ಮುತ್ತೂಟ್ ಗ್ರೂಪ್ ಅಧ್ಯಕ್ಷರಾಗಿದ್ದ ಎಂ.ಜಿ ಜಾರ್ಜ್ ಮುತ್ತೂಟ್ ಶುಕ್ರವಾರ ದೆಹಲಿಯಲ್ಲಿ ಇಹಲೋಹ ತ್ಯಜಿಸಿದ್ದಾರೆ. 72 ವಯಸ್ಸಿನ ಎಂ.ಜಿ ಜಾರ್ಜ್ ಮುತ್ತೂಟ್ ವಿಧಿವಶರಾಗಿದ್ದಾರೆ ಎಂದು ಕಂಪನಿಯು ರೆಗ್ಯೂಲೇಟರಿ ಫೈಲಿಂಗ್ನಲ್ಲಿ ತಿಳಿಸಿದೆ.
ಮುತ್ತೂಟ್ ಫೈನಾನ್ಸ್ ಭಾರತದ ಅತಿದೊಡ್ಡ ಚಿನ್ನದ ಮೇಲೆ ಸಾಲ ನೀಡುವ ಬ್ಯಾಂಕೇತರ ಹಣಕಾಸು(ಎನ್ಬಿಎಫ್ಸಿ) ಕಂಪನಿ ಆಗಿದೆ. ಇದರ ಪ್ರಧಾನ ಕಚೇರಿ ಕೊಚ್ಚಿಯಲ್ಲಿದ್ದು, ಎಂ.ಜಿ ಜಾರ್ಜ್ ಅವರು ತಮ್ಮ ಕುಟುಂಬದಿಂದ ಮುತ್ತೂಟ್ ಗ್ರೂಪ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮೂರನೇ ತಲೆಮಾರಿನವರಾಗಿದ್ದಾರೆ.

ಇವರು ದೀರ್ಘಕಾಲದಿಂದ ದೆಹಲಿಯಲ್ಲಿ ನೆಲೆಸಿದ್ದು, ಚಿನ್ನದ ಸಾಲ, ರಿಯಾಲ್ಟಿ ಎಸ್ಟೇಟ್ ನಿಂದ ಮೂಲಸೌಕರ್ಯ, ಆಸ್ಪತ್ರೆಯಿಂದ ಆತಿಥ್ಯ ಮತ್ತು ಶಿಕ್ಷಣದವರೆಗೆ 20 ಕ್ಕೂ ಹೆಚ್ಚು ವ್ಯವಹಾರಗಳನ್ನು ನಡೆಸುತ್ತಿದ್ದರು.
ಎಂ.ಜಿ ಜಾರ್ಜ್ ಮುತ್ತೂಟ್ ಗ್ರೂಪ್ ಅಷ್ಟೇ ಅಲ್ಲದೆ ,ಭಾರತೀಯ ಆರ್ಥೊಡಾಕ್ಸ್ ಚರ್ಚ್ನ ಟ್ರಸ್ಟಿಯಾಗಿದ್ದರು ಮತ್ತು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ (ಎಫ್ಐಸಿಸಿಐ) ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಜೊತೆಗೆ ಎಫ್ಐಸಿಸಿಐ ಕೇರಳ ರಾಜ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದರು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications