ಪೋಸ್ಟ್ ಮ್ಯಾನ್ ಮತ್ತು ಗ್ರಾಮೀಣ್ ಡಾಕ್ ಸೇವಕರೇ ಸದ್ಯದಲ್ಲಿ ಇನ್ಷೂರೆನ್ಸ್ ಪಾಲಿಸಿಗಳ ಮಾರಾಟ ಮಾಡಲಿದ್ದಾರೆ. ಐಆರ್ ಡಿಎಐ ಮಾರ್ಗದರ್ಶಿ ಸೂತ್ರದಂತೆ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಪ್ರಾಯೋಜಕತ್ವದಲ್ಲಿ ಇನ್ಷೂರೆನ್ಸ್ ಮಾರಾಟ ಮಾಡಲಿದ್ದಾರೆ. ಆಂದ ಹಾಗೆ ಐಪಿಪಿಬಿ ಕಾರ್ಪೊರೇಟ್ ಏಜೆಂಟ್ ಆಗಿ, ಐಆರ್ ಡಿಎಐನಿಂದ ಅನುಮತಿ ಕೋರಿದೆ.
ಆ ಮೂಲಕ ಅಂಚೆ ಇಲಾಖೆಯ ಪೋಸ್ಟ್ ಮ್ಯಾನ್ ಹಾಗೂ ಗ್ರಾಮೀಣ್ ಡಾಕ್ ಸೇವಕರಿಗೆ ಪ್ರಾಯೋಜಕತ್ವ ನೀಡಲಿದೆ. ಆ ನಂತರ ಇವರು ಪಾಯಿಂಟ್ ಆಫ್ ಸೇಲ್ಸ್ ಪರ್ಸನ್ (ಪಿಒಎಸ್) ರೀತಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಐಆರ್ ಡಿಎಐ ತಿಳಿಸಿದೆ. ಒಂದು ವೇಳೆ ಅನುಮತಿ ಸಿಕ್ಕಲ್ಲಿ ಐಪಿಪಿಬಿಗೆ ಪಿಒಎಸ್ ನೇಮಕ ಹಾಗೂ ವಜಾ ಮಾಡುವ ಜವಾಬ್ದಾರಿ ಇರುತ್ತದೆ.
ಎಲ್ಲೆಲ್ಲಿ ಕಡಿಮೆ ಬ್ಯಾಂಕ್ ಗಳಿವೆಯೋ ಅಥವಾ ಬ್ಯಾಂಕ್ ಇಲ್ಲವೋ ಅಂಥ ಕಡೆಗಳಲ್ಲಿ ಈ ಪೋಸ್ಟ್ ಮ್ಯಾನ್ ಮತ್ತು ಗ್ರಾಮೀಣ್ ಡಾಕ್ ಸೇವಕರು ಕೆಲಸ ನಿರ್ವಹಿಸುತ್ತಾರೆ. ತೀರಾ ದೂರದ ಹಾಗೂ ಹಳ್ಳಿಗಾಡಿನ ಪ್ರದೇಶದಲ್ಲಿ ಇನ್ಷೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ.

ಅಂದ ಹಾಗೆ ಇನ್ಷೂರೆನ್ಸ್ ಪಾಲಿಸಿಗಳು ಅಟೋಮೆಟಿಕ್ ಆಗಿ ಸಿಸ್ಟಮ್ ನಿಂದ ಜನರೇಟ್ ಆಗುತ್ತದೆ. ಇದರಲ್ಲಿ ಇತರರ ಹಸ್ತಕ್ಷೇಪ ಬಹಳ ಕಡಿಮೆ ಇರುತ್ತದೆ. ಮತ್ತು ಇಂಥ ಕೆಲಸಕ್ಕೆ ನಿಯೋಜಿಸಿಕೊಳ್ಳುವವರಿಗೆ ಕನಿಷ್ಠ ಮಟ್ಟದ ತರಬೇತಿ ಮತ್ತು ಪರೀಕ್ಷೆ ಸಾಕಾಗುತ್ತದೆ ಎಂದು ಐಆರ್ ಡಿಎಐ ತಿಳಿಸಿದೆ.
ಪೋಸ್ಟ್ ಮ್ಯಾನ್ ಮತ್ತು ಗ್ರಾಮೀಣ್ ಡಾಕ್ ಸೇವಕರಿಗೆ ತರಬೇತಿ ಹಾಗೂ ಪ್ರಮಾಣ ಪತ್ರ ನೀಡುವ ಜವಾಬ್ದಾರಿ ಐಪಿಪಿಬಿಗೆ ಸೇರಿರುತ್ತದೆ. ನಿತ್ಯದ ವ್ಯವಹಾರಗಳನ್ನು ನೋಡಿಕೊಳ್ಳುವುದು, ವ್ಯವಹಾರಗಳ ಬಗ್ಗೆ ವರದಿಯನ್ನು ನೀಡುವುದು, ಸಮಸ್ಯೆಗಳು ಕಂಡುಬಂದಲ್ಲಿ ಅವುಗಳನ್ನು ಬಗೆಹರಿಸುವುದು ಎಲ್ಲವೂ ತರಬೇತಿ ಪೂರ್ಣಗೊಳಿಸಿದವರದೇ ಆಗಿರುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications