ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ (ಐಆರ್ ಸಿಟಿಸಿ)ಯಿಂದ ಗೋಲ್ಡನ್ ಚಾರಿಯೆಟ್ ಸೇವೆಯನ್ನು 2021ರ ಜನವರಿಯಿಂದ ಆರಂಭಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಮಾರ್ಕೆಟಿಂಗ್ ಕಾರಣಗಳಿಗಾಗಿ 2020ರ ಜನವರಿಯಲ್ಲಿ ಗೋಲ್ಡನ್ ಚಾರಿಯೆಟ್ ವಿಲಾಸಿ ರೈಲು ಕಾರ್ಯಾಚರಣೆಯನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಐಆರ್ ಸಿಟಿಸಿಗೆ ವಹಿಸಲಾಯಿತು.
ಈ ರೈಲು ಪ್ರಯಾಣವು ಬೆಂಗಳೂರಿನಿಂದ ಆರಂಭವಾಗುತ್ತದೆ. ಬೆಂಗಳೂರಿಗೆ ವಾಪಸಾಗುವ ಮುನ್ನ ಕರ್ನಾಟಕ, ಕೇರಳ, ತಮಿಳುನಾಡಿನ ಹಲವು ಸ್ಥಳಗಳನ್ನು ಸಂಚರಿಸಿರುತ್ತದೆ. ಪ್ರವಾಸಿಗರಿಗಾಗಿ ಐಆರ್ ಸಿಟಿಸಿಯಿಂದ ಮೂರು ಪ್ಯಾಕೇಜ್ ಗಳನ್ನು ಅವುಗಳ ವಿವರ ಹೀಗಿವೆ:
ಪ್ರೈಡ್ ಆಫ್ ಕರ್ನಾಟಕ ಪ್ರವಾಸ ಪ್ಯಾಕೇಜ್
ಈ ಪ್ಯಾಕೇಜ್ ನಲ್ಲಿ 6 ರಾತ್ರಿ/ 7 ಹಗಲು ಪ್ರವಾಸ ಇರುತ್ತದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಮೈಸೂರು, ಚಿಕ್ಕಮಗಳೂರು, ಹಂಪಿ. ಬದಾಮಿ ಗುಹೆಗಳು, ಪಟ್ಟದಕಲ್ಲು, ಹಳೇಬೀಡು ದೇವಾಲಯ, ಗೋವಾದ ಗೋಲ್ಡನ್ ಬೀಚ್ ಗಳು ಒಳಗೊಂಡಿವೆ.
ಜ್ಯುವೆಲ್ಸ್ ಆಫ್ ಸೌತ್ ಟೂರ್ ಪ್ಯಾಕೇಜ್
ಈ ಪ್ಯಾಕೇಜ್ ನಲ್ಲಿ 6 ರಾತ್ರಿ/ 7 ಹಗಲು ಪ್ರವಾಸ ಇರುತ್ತದೆ. ಮೈಸೂರು, ಮಹಾಬಲಿಪುರಂ, ಹಂಪಿ, ಚೆಟ್ಟಿನಾಡ್, ತಂಜಾವೂರ್, ಕುಮಾರಕೊಮ್, ಕೊಚ್ಚಿ.

ಗ್ಲಿಮ್ಸಸ್ ಆಫ್ ಕರ್ನಾಟಕ ಟೂರ್ ಪ್ಯಾಕೇಜ್
ಈ ಪ್ಯಾಕೇಜ್ ನಲ್ಲಿ 3 ರಾತ್ರಿ/ 4 ಹಗಲು ಪ್ರವಾಸ ಇರುತ್ತದೆ. ಮೈಸೂರು, ಬಂಡೀಪುರ ಹಾಗೂ ಹಂಪಿ.
ಗೋಲ್ಡನ್ ಚಾರಿಯೆಟ್ ವಿಲಾಸಿ ರೈಲು ಕಾರ್ಯಾಚರಣೆ ಆರಂಭವಾದದ್ದು 2008ರಲ್ಲಿ. ಕರ್ನಾಟಕ ರಾಜ್ಯ ಸರ್ಕಾರ ಹಾಗೂ ರೈಲ್ವೆ ಸಚಿವಾಲಯದ ಸಹಯೋಗದಲ್ಲಿ. ಈ ರೈಲಿನಲ್ಲಿ 18 ಬೋಗಿಗಳು ಮತ್ತು 44 ಅತಿಥಿ ಕೋಣೆಗಳು ಇರುತ್ತವೆ. ಒಟ್ಟು 84 ಪ್ರಯಾಣಿಕರ ಸಾಮರ್ಥ್ಯ ಇರುತ್ತದೆ.
ಪ್ರತಿ ಕ್ಯಾಬಿನ್ ನಲ್ಲೂ ಆಧುನಿಕ ಸೌಲಭ್ಯ ಇರುತ್ತದೆ. ಸಣ್ಣ ವಾರ್ಡ್ ರೋಬ್, ಎಲ್ ಸಿಡಿ ಟಿವಿ, ವ್ಯಾನಿಟಿ ಡೆಸ್ಕ್, ಎಲೆಕ್ಟ್ರಿಕಲ್ ಸಾಕೆಟ್ ಗಳು, ಖಾಸಗಿ ವಾಷ್ ರೂಮ್ ಮುಂತಾದವು ಒಳಗೊಂಡಿರುತ್ತವೆ. ಗೋಲ್ಡನ್ ಚಾರಿಯೆಟ್ ನಿಂದ ಭಾರತೀಯರಿಗಾಗಿ ಈ ಕೆಳಕಂಡ ಆಫರ್ ಗಳನ್ನು ಪರಿಚಯಿಸಲಾಗಿದೆ.
* ಒಬ್ಬರಿಗೆ ಪಾವತಿ ಮಾಡಿ ಮತ್ತು ಇನ್ನೊಬ್ಬರು ಸಹವರ್ತಿಗೆ ಕೇವಲ 50% ಪಾವತಿಸಿ ಅಥವಾ
* ದರದ ಮೇಲೆ ಇಡೀ ಟೂರ್ ಪ್ಯಾಕೇಜ್ ಗೆ 35% ರಿಯಾಯಿತಿ ಅಥವಾ
* 2 ರಾತ್ರಿ/ 3 ಹಗಲಿಗೆ ಒಬ್ಬ ವ್ಯಕ್ತಿಗೆ ಕೇವಲ 59,999 ರುಪಾಯಿ. ಆದರೆ ಇದು ಟ್ವಿನ್ ಷೇರಿಂಗ್ ಆಧಾರದಲ್ಲಿ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Karnataka Highway: ರಾಜ್ಯದ ಈ ಭಾಗಕ್ಕೆ ಹೈವೇ ಡಿಮ್ಯಾಂಡ್…ಕೇಂದ್ರಕ್ಕೆ ಮನವಿ ಮಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್!

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications