ಕೊರೊನಾವೈರಸ್ ಹರಡುವಿಕೆಯು ವಿಶ್ವದ ಆರ್ಥಿಕತೆಯ ಜೊತೆಗೆ ಷೇರು ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಜೊತೆಗೆ ಭಾರತದ ಶತಕೋಟ್ಯಧಿಪತಿಗಳ ಸಂಪತ್ತು ಕರಗಲು ದಾರಿ ಮಾಡಿಕೊಟ್ಟಿದೆ.
ಏಷ್ಯಾದ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯ 5 ಬಿಲಿಯನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 36,092 ಕೋಟಿ) ಮಾರುಕಟ್ಟೆ ಬಂಡವಾಳ ಮೌಲ್ಯವು ಕಳೆದ ಹದಿನೈದು ದಿನದಲ್ಲಿ ಕುಸಿತಗೊಂಡಿದೆ.
ರಿಲಯನ್ಸ್ಗೆ 53,706 ಕೋಟಿ ನಷ್ಟ
ಕೊರೊನಾವೈರಸ್ ನಿಂದಾಗಿ ಅತಿ ಹೆಚ್ಚು ನಷ್ಟ ಅನುಭವಿಸಿರುವ ಸಂಸ್ಥೆ ರಿಲಯನ್ಸ್ ಆಗಿದೆ. ಷೇರುಗಳ ಮಾರುಕಟ್ಟೆ ಬಂಡವಾಳೀಕರಣದಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿರುವ ಸಂಸ್ಥೆ ರಿಲಯನ್ಸ್ ಆಗಿದ್ದು ಭಾರೀ ಹೊಡೆತ ತಿಂದಿದೆ.
ಫೆಬ್ರವರಿ 13 ರಿಂದ ಫೆಬ್ರವರಿ 27 ರ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ 53,706 ಕೋಟಿ ರುಪಾಯಿ ನಷ್ಟ ಅನುಭವಿಸಿದೆ. ಶುಕ್ರವಾರ (ಫೆಬ್ರವರಿ 28) ಸೆನ್ಸೆಕ್ಸ್ 1,448.37 ಅಂಶಗಳು ಕುಸಿತ ಕಂಡಿದ್ದು, ರಿಲಯನ್ ಇಂಡಸ್ಟ್ರೀಸ್ ಷೇರುಗಳು 4.27 ಪರ್ಸೆಂಟ್ ಇಳಿಕೆಗೊಂಡಿದೆ.
ಆದಿತ್ಯಾ ಬಿರ್ಲಾ ಗ್ರೂಪ್ನ 884 ದಶಲಕ್ಷ ಡಾಲರ್ ಮಟಾಶ್
ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ ಆದಿತ್ಯ ಬಿರ್ಲಾ ಗ್ರೂಪ್ನ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ 884 ದಶಲಕ್ಷದಷ್ಟು ನಷ್ಟ ಅನುಭವಿಸಿದ್ದಾರೆ. ಐಟಿ ಉದ್ಯಮಿ ಅಜಿಮ್ ಪ್ರೇಮ್ಜಿಯ ಸಂಪತ್ತು 869 ಮಿಲಿಯನ್ ಡಾಲರ್ ಸಂಪತ್ತು ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿಯವರು ಕೇವಲ ಎರಡು ತಿಂಗಳಲ್ಲಿ 496 ಮಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದ್ದಾರೆ.
ಟಾಟಾ ಕಂಪನಿಗೆ 41,930 ಕೋಟಿ ನಷ್ಟ
ಕೊರೊನಾವೈರಸ್ ಜಾಗತಿಕ ಮಾರುಕಟ್ಟೆ ಮೇಲೆ ಪ್ರಭಾವ ಬೀರಿರುವುದರಿಂದ ಟಾಟಾ ಸಂಸ್ಥೆಗೂ ಭಾರೀ ನಷ್ಟವುಂಟಾಗಿದೆ. ದೇಶದ ಬಹುದೊಡ್ಡ ಉದ್ಯಮ ಸಂಸ್ಥೆಯಾದ ಟಾಟಾ ಸಂಸ್ಥೆಗೆ 41,930.18 ಕೋಟಿ ಮಾರುಕಟ್ಟೆಯ ಬಂಡವಾಳ ಮೌಲ್ಯವು ಕುಸಿತ ಕಂಡಿದೆ. ಕಂಪನಿಯ 21ಕ್ಕೂ ಹೆಚ್ಚು ಷೇರುಗಳು ಕುಸಿತ ಕಂಡಿವೆ.
ಆಟೋಮೋಟಿವ್ ಸ್ಟ್ಯಾಂಪಿಂಗ್ಸ್ ಮತ್ತು ಅಸೆಂಬ್ಲಿಗಳು ಮತ್ತು ಟಾಟಾ ಟೆಲಿ ಸರ್ವಿಸ್ ತಲಾ 25 ಪರ್ಸೆಂಟ್ ರಷ್ಟು ಕುಸಿದಿದೆ. ಟಾಟಾ ಮೋಟಾರ್ಸ್ ಮತ್ತು ಟಾಟಾ ಎಲ್ಕ್ಸಿ ಕ್ರಮವಾಗಿ 15 ಮತ್ತು 12 ಪರ್ಸೆಂಟ್ ಕುಸಿದಿವೆ.
ಅದಾನಿ, ವಾಡಿಯಾಗೂ ತಗ್ಗಲಿಲ್ಲ ನಷ್ಟದ ಪ್ರಮಾಣ
ರಿಲಯನ್ಸ್, ಟಾಟಾ , ಬಿರ್ಲಾ ಸಮೂಹಕ್ಕೆ ಭಾರೀ ನಷ್ಟದ ಜೊತೆಗೆ ಅದಾನಿ, ವಾಡಿಯಾಗೂ ನಷ್ಟ ತಪ್ಪಿಲ್ಲ. ಅದಾನಿ ಗ್ರೂಪ್ಗೆ 27,101 ಕೋಟಿ ರುಪಾಯಿ ನಷ್ಟವುಂಟಾಗಿದೆ. ವಾಡಿಯಾಗೆ 3,272.30 ಕೋಟಿ, ಇಂಡಿಯಾ ಬುಲ್ಸ್ಗೆ 391.09 ಕೋಟಿ ರುಪಾಯಿ ಮಾರುಕಟ್ಟೆ ಬಂಡವಾಳ ಮೌಲ್ಯ ಕುಸಿತ ಕಂಡಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications