಲಿ ಕ್ರಿಕೆಟ್ ಆಟವನ್ನು ನೀವು ಹಲವು ವರ್ಷಗಳಿಂದ ಗಮನಿಸುತ್ತಾ ಬಂದಿದ್ದರೆ ಇದು ಅಷ್ಟೇನೂ ಅಚ್ಚರಿ ಎನಿಸದು. ಪ್ರಮುಖ ತಂಡಗಳ ಜೊತೆ ಭಾರತ ಕ್ರಿಕೆಟ್ ಪಂದ್ಯ ಆಡುವ ವೇಳೆ ನೀವು ರಸ್ತೆಯಲ್ಲಿ ವಾಹನಗಳ ಸಂಚಾರ ಬಹಳ ಕಡಿಮೆ ಆಗುವುದನ್ನು ಗಮನಿಸಬಹುದು. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯುತ್ತಿದ್ದಾಗಲಂತೂ ಹಲವು ರಸ್ತೆಗಳು ಕರ್ಫ್ಯೂ ಹೇರಿದ ರೀತಿಯಲ್ಲಿ ಬಿಕೋ ಎನಿತ್ತಿರುತ್ತವೆ. ಮೊನ್ನೆಯ ಭಾರತ ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ವೇಳೆ ಆನ್ಲೈನ್ ವಹಿವಾಟಿನ ದರ ಕಡಿಮೆಗೊಂಡಿದ್ದರಲ್ಲಿ ಆಶ್ಚರ್ಯ ಎನಿಸದು.

ಕಿಂಗ್ ಕೊಹ್ಲಿ ಧಮಾಕ
ವಿರಾಟ್ ಕೊಹ್ಲಿ ಬಹುತೇಕ ಏಕಾಂಗಿಯಾಗಿ ಈ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಗೆಲ್ಲಲು ಪಾಕಿಸ್ತಾನ ಒಡ್ಡಿದ 160 ರನ್ ಗುರಿಯನ್ನು ಭಾರತ ಕೊನೆಯ ಎಸೆತದಲ್ಲಿ ಮುಟ್ಟಿತ್ತು. ಚೇಸಿಂಗ್ನ 19ನೇ ಓವರ್ ಭಾರತಕ್ಕೆ ನಿರ್ಣಾಯಕವಾಗಿತ್ತು. ವಿರಾಟ್ ಕೊಹ್ಲಿ ಸಿಡಿಸಿದ 2 ಅದ್ಭುತ ಸಿಕ್ಸರ್ಗಳು ಪಂದ್ಯದ ಗತಿಯನ್ನು ಬದಲಾಯಿಸಿತು. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಟೇಲ್ ಔಟ್ ಆದ ಬಳಿಕ ಭಾರತಕ್ಕೆ ಗೆಲುವು ಬಹುತೇಕ ಕಷ್ಟಸಾಧ್ಯ ಎನಿಸಿತ್ತು. ಆದರೆ, ವಿರಾಟ್ ಕೊಹ್ಲಿ ತಾನೆಂಥ ಆಟಗಾರ ಎಂಬುದನ್ನು ನಿಚ್ಚಳವಾಗಿ ಸಾಬೀತುಪಡಿಸಿದರು. ಅವರ 82 ರನ್ ಇನ್ನಿಂಗ್ಸ್ ಭಾರತಕ್ಕೆ ಸಧಾ ಗೆಲುವಿನ ಆಸೆ ಬಿಟ್ಟುಹೋಗದಂತೆ ನೋಡಿಕೊಂಡಿತು.
ಕೈತಪ್ಪಿ ಹೋಗುವಂತಿದ್ದ ಪಂದ್ಯ ಕಿಂಗ್ ಕೊಹ್ಲಿ ಆಟದಿಂದಾಗಿ ಭಾರತಕ್ಕೆ ವಾಪಸ್ ದಕ್ಕಿತು. ಕೊನೆಯ ಎರಡು ಎಸೆತ ಇದ್ದಾಗ ಕ್ರೀಸ್ಗೆ ಬಂದ ಆರ್ ಅಶ್ವಿನ್ ಅವರ ಜಾಣ್ಮೆಯ ಬ್ಯಾಟಿಂಗ್ ಭಾರತಕ್ಕೆ ಗೆಲುವಿನ ರನ್ ತಂದುಕೊಟ್ಟಿತು. ದುಬೈನಲ್ಲಿ ನಡೆದ ಕಳೆದ ಬಾರಿಯ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಆದ ಸೋಲಿಗೆ ಭಾರತ ಈಗ ಮೆಲ್ಬೋರ್ನ್ನಲ್ಲಿ ಸೇಡು ತೀರಿಸಿಕೊಂಡಿತು. ಅ. 27ರಂದು ಸಿಡ್ನಿಯಲ್ಲಿ ಭಾರತ ತನ್ನ ಮುಂದಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರುಗೊಳ್ಳುತ್ತಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications