ಗ್ರಾಹಕರಿಗೆ ಪಾವತಿ ಮಾಡಬೇಕಿರುವ 'ಕ್ರೆಡಿಟ್ ಶೆಲ್' ಎಲ್ಲ ಬಾಕಿ ಮೊತ್ತವನ್ನು ಜನವರಿ 31, 2021ರೊಳಗೆ ನೀಡುವುದಾಗಿ ಸೋಮವಾರ ಇಂಡಿಗೋ ಏರ್ ಲೈನ್ಸ್ ಘೋಷಣೆ ಮಾಡಿದೆ. ಗ್ರಾಹಕರಿಗೆ ನೀಡಬೇಕಿದ್ದ ಮೊತ್ತದಲ್ಲಿ ಶೇ 90ರಷ್ಟು, ಅಂದಾಜು 1000 ಕೋಟಿ ರುಪಾಯಿಯನ್ನು ಪಾವತಿ ಮಾಡಲಾಗಿ ಎಂದು ಸಂಸ್ಥೆಯು ಮಾಹಿತಿ ನೀಡಿದೆ.
ಲಾಕ್ ಡೌನ್ ಘೋಷಣೆ ಮಾಡಿದ ನಂತರ ಎಲ್ಲ ವಿಮಾನಗಳ ಹಾರಾಟ ರದ್ದು ಮಾಡಲಾಯಿತು. ಹಲವು ವಿಮಾನ ಯಾನ ಸಂಸ್ಥೆಗಳು ಟಿಕೆಟ್ ಹಣವನ್ನು ಕ್ರೆಡಿಟ್ ಶೆಲ್ ನಲ್ಲಿ ಹಾಕಿದವು. ಅದನ್ನು ನಂತರದ ದಿನಗಳಲ್ಲಿ ರಿಡೀಮ್ ಮಾಡಿಕೊಳ್ಳಬಹುದು ಎಂದಿದ್ದವು. ಇದರಿಂದಾಗಿ ಲಾಕ್ ಡೌನ್ ಅವಧಿಯಲ್ಲಿ ಗ್ರಾಹಕರ ಟಿಕೆಟ್ ಹಣವನ್ನು ಹಿಂತಿರುಗಿಸದೆ ಏರ್ ಲೈನ್ಸ್ ಗಳು ತಮ್ಮ ಬಳಿಕೆಯೇ ಇರಿಸಿಕೊಂಡವು.
"ದಿಢೀರ್ ಕಾಣಿಸಿಕೊಂಡ ಕೋವಿಡ್ 19 ಮತ್ತು ಅದರ ಪರಿಣಾಮವಾಗಿ ಘೋಷಣೆ ಮಾಡಿದ ಲಾಕ್ ಡೌನ್ ನಿಂದಾಗಿ ಈ ವರ್ಷದ ಮಾರ್ಚ್ ಅಂತ್ಯದ ಹೊತ್ತಿಗೆ ನಮ್ಮ ಕಾರ್ಯಾಚರಣೆ ಸಂಪೂರ್ಣ ನಿಂತುಹೋಯಿತು. ನಮಗೆ ಬರಬೇಕಿ ಹಣದ ಒಳಹರಿವಿಗೂ ನಿಂತಿತು. ರದ್ದಾದ ವಿಮಾನಗಳ ರೀಫಂಡ್ ತಕ್ಷಣಕ್ಕೆ ಮಾಡಲು ಆಗಲಿಲ್ಲ. ನಮ್ಮ ಗ್ರಾಹಕರಿಗೆ ನೀಡಬೇಕಾದ ಹಣಕ್ಕೆ ಆಗ ಕ್ರೆಡಿಟ್ ಶೆಲ್ ಸೃಷ್ಟಿಸಬೇಕಾಯಿತು," ಎಂದು ಇಂಡಿಗೋದ ಸಿಇಒ ರೋನೋಜಾಯ್ ದತ್ತಾ ಹೇಳಿದ್ದಾರೆ.

ಆದರೆ, ಮತ್ತೆ ಕಾರ್ಯ ನಿರ್ವಹಣೆ ಆರಂಭವಾದ ಮೇಲೆ ಬೇಡಿಕೆ ಹೆಚ್ಚುತ್ತಿದೆ. ದತ್ತಾ ಹೇಳುತ್ತಿರುವಂತೆ, ಈಗ ಕಂಪೆನಿ ಆದ್ಯತೆ ಕ್ರೆಡಿಟ್ ಶೆಲ್ ಮೊತ್ತದ ರೀಫಂಡ್ ಆಗಿದೆ. ಜನವರಿ 31, 2021ರೊಳಗೆ 100 ಪರ್ಸೆಂಟ್ ನಷ್ಟು ಪೂರ್ತಿ ಕ್ರೆಡಿಟ್ ಶೆಲ್ ಪಾವತಿಯನ್ನು ಮಾಡಲಾಗುತ್ತದೆ. ಹಿಂದೆಂದೂ ಕಂಡಿರದಂಥ ಬಿಕ್ಕಟ್ಟಿನ ಸಮಯದಲ್ಲಿ ಗ್ರಾಹಕರು ನಮ್ಮ ಜತೆಗಿದ್ದು, ಸಂಯಮದಿಂದ ಕಾದಿದ್ದಾರೆ. ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
ವೇತನ ರಹಿತ ರಜಾ ನಿಯಮವನ್ನು ಕಳೆದ ವಾರ ಇಂಡಿಗೋದಿಂದ ತೆಗೆಯಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಸಿಬ್ಬಂದಿಗೆ ಈ ನಿಯಮವನ್ನು ತರಲಾಗಿತ್ತು.
More From GoodReturns

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ



Click it and Unblock the Notifications