ಭಾರತದ ಷೇರುಪೇಟೆಯಲ್ಲಿ ಹೂಡಿಕೆದಾರರು ಸತತವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಮಂಗಳವಾರ(ಜೂನ್ 7)ದಂದು ಸರಿ ಸುಮಾರು 6.47 ಲಕ್ಷ ಕೋಟಿ ರು ನಷ್ಟ ದಾಖಲಾಗಿದೆ. ದಿನದ ವಹಿವಾಟು ಅಂತ್ಯಕ್ಕೆ ಬಿಎಸ್ಸಿ ಸೆನ್ಸೆಕ್ಸ್ 568 ಅಂಕ ಅಥವಾ ಶೇಕಡ 1.02 ಇಳಿಕೆ ಕಂಡು 55,107.34ಕ್ಕೆ ತಲುಪಿದೆ. ಎನ್ಎಸ್ಸಿ ನಿಫ್ಟಿ 153 ಅಂಕ ಅಥವಾ ಶೇಕಡ 0.92 ಕುಸಿದು 16,416ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು ಮಿಡ್, ಸ್ಮಾಲ್ ಕ್ಯಾಪ್ ಷೇರುಗಳು ಕ್ರಮವಾಗಿ ಶೇಕಡ 0.67, ಶೇಕಡ 0.59 ಕುಸಿದಿದೆ
ಟೈಟಾನ್ ಷೇರುಗಳು ಭಾರೀ ನಷ್ಟವನ್ನು ಅನುಭವಿಸಿದೆ. ಶೇಕಡ 4.48ರಷ್ಟು ಕುಸಿದು ರೂಪಾಯಿ 2,100.05ಕ್ಕೆ ತಲುಪಿದೆ. ಇನ್ನು ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಟಿಸಿಎಸ್, ಐಸಿಐಸಿಐ ಬ್ಯಾಂಕ್, ಯುಪಿಎಲ್, ಡಾ. ರೆಡ್ಡೀಸ್, ಬ್ರಿಟಾನಿಯಾ ಹಾಗೂ ಎಲ್&ಟಿ ಕೂಡಾ ಕೆಳಕ್ಕಿಳಿದಿದೆ. ಇನ್ನು ಬಿಎಸ್ಇಯಲ್ಲಿ 1,290 ಷೇರುಗಳು ಮುನ್ನಡೆ ಸಾಧಿಸಿದ್ದರೆ, 2,003 ಷೇರುಗಳು ಕುಸಿದಿದೆ.
ಬಿಎಸ್ಇಯಲ್ಲಿ ನೋಂದಾಯಿತ ಪ್ರಮುಖ ಕಂಪನಿಗಳು 2,08,291.75 ಕೋಟಿ ರು ನಷ್ಟ ಅನುಭವಿಸಿ 2,54,33,013.63 ಕೋಟಿ ರು ಮೌಲ್ಯಕ್ಕೆ ತಲುಪಿವೆ.

"ಬುಧವಾರದಂದು ಆರ್ಬಿಐನ ಕ್ರೆಡಿಟ್ ನೀತಿ ಘೋಷಣೆ ಸಾಧ್ಯತೆಯಿದ್ದು, ಇದಕ್ಕೂ ಮುನ್ನ ಹೂಡಿಕೆದಾರರು ಕಾಯ್ದು ನೋಡುವ ಮನಸ್ಥಿತಿಯಲ್ಲಿದ್ದಾರೆ. ರೂಪಾಯಿ ಮೌಲ್ಯ ಕುಸಿತ ಮತ್ತು ಡಾಲರ್ನ ಬಲವರ್ಧನೆಯ ಮಧ್ಯೆ ಭಾರತೀಯ ಷೇರುಗಳನ್ನು ಕೇಳುವವರಿಲ್ಲ, ನಿರಂತರ ಎಫ್ಐಐ ಮಾರಾಟದ ಹೊರೆಯನ್ನು ಮಾರುಕಟ್ಟೆಯು ಸರಳವಾಗಿ ಭರಿಸಿದೆ" ಎಂದು ಕೋಟಕ್ ಸೆಕ್ಯುರಿಟೀಸ್ ಲಿಮಿಟೆಡ್ನಲ್ಲಿ ಸಂಶೋಧನೆ (ರೀಟೈಲ್) ಈಕ್ವಿಟಿ ಮುಖ್ಯಸ್ಥ ಶ್ರೀಕಾಂತ್ ಚೌಹಾಣ್ ಹೇಳಿದ್ದಾರೆ.
ಇದೇ ವೇಳೆ ಎನ್ ಟಿ ಪಿ ಸಿ, ಮಾರುತಿ, ಎಂ ಅಂಡ್ ಎಂ, ಭಾರ್ತಿ ಏರ್ ಟೆಲ್, ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಪವರ್ ಗ್ರಿಡ್ ಉತ್ತಮ ಕಾರ್ಯ ನಿರ್ವಹಣೆ ತೋರಿ ಲಾಭದತ್ತ ಮುಖ ಮಾಡಿದ್ದವು.
''ಬುಧವಾರ ನಡೆಯಲಿರುವ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯ ಫಲಿತಾಂಶದ ಮೇಲೆ ಎಲ್ಲರ ಗಮನ ನೆಟ್ಟಿದೆ. ಜಾಗತಿಕ ಮಾರುಕಟ್ಟೆಗಳಲ್ಲಿನ ಏರಿಳಿತ, ಬ್ಯಾಂಕಿಂಗ್, ಎಫ್ಎಂಸಿಜಿ ಮತ್ತು ಐಟಿ ಪ್ರಮುಖ ಸಂಸ್ಥೆಗಳ ಮಾರಾಟ ಮುಂದುವರೆದಿದೆ''ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್ನ ವಿಪಿ - ರಿಸರ್ಚ್ ಅಜಿತ್ ಮಿಶ್ರಾ ಹೇಳಿದ್ದಾರೆ.

ವಿಶಾಲ ಮಾರುಕಟ್ಟೆಯಲ್ಲಿ, ಬಿಎಸ್ಇ ಮಿಡ್ಕ್ಯಾಪ್ ಗೇಜ್ ಶೇಕಡಾ 0.77 ರಷ್ಟು ಕುಸಿದಿದೆ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕವು ಶೇಕಡಾ 0.67 ರಷ್ಟು ಕುಸಿದಿದೆ.
ಬಿಎಸ್ಇ ವಲಯದ ಸೂಚ್ಯಂಕಗಳಲ್ಲಿ, Consumer durable ಸೂಚ್ಯಂಕಗಳು ಶೇಕಡಾ 2.71 ರಷ್ಟು ಕುಸಿದವು, ನಂತರ ರಿಯಾಲ್ಟಿ (ಶೇ 1.57), ಕ್ಯಾಪಿಟಲ್ ಗೂಡ್ಸ್ (ಶೇ 1.53), ಎಫ್ಎಂಸಿಜಿ (ಶೇ 1.42), ಐಟಿ (ಶೇ 1.42), ಟೆಕ್ (ಶೇ 1.32) ಮತ್ತು ಮೂಲ ಸಾಮಗ್ರಿಗಳು (ಶೇ 1.17). ಇದಕ್ಕೆ ವ್ಯತಿರಿಕ್ತವಾಗಿ, ತೈಲ ಮತ್ತು ಅನಿಲ, ಇಂಧನ, ಟೆಲಿಕಾಂ, ಉಪಯುಕ್ತತೆಗಳು, ಆಟೋ ಮತ್ತು ವಿದ್ಯುತ್ ಲಾಭದೊಂದಿಗೆ ಕೊನೆಗೊಂಡಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications