ಗ್ರಾಹಕರಿಗೆ ಪಾವತಿ ಮಾಡಬೇಕಿರುವ 'ಕ್ರೆಡಿಟ್ ಶೆಲ್' ಎಲ್ಲ ಬಾಕಿ ಮೊತ್ತವನ್ನು ಜನವರಿ 31, 2021ರೊಳಗೆ ನೀಡುವುದಾಗಿ ಸೋಮವಾರ ಇಂಡಿಗೋ ಏರ್ ಲೈನ್ಸ್ ಘೋಷಣೆ ಮಾಡಿದೆ. ಗ್ರಾಹಕರಿಗೆ ನೀಡಬೇಕಿದ್ದ ಮೊತ್ತದಲ್ಲಿ ಶೇ 90ರಷ್ಟು, ಅಂದಾಜು 1000 ಕೋಟಿ ರುಪಾಯಿಯನ್ನು ಪಾವತಿ ಮಾಡಲಾಗಿ ಎಂದು ಸಂಸ್ಥೆಯು ಮಾಹಿತಿ ನೀಡಿದೆ.
ಲಾಕ್ ಡೌನ್ ಘೋಷಣೆ ಮಾಡಿದ ನಂತರ ಎಲ್ಲ ವಿಮಾನಗಳ ಹಾರಾಟ ರದ್ದು ಮಾಡಲಾಯಿತು. ಹಲವು ವಿಮಾನ ಯಾನ ಸಂಸ್ಥೆಗಳು ಟಿಕೆಟ್ ಹಣವನ್ನು ಕ್ರೆಡಿಟ್ ಶೆಲ್ ನಲ್ಲಿ ಹಾಕಿದವು. ಅದನ್ನು ನಂತರದ ದಿನಗಳಲ್ಲಿ ರಿಡೀಮ್ ಮಾಡಿಕೊಳ್ಳಬಹುದು ಎಂದಿದ್ದವು. ಇದರಿಂದಾಗಿ ಲಾಕ್ ಡೌನ್ ಅವಧಿಯಲ್ಲಿ ಗ್ರಾಹಕರ ಟಿಕೆಟ್ ಹಣವನ್ನು ಹಿಂತಿರುಗಿಸದೆ ಏರ್ ಲೈನ್ಸ್ ಗಳು ತಮ್ಮ ಬಳಿಕೆಯೇ ಇರಿಸಿಕೊಂಡವು.
"ದಿಢೀರ್ ಕಾಣಿಸಿಕೊಂಡ ಕೋವಿಡ್ 19 ಮತ್ತು ಅದರ ಪರಿಣಾಮವಾಗಿ ಘೋಷಣೆ ಮಾಡಿದ ಲಾಕ್ ಡೌನ್ ನಿಂದಾಗಿ ಈ ವರ್ಷದ ಮಾರ್ಚ್ ಅಂತ್ಯದ ಹೊತ್ತಿಗೆ ನಮ್ಮ ಕಾರ್ಯಾಚರಣೆ ಸಂಪೂರ್ಣ ನಿಂತುಹೋಯಿತು. ನಮಗೆ ಬರಬೇಕಿ ಹಣದ ಒಳಹರಿವಿಗೂ ನಿಂತಿತು. ರದ್ದಾದ ವಿಮಾನಗಳ ರೀಫಂಡ್ ತಕ್ಷಣಕ್ಕೆ ಮಾಡಲು ಆಗಲಿಲ್ಲ. ನಮ್ಮ ಗ್ರಾಹಕರಿಗೆ ನೀಡಬೇಕಾದ ಹಣಕ್ಕೆ ಆಗ ಕ್ರೆಡಿಟ್ ಶೆಲ್ ಸೃಷ್ಟಿಸಬೇಕಾಯಿತು," ಎಂದು ಇಂಡಿಗೋದ ಸಿಇಒ ರೋನೋಜಾಯ್ ದತ್ತಾ ಹೇಳಿದ್ದಾರೆ.

ಆದರೆ, ಮತ್ತೆ ಕಾರ್ಯ ನಿರ್ವಹಣೆ ಆರಂಭವಾದ ಮೇಲೆ ಬೇಡಿಕೆ ಹೆಚ್ಚುತ್ತಿದೆ. ದತ್ತಾ ಹೇಳುತ್ತಿರುವಂತೆ, ಈಗ ಕಂಪೆನಿ ಆದ್ಯತೆ ಕ್ರೆಡಿಟ್ ಶೆಲ್ ಮೊತ್ತದ ರೀಫಂಡ್ ಆಗಿದೆ. ಜನವರಿ 31, 2021ರೊಳಗೆ 100 ಪರ್ಸೆಂಟ್ ನಷ್ಟು ಪೂರ್ತಿ ಕ್ರೆಡಿಟ್ ಶೆಲ್ ಪಾವತಿಯನ್ನು ಮಾಡಲಾಗುತ್ತದೆ. ಹಿಂದೆಂದೂ ಕಂಡಿರದಂಥ ಬಿಕ್ಕಟ್ಟಿನ ಸಮಯದಲ್ಲಿ ಗ್ರಾಹಕರು ನಮ್ಮ ಜತೆಗಿದ್ದು, ಸಂಯಮದಿಂದ ಕಾದಿದ್ದಾರೆ. ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
ವೇತನ ರಹಿತ ರಜಾ ನಿಯಮವನ್ನು ಕಳೆದ ವಾರ ಇಂಡಿಗೋದಿಂದ ತೆಗೆಯಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಸಿಬ್ಬಂದಿಗೆ ಈ ನಿಯಮವನ್ನು ತರಲಾಗಿತ್ತು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications