ಲಾಕ್ ಡೌನ್ ನಂಥ ಸಂಕಷ್ಟದ ಸಮಯದಲ್ಲಿ ದೇಶದ ಜನರ ಸ್ಥಿತಿ ಹೇಗಿದೆ ಎಂಬುದನ್ನು ತೆರೆದಿಡುವಂಥ ಆತಂಕಕಾರಿ ಅಂಕಿ- ಅಂಶವೊಂದು ಸಮೀಕ್ಷೆಯಲ್ಲಿ ಹೊರಬಿದ್ದಿದೆ. ವಿವಿಧ ಸಾಮಾಜಿಕ ಸ್ತರದ, ಆದಾಯದ, ವಯಸ್ಸಿನ, ಶೈಕ್ಷಣಿಕ ಹಿನ್ನೆಲೆ, ಧರ್ಮ ಹಾಗೂ ಲಿಂಗದವರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಅವರ ಪೈಕಿ ಶೇಕಡಾ 62.5ರಷ್ಟು ಜನರು ಹೇಳುವಂತೆ, ದಿನಸಿ/ಔಷಧಗಳು ಅಥವಾ ಅವರ ಬಳಿ ಇರುವ ಹಣದಿಂದ ಮೂರು ವಾರಕ್ಕಿಂತ ಹೆಚ್ಚು ಸಮಯ ದಿನ ದೂಡುವುದು ಕಷ್ಟ.
IANS C- ವೋಟರ್ ಭಯದ ಸೂಚ್ಯಂಕವು ಈ ಅಂಶವನ್ನು ಬಯಲಿಗಿಟ್ಟಿದೆ. 37.5ರಷ್ಟು ಜನರು, ಮೂರು ವಾರಕ್ಕಿಂತ ಹೆಚ್ಚು ಸಮಯಕ್ಕೆ ತಮ್ಮ ಬಳಿ ಇರುವ ಅಗತ್ಯ ವಸ್ತುಗಳು ಸಾಕಾಗುತ್ತದೆ ಎಂದಿದ್ದಾರೆ. ಇನ್ನೇನು 21 ದಿನಗಳ ಲಾಕ್ ಡೌನ್ ದೇಶದಲ್ಲಿ ಕೊನೆಯಾಗುವ ಹಂತಕ್ಕೆ ಬಂದಿರುವಾಗ ಈ ಸಮೀಕ್ಷೆ ಪ್ರಾಮುಖ್ಯ ಪಡೆದುಕೊಂಡಿದೆ.
ಇನ್ನು ರಾಜ್ಯ ಸರ್ಕಾರಗಳು, ಇನ್ನೆರಡು ವಾರ ಲಾಕ್ ಡೌನ್ ವಿಸ್ತರಣೆ ಕಡೆಗೆ ಒಲವು ತೋರಿವೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ಘೋಷಣೆಯೂ ಮಾಡಿಯಾಗಿದೆ. ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಕಡಿಮೆ ಆದಾಯ ಮತ್ತು ಶಿಕ್ಷಣದ ಹಿನ್ನೆಲೆಯವರೇ ಬಹುತೇಕ ಬಾಧಿತರಾಗಿದ್ದಾರೆ. 70:30ರ ಅನುಪಾತದಲ್ಲಿ, ಇಂಥವರ ಬಳಿ ಮೂರು ವಾರಗಳಿಗಿಂತ ಹೆಚ್ಚಿನ ಅವಧಿಗೆ ಸಾಕಾಗುವಷ್ಟು ಸಂಪನ್ಮೂಲಗಳಿಗಿಲ್ಲ.

ಸಮಾಜದ ತಳಮಟ್ಟದಲ್ಲಿ ಇರುವಂಥ ಕಡಿಮೆ ಆದಾಯದ ಜನರಿಗೆ ತಮ್ಮ ಕುಟುಂಬವನ್ನು ಪೋಷಿಸುವುದು ಅಸಾಧ್ಯವಾಗಿದೆ. ಮಧ್ಯಮ ಮಟ್ಟದ ಆದಾಯ ಇರುವವರಿಗೆ ಮೂರು ವಾರಗಳಷ್ಟು ಕುಟುಂಬ ಪೋಷಿಸುವ ಚೈತನ್ಯ ಇದೆ. ಇನ್ನು ಹೆಚ್ಚು ಆದಾಯ ಇರುವವರಿಗೆ ಮೂರು ವಾರಗಳ ನಂತರವೂ ಲಾಕ್ ಡೌನ್ ಭರಿಸುವುದು ಸಾಧ್ಯವಿದೆ.
ನಗರ ಪ್ರದೇಶದಲ್ಲಿ ವಾಸಿಸುವ ಶೇಕಡಾ 55ರಷ್ಟು ಮಂದಿ ಅಗತ್ಯ ವಸ್ತುಗಳು ಮತ್ತು ಹಣದೊಂದಿಗೆ ಮೂರು ವಾರಗಳಷ್ಟು ಇರಬಹುದು. ಇನ್ನು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳ 65ರಷ್ಟು ಮಂದಿ ಹೇಳುವಂತೆ, ಮೂರು ವಾರಗಳ ಲಾಕ್ ಡೌನ್ ಗೆ ಸಾಕಾಗುವಷ್ಟು ಸಂಪನ್ಮೂಲ ಅವರ ಬಳಿ ಇದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications