ಕೊರೊನಾವೈರಸ್ನಿಂದ ಭಾರತ ಲಾಕ್ಡೌನ್ ಆಗುವುದಕ್ಕೂ ಮೊದಲು ತಮ್ಮ ವಿದೇಶದಲ್ಲಿರುವ ಮಕ್ಕಳನ್ನು ಕರೆತರಲು ಶ್ರೀಮಂತ ಪೋಷಕರು ಲಕ್ಷಗಟ್ಟಲೇ ಹಣವನ್ನು ಖರ್ಚು ಮಾಡಿದ್ದರು ಎಂದು ಬಹಿರಂಗವಾಗಿದೆ.
ಮಾರ್ಚ್ 8 ರಿಂದ 21 ರವರೆಗೆ ಎರಡು ವಾರಗಳ ಅವಧಿಯಲ್ಲಿ ಸ್ವದೇಶಕ್ಕೆ ಖಾಸಗಿ ವಿಮಾನಗಳ ಮೂಲಕ ಹದಿ ಹರೆಯದ ಯುವಕ- ಯುವತಿಯರು ಆಗಮಿಸಿದ್ದರು. ಅದರಲ್ಲೂ ಪ್ರಮುಖವಾಗಿ ದೆಹಲಿ ಮತ್ತು ಮುಂಬೈನಲ್ಲಿ ಅತಿ ಹೆಚ್ಚು ಖಾಸಗಿ ಜೆಟ್ಗಳು ಬಂದಿಳಿದಿವೆ ಎಂದು ಸುದ್ದಿಯಾಗಿದೆ.
ಮುಂಬೈ ಮತ್ತು ದೆಹಲಿ ನಗರಗಳ ಶ್ರೀಮಂತರು ವಿದೇಶಗಳ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಮಕ್ಕಳನ್ನು ಕರೆತರಲು ಖಾಸಗಿ ಜೆಟ್ಗಳನ್ನೇ ಬುಕ್ ಮಾಡಿದ್ದರು. ಒಂದು ಖಾಸಗಿ ಜೆಟ್ನಲ್ಲಿ ಇಬ್ಬರು ಇಲ್ಲವೇ ಮೂವರು ಬಂದಿರುವ ಉದಾಹರಣೆಯು ದಾಖಲಾಗಿದೆ. ಇದಕ್ಕಾಗಿ 90 ಲಕ್ಷದಿಂದ ಒಂದು ಕೋಟಿ ರುಪಾಯಿ ಖರ್ಚು ಮಾಡಿದ್ದಾರೆ.
ಖಾಸಗಿ ಜೆಟ್ಗಳನ್ನು ಬಾಡಿಗೆ ತೆಗೆದುಕೊಂಡಿದ್ದ ಶ್ರೀಮಂತರು
ಕೊರೊನಾವೈರಸ್ ಹರಡುವಿಕೆ ಹೆಚ್ಚಾದಂತೆ ಭಾರತ ಸರ್ಕಾರ ವಾಯು ಪ್ರದೇಶವನ್ನು ಯಾವುದೇ ಸಮಯದಲ್ಲಿ ಬೀಗ ಹಾಕಬಹುದು ಎಂಬುದು ಸ್ಪಷ್ಟವಾಗುತ್ತಿದ್ದಂತೆ. ಭಾರತದ ಶ್ರೀಮಂತರು ಐಷಾರಾಮಿ ಖಾಸಗಿ ಜೆಟ್ಗಳನ್ನು ಬಾಡಿಗೆಗೆ ತೆಗೆದುಕೊಂಡು ವಿದೇಶದಲ್ಲಿ ಅಧ್ಯಯನ ಮಾಡುವ ತಮ್ಮ ಮಕ್ಕಳನ್ನು ಮನೆಗೆ ಹಿಂದಿರುಗಿಸಲು ಮುಂದಾದರು.
ಇಂಗ್ಲೆಂಡ್, ಫ್ರಾನ್ಸ್, ಜರ್ಮನಿಯಿಂದ ಮಕ್ಕಳು ವಾಪಸ್
ಮಾರ್ಚ್ 21 ರಂದು ಸರ್ಕಾರವು ಒಳಬರುವ ವಾಣಿಜ್ಯ ವಿಮಾನಗಳನ್ನು ನಿಲ್ಲಿಸುವ ಎರಡು ವಾರಗಳ ಮೊದಲು, 102 ಖಾಸಗಿ ಚಾರ್ಟರ್ ಫ್ಲೈಟ್ಗಳು ಯುನೈಟೆಡ್ ಕಿಂಗ್ಡಮ್ ಮತ್ತು ಯುರೋಪಿನ ವಿಶ್ವವಿದ್ಯಾಲಯಗಳಿಂದ ಶ್ರೀಮಂತರ ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದವು. ಅದರಲ್ಲೂ ಹೆಚ್ಚಾಗಿ ಫ್ರಾನ್ಸ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ಹಾಗೂ ಇಂಗ್ಲೆಂಡ್ನಿಂದಲೇ ಅತಿ ಹೆಚ್ಚು ವಿಮಾನಗಳು ಆಗಮಿಸಿವೆ.
ಕೇವಲ ಇಬ್ಬರು, ಮೂವರಿಗೆ ಐಷಾರಾಮಿ ಜೆಟ್ಗಳು
ವಾಯುಯಾನ ಬಂದ್ಗೂ ಮೊದಲು ಎರಡು ವಾರಗಳು ದೆಹಲಿ ಮತ್ತು ಮುಂಬೈಗೆ ಐಷಾರಾಮಿ ಜೆಟ್ಗಳು ಬಂದಿಳಿದವು. ಡಸಾಲ್ಟ್ ಫಾಲ್ಕನ್ 2000, ಬೊಂಬಾರ್ಡಿಯರ್ ಚಾಲೆಂಜರ್ ಸೀರಿಸ್ ಮತ್ತು ಹಾಕರ್ ವ್ಯಾಪಾರ ವಿಮಾನಗಳಂತಹ ಉನ್ನತ-ಮಟ್ಟದ ಐಷಾರಾಮಿ ಜೆಟ್ಗಳನ್ನು ಒಳಗೊಂಡಿತ್ತು. ಇವುಗಳನ್ನು ಕೇವಲ ಒಂದು ವಾಯುಯಾನ ಸಂಸ್ಥೆ ಆಯೋಜಿಸಿದೆ.
ಇನ್ನೂ 31 ಬಿಜ್ ಜೆಟ್ ವಿಮಾನಗಳು ಆ ಎರಡು ವಾರಗಳಲ್ಲಿ ಹಿರಿಯ ನಾಗರೀಕರನ್ನು, ಹೆಚ್ಚಾಗಿ ಉದ್ಯಮಿಗಳ ಪೋಷಕರನ್ನು, ಶ್ರೇಣಿ 2 ಮತ್ತು ಶ್ರೇಣಿ 1 ನಗರಗಳಾದ ದೆಹಲಿ ಮತ್ತು ಮುಂಬೈಗಳ ನಡುವೆ ಸಾಗಿಸುತ್ತಿದ್ದವು.
85 ಪರ್ಸೆಂಟ್ ವಿಮಾನಗಳು ಕೇವಲ ಒಬ್ಬರು ಇಬ್ಬರನ್ನು ಕರೆತಂದಿದ್ದವು
"85 ಪರ್ಸೆಂಟ್ನಷ್ಟು ಈ ವಿಮಾನಗಳಲ್ಲಿ ಒಂದರಿಂದ ಮೂರು ಪ್ರಯಾಣಿಕರ ನಡುವೆ ಸಾಗಿಸಲ್ಪಟ್ಟಿದೆ" ಎಂದು ಜೆಟ್ಸೆಟ್ಗೊ ಸಂಸ್ಥಾಪಕ ಕಾನಿಕಾ ತೆಕ್ರಿವಾಲ್ ಹೇಳಿದ್ದಾರೆ. ವಿಮಾನ ಹಾರಾಟದಲ್ಲಿ ಉಬರ್ ಆಫ್ ಸ್ಪೈಸ್ ಎಂದು ಪ್ರಸಿದ್ಧವಾಗಿರುವ ಟೆಕ್ರಿವಾಲ್ ಸಂಸ್ಥೆಯು ಭಾರತೀಯ ಖಾಸಗಿ ವಾಯುಯಾನ ಮಾರುಕಟ್ಟೆಯಲ್ಲಿ 21.7 ಪರ್ಸೆಂಟ್ರಷ್ಟು ನಿಯಂತ್ರಣ ಹೊಂದಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications