ಭಾರತದಲ್ಲಿ ಪ್ರಯಾಣಿಕರ ಕಾರಿನ ಅತಿ ದೊಡ್ಡ ತಯಾರಿಕೆ ಕಂಪೆನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್ ಐ) 1,34,885 ಯೂನಿಟ್ ವ್ಯಾಗನ್ R ಹಾಗೂ ಬಲೆನೋ ಪೆಟ್ರೋಲ್ ಕಾರನ್ನು ವಾಪಸ್ ಕರೆಸಿಕೊಳ್ಳುತ್ತಿದೆ. ಈ ಬಗ್ಗೆ ಬುಧವಾರ ಘೋಷಣೆ ಮಾಡಿರುವ ಕಂಪೆನಿ, ಇಂಧನ ಪಂಪ್ ನಲ್ಲಿನ ಸಂಭವನೀಯ ದೋಷದ ಕಾರಣಕ್ಕೆ ವಾಪಸ್ ಕರೆಸಿಕೊಳ್ಳುತ್ತಿರುವುದಾಗಿ ತಿಳಿಸಿದೆ.
ನವೆಂಬರ್ 15, 2018ರಿಂದ ಅಕ್ಟೋಬರ್ 15, 2019ರ ಮಧ್ಯೆ ಕಂಪೆನಿಯಿಂದ ಉತ್ಪಾದನೆಯಾದ ವ್ಯಾಗನ್ R ಕಾರಿನ 56,663 ಯೂನಿಟ್ ಮತ್ತು ಜನವರಿ 8ರಿಂದ ನವೆಂಬರ್ 8, 2019ರ ಮಧ್ಯೆ ಉತ್ಪಾದನೆಯಾದ 78,222 ಯೂನಿಟ್ ಬಲೆನೋ ಕಾರನ್ನು ವಾಪಸ್ ಕರೆಸಿಕೊಂಡು, ಮುಂದಿನ ವಾರಗಳಲ್ಲಿ ಪರೀಕ್ಷಿಸುವುದಾಗಿ ತಿಳಿಸಿದೆ.
ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚ ಇಲ್ಲದೆ ದೋಷಪೂರಿತ ಭಾಗವನ್ನು ಬದಲಿಸಿಕೊಡಲಾಗುವುದು. ಕಂಪೆನಿಯ ಹೇಳಿಕೆ ಪ್ರಕಾರ, ಈ ಅಭಿಯಾನದ ಅಡಿಯಲ್ಲಿ ಶಂಕಿತ ವಾಹನಗಳ ಮಾಲೀಕರು ಮಾರುತಿ ಸುಜುಕಿ ಅಧಿಕೃತ ಡೀಲರ್ ಗಳನ್ನು ಸಂಪರ್ಕಿಸಬೇಕು.

ಗ್ರಾಹಕರಿಗೆ ಮುಖ್ಯ ಮಾಹಿತಿ ಒಳಗೊಂಡ www.marutisuzuki.com (ವ್ಯಾಗನ್R) ಮತ್ತು www.nexaexperience.com (ಬಲೆನೋ) ಭೇಟಿ ನೀಡಿ, ವಾಹನದ ಚಾಸಿಸ್ ಸಂಖ್ಯೆ ಭರ್ತಿ ಮಾಡಬೇಕು (MA3 or MBH, ಆ ನಂತರ 14 ಸಂಖ್ಯೆ ಅಲ್ಫಾ-ನ್ಯೂಮರಿಕ್ ಸಂಖ್ಯೆ). ಆ ಮೂಲಕ ವಾಹನದ ಭಾಗವನ್ನು ಬದಲಿಸಬೇಕಾ ಎಂಬ ಮಾಹಿತಿ ಸಿಗುತ್ತದೆ.
ಕಳೆದ ಡಿಸೆಂಬರ್ ನಲ್ಲಿ ಮಾರುತಿಯಿಂದ ಸಿಯಾಜ್, ಎರ್ಟಿಗಾ ಮತ್ತು XL6 63,493 ಯೂನಿಟ್ ಗಳನ್ನು ವಾಪಸ್ ಕರೆಸಿಕೊಂಡಿತ್ತು. ಅದಕ್ಕೂ ಮುನ್ನ ಆಗಸ್ಟ್ ನಲ್ಲಿ ವ್ಯಾಗನ್R 40,618 ಕಾರನ್ನು ವಾಪಸ್ ಕರೆಸಿಕೊಂಡಿತ್ತು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications