ವಿಶ್ವಾದ್ಯಂತ ದೊಡ್ಡ ದೊಡ್ಡ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಸುದ್ದಿ ನಿತ್ಯ ಕೇಳಿಬರುತ್ತಿದೆ. ಟ್ವಿಟ್ಟರ್, ಮೆಟಾ, ಅಮೇಜಾನ್, ಗೂಗಲ್ ಮೊದಲಾದ ದೊಡ್ಡ ಟೆಕ್ ಕಂಪನಿಗಳು ಉದ್ಯೋಗಕಡಿತ ಮಾಡುತ್ತಿವೆ. ಹಲವು ವರ್ಷಗಳ ಕಾಲ ಕಂಪನಿಯಲ್ಲಿ ಸೇವೆ ಸಲ್ಲಿಸಿದವರು ಅಚಾನಕ್ಕಾಗಿ ನಿರುದ್ಯೋಗಿಗಳಾಗುತ್ತಿದ್ದಾರೆ. ಹಲವು ಭಾರತೀಯ ಕಂಪನಿಗಳೂ ಉದ್ಯೋಗಕಡಿತದ ನಿರ್ಧಾರ ಮಾಡಿವೆ. ಟ್ವಿಟ್ಟರ್ನ ಭಾರತೀಯ ವಿಭಾಗದಲ್ಲಿ ಕೆಲಸ ಉಳಿಸಿಕೊಂಡವರು ಕೇವಲ 10 ಮಂದಿ ಮಾತ್ರ. ಬೈಜೂಸ್ ಮೊದಲಾದ ಹಲವು ಸ್ಟಾರ್ಟಪ್ಗಳಿಂದ ಲೆಕ್ಕವಿಲ್ಲದಷ್ಟು ಉದ್ಯೋಗಿಗಳು ಪಿಂಕ್ ಸ್ಲಿಪ್ ಪಡೆದಿದ್ದಾರೆ.
ಕೆಲ ಮಾಧ್ಯಮ ವರದಿಗಳನ್ನು ನಂಬುವುದಾದರೆ ಹಲವು ಟೆಕ್ ಕಂಪನಿಗಳು ಕೆಲಸದಿಂದ ವಜಾ ಮಾಡಿದ ಉದ್ಯೋಗಿಗಳಿಗೆ ನೀಡುವ ಪರಿಹಾರ ಪ್ಯಾಕೇಜ್ಗಳ ಮೊತ್ತ ಬಹಳ ಕಡಿಮೆ ಇತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಟೀಕಾ ಪ್ರಹಾರ ವೈರಲ್ ಆಗುತ್ತಿದ್ದಂತೆಯೇ ಕೆಲ ಕಂಪನಿಗಳು ಪರಿಹಾರ ಮೊತ್ತವನ್ನು ಹೆಚ್ಚಿಸಿವೆ. ಆದರೂ ಕೂಡ ಮಾಮೂಲಿಯಷ್ಟು ಕೊಡಬೇಕಿದ್ದ ಪರಿಹಾರ ಪ್ಯಾಕೇಜ್ಗಳು ಕೆಲಸ ಕಳೆದುಕೊಂಡವರ ಕೈ ಸೇರುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಮರು ನೇಮಕದ ಭರವಸೆ
ಈಗ ಆರ್ಥಿಕ ಹಿನ್ನಡೆ ಕಾರಣದಿಂದ ಬಹಳಷ್ಟು ಕಂಪನಿಗಳು ನಷ್ಟದಲ್ಲಿವೆ, ಅಥವಾ ಲಾಭ ಕಡಿಮೆ ಹೊಂದಿವೆ. ಈ ಕಾರಣಕ್ಕೆ ಲೇ ಆಫ್ ಆಗುತ್ತಿದೆ. ಸಂಸ್ಥೆಯ ಕಾರ್ಯಾಚರಣೆ ವೆಚ್ಚ ತಗ್ಗಿಸಲು ವಿವಿಧ ಮಾರ್ಗೋಪಾಯ ಅನುಸರಿಸಿ ಕೊನೆಯ ಮಾರ್ಗವಾಗಿ ಸಿಬ್ಬಂದಿ ವರ್ಗ ಕಡಿತ ಮಾಡುತ್ತಿರುವುದಾಗಿ ಬಹುತೇಕ ಎಲ್ಲಾ ಕಂಪನಿಗಳೂ ಸಬೂಬು ಹೇಳಿವೆ.
ಇನ್ನು ಕೆಲ ಕಂಪನಿಗಳು ಮುಂದಿನ ದಿನಗಳಲ್ಲಿ ಮರು ನೇಮಕ ಮಾಡಿಕೊಳ್ಳುವುದಾಗಿ ಕೆಲಸ ಕಳೆದುಕೊಂಡವರಿಗೆ ಆಶ್ವಾಸನೆ ನೀಡಿವೆಯಂತೆ. ಆರ್ಥಿಕತೆ ಸುಧಾರಿಸಿ ಸಂಸ್ಥೆ ಮತ್ತೆ ಲಾಭದ ಹಳಿಗೆ ಬಂದ ಬಳಿಕ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿ ತಮಗೆ ಮೊದಲ ಆದ್ಯತೆ ಕೊಡುವುದಾಗಿ ಹೇಳಿವೆ.
ಮೆಟಾದಲ್ಲಿ ಭರ್ಜರಿ ಪರಿಹಾರ
ಸಾಮಾನ್ಯವಾಗಿ ಹಲವು ದೊಡ್ಡ ಸಂಸ್ಥೆಗಳಲ್ಲಿ, ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದರೆ ಕೆಲ ತಿಂಗಳ ವೇತನವನ್ನು ಪರಿಹಾರವಾಗಿ ಕೊಟ್ಟು ಕಳುಹಿಸಲಾಗುತ್ತದೆ. ಇದು ಉದ್ಯೋಗಿಯ ಅಧಿಕಾರ ಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಎಕ್ಸಿಕ್ಯೂಟಿವ್ ದರ್ಜೆಯ ಉದ್ಯೋಗಿಯಾದರೆ ಒಂದು ವರ್ಷದವರೆಗೂ ವೇತನವನ್ನು ಪರಿಹಾರವಾಗಿ ನೀಡಲಾಗುತ್ತದೆ. ಮ್ಯಾನೇಜರ್ ಹಂತದವರಿಗೆ 3 ತಿಂಗಳವರೆಗೆ ವೇತನ ಕೊಡಲಾಗುತ್ತದೆ. ಆದರೆ, ಈಗ ಹಲವು ಕಂಪನಿಗಳು ಎರಡು ತಿಂಗಳ ವೇತನದ ಹಣವನ್ನು ಉದ್ಯೋಗಿಗಳಿಗೆ ಪರಿಹಾರವಾಗಿ ಕೊಟ್ಟಿದೆ.
ಮೆಟಾ ಸಂಸ್ಥೆ ಪ್ರತಿಯೊಬ್ಬ ಉದ್ಯೋಗಿಗೂ ವರ್ಷಕ್ಕೆ 18 ವಾರಗಳ ವೇತನದಂತೆ ಹಣವನ್ನು ಪರಿಹಾರವಾಗಿ ನೀಡುತ್ತಿದೆ. ಅಂದರೆ, ಒಬ್ಬ ಉದ್ಯೋಗಿ 6 ವರ್ಷ ಕೆಲಸ ಮಾಡಿದ್ದರೆ ಆತನಿಗೆ 108 ವಾರಗಳ ವೇತನವು ಪರಿಹಾರವಾಗಿ ಸಿಗುತ್ತದೆ. ಅಂದರೆ 2 ವರ್ಷಗಳಿಗೂ ಹೆಚ್ಚು ಅವಧಿಯ ವೇತನವು ಪರಿಹಾರವಾಗಿ ಸಿಗುತ್ತದೆ. ಎರಡು ವರ್ಷ ಕೆಲಸ ಮಾಡಿದ್ದರೆ ಸುಮಾರು 9-10 ತಿಂಗಳ ವೇತನವನ್ನು ಪರಿಹಾರವಾಗಿ ಪಡೆಯಬಹುದು. ಈ ಸೂತ್ರ ಬಹುಶಃ ಒಪ್ಪುವಂಥದ್ದು ಎಂಬುದು ಜಾಬ್ ಕನ್ಸಲ್ಟೆನ್ಸಿಗಳ ಅನಿಸಿಕೆ.
ಸಿಎಕ್ಸ್ಒಗಳಿಗೆ ಅನ್ಯಾಯ?
ಆದರೆ, ಈ ಬಾರಿ ಸಿಎಕ್ಸ್ಒಗಳಿಗೆ ಸರಿಯಾದ ಪರಿಹಾರ ಕೊಡದೇ ಅನ್ಯಾಯ ಮಾಡಲಾಗುತ್ತಿದೆ ಎಂಬ ಮಾತಿದೆ. ಸಿಎಕ್ಸ್ಒ ಎಂದರೆ ಚೀಫ್ ಎಕ್ಸ್ಪೀರಿಯನ್ಸ್ ಆಫೀಸರ್. ಇವರು ಸಿಇಒ, ಸಿಒಒ ಮುಂತಾದ ಟಾಪ್ ಎಕ್ಸಿಕ್ಯೂಟಿವ್ಗಳ ಅಡಿಯಲ್ಲಿ ಬರುತ್ತಾರೆ. ಕಂಪನಿಯಲ್ಲಿ ಇವರ ಸ್ಥಾನ 3 ಅಥವಾ 4ನೇ ಕ್ರಮಾಂಕದ್ದಾಗಿರುತ್ತದೆ. ಇವರು ಕೆಲಸ ಬಿಡುವಾಗ ಸಾಮಾನ್ಯವಾಗಿ 12-16 ತಿಂಗಳ ವೇತನವನ್ನು ಕೊಟ್ಟು ಕಳುಹಿಸಲಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಕೇವಲ 6 ತಿಂಗಳ ವೇತನ ಮಾತ್ರ ಪರಿಹಾರವಾಗಿ ಕೊಡಲಾಗುತ್ತಿದೆಯಂತೆ.
ಮೆಡಿಕಲ್ ಇನ್ಷೂರೆನ್ಸ್
ಕೆಲಸ ಕಳೆದುಕೊಳ್ಳುತ್ತಿರುವ ಉದ್ಯೋಗಿಗಳಲ್ಲಿ ಬಹುತೇಕರಿಗೆ ಸಾಮಾನ್ಯವಾಗಿ ಸಿಗುತ್ತಿರುವ ಪರಿಹಾರವೆಂದರೆ ಮೆಡಿಕಲ್ ಇನ್ಷೂರೆನ್ಸ್. ಸಾಮಾನ್ಯವಾಗಿ ಒಬ್ಬ ಉದ್ಯೋಗಿ ಬಿಟ್ಟ ಕೂಡಲೇ ಕಂಪನಿಯಿಂದ ಆತನಿಗೆ ಮಾಡಿಸಲಾಗಿದ್ದ ಮೆಡಿಕಲ್ ಇನ್ಷೂರೆನ್ಸ್ ರದ್ದಾಗಿ ಹೋಗುತ್ತದೆ.
ಆದರೆ ಈಗ ಬಹುತೇಕ ಎಲ್ಲಾ ಕಂಪನಿಗಳೂ ಕೆಲಸ ಬಿಡುವ ಉದ್ಯೋಗಿಗಳಿಗೆ ಇಡೀ ವರ್ಷದ ಮೆಡಿಕಲ್ ಇನ್ಷೂರೆನ್ಸ್ ಸೌಲಭ್ಯವನ್ನು ಮುಂದುವರಿಸಲು ನಿರ್ಧರಿಸಿವೆ. ಇನ್ನೂ ಕೆಲ ಕಂಪನಿಗಳು ಆರು ತಿಂಗಳವರೆಗೆ ಉದ್ಯೋಗಿಯ ಕುಟಂಬದ ಯಾವುದೇ ವೈದ್ಯಕೀಯ ವೆಚ್ಚವನ್ನು ಭರಿಸುತ್ತಿವೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications