ನ್ಯೂಯಾರ್ಕ್: ಗಲಭೆ ಪೀಡಿತ ಮ್ಯಾನ್ಮಾರ್ ದೇಶದ ಮಿಲಿಟರಿ ಪಡೆ ಜೊತೆ ಸಂಪರ್ಕ, ವ್ಯವಹಾರ ಹೊಂದಿರುವ ಕಾರಣಕ್ಕೆ ಭಾರತ ಮೂಲದ ಅದಾನಿ ಅವರ ಅದಾನಿ ಪೋರ್ಟ್ಸ್ ಸಂಸ್ಥೆಯನ್ನು ನ್ಯೂಯಾರ್ಕ್ ಷೇರುಪೇಟೆ ಪಟ್ಟಿಯಿಂದ ಹೊರ ಹಾಕಲಾಗಿದೆ. ಅದಾನಿ ಬಂದರುಗಳು ಮತ್ತು ಭಾರತದ ವಿಶೇಷ ಆರ್ಥಿಕ ವಲಯ ಲಿಮಿಟೆಡ್ ಸಂಸ್ಥೆಗೆ ಯುಎಸ್ ಷೇರುಪೇಟೆ ಎಸ್ & ಪಿ ಡೌ ಜೋನ್ಸ್ ಭಾರಿ ಆಘಾತ ನೀಡಿದೆ.
ಮಾನವ ಹಕ್ಕು ಉಲ್ಲಂಘನೆ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಳುಗೆಡವಿರುವ ಮ್ಯಾನ್ಮಾರ್ ಮಿಲಿಟರಿ ಜೊತೆ ಅದಾನಿ ಸಂಸ್ಥೆ ವ್ಯವಹಾರ ಹೊಂದಿರುವುದರಿಂದ ಈ ಕ್ರಮ ಜರುಗಿಸಲಾಗಿದೆ ಎಂದು ಎಸ್ & ಪಿ ಡೌ ಜೋನ್ಸ್ ತನ್ನ ಸುಸ್ಥಿರತೆ ಸೂಚ್ಯಂಕದಿಂದ ತೆಗೆದು ಹಾಕಿದೆ.
ಮ್ಯಾನ್ಮಾರ್ ಮಿಲಿಟರಿಯೊಂದಿಗೆ ಅದಾನಿ ಪೋರ್ಟ್ ವ್ಯಾಪಾರ ಸಂಬಂಧ ಹೊಂದಿರುವುದು ಹೊಸ ವಿಷಯವೇನಲ್ಲ. ಫೆಬ್ರವರಿ ತಿಂಗಳಲ್ಲಿ ಮಿಲಿಟರಿ ಬೆಂಬಲಿತ ಮ್ಯಾನ್ಮಾರ್ ಆರ್ಥಿಕ ನಿಗಮ(ಎಂಇಸಿ)ಕ್ಕೆ 30 ಮಿಲಿಯನ್ ಡಾಲರ್ (ಸುಮಾರು 225 ಕೋಟಿ ರು) ನೀಡಿರುವ ಅದಾನಿ ಸಂಸ್ಥೆ, ಯಾಂಗೊನ್ ಎಂಬಲ್ಲಿ ಬಂದರು ನಿರ್ಮಿಸತೊಡಗಿದೆ.

ಅದಾನಿ ಪೋರ್ಟ್ಸ್ ಕಂಪನಿ ಯಾಂಗೊನ್ನಲ್ಲಿ ಬಂದರು ನಿರ್ಮಿಸುತ್ತಿದೆ. ಇದಲ್ಲದೆ, ಈ ಭೂಮಿಯನ್ನು ಮ್ಯಾನ್ಮಾರ್ ಆರ್ಥಿಕ ನಿಗಮದಿಂದ (ಎಂಇಸಿ) ಗುತ್ತಿಗೆಗೆ ನೀಡಲಾಯಿತು. ಈ ಸಂದರ್ಭದಲ್ಲಿ ಮ್ಯಾನ್ಮಾರ್ ಮಿಲಿಟರಿಯೊಂದಿಗೆ ವ್ಯಾಪಾರ ಸಂಬಂಧ ಹೊಂದಿದೆ ಎಂಬ ಅಂಶದ ಬೆಳಕಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ. ಅದಾನಿ ಗ್ರೂಪ್ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಬೇಕಾಗಿಲ್ಲ. ಅದಾನಿ ಬಂದರುಗಳ ವ್ಯಾಪಾರ ವಿಭಾಗವಾದ ಎಂಇಸಿಯಿಂದ ಭೂಮಿಯನ್ನು ಗುತ್ತಿಗೆ ನೀಡುವ ಕುರಿತು ಅದಾನಿ ಗ್ರೂಪ್ ಕಳೆದ ತಿಂಗಳು ಪ್ರತಿಕ್ರಿಯಿಸಿತ್ತು. ಇದು ಒಪ್ಪಂದದ ಪಾಲುದಾರರೊಂದಿಗೆ ಚರ್ಚಿಸಲಿದೆ ಎಂದು ತಿಳಿದುಬಂದಿದೆ.
ಏಪ್ರಿಲ್ 15ರಿಂದ ಜಾರಿಗೆ ಬರುವಂತೆ ಡೌ ಜೋನ್ಸ್ ಸೂಚ್ಯಂಕದಿಂದ ಅದಾನಿ ಪೋರ್ಟ್ಸ್ ಹಾಗೂ ಎಸ್ ಇ ಜಡ್ಜ್ ಲಿಮಿಟೆಡ್ ತೆಗೆದು ಹಾಕಲಾಗುತ್ತದೆ. ಈ ಸುದ್ದಿ ನಿನ್ನೆಯೇ ಬಿಎಸ್ಇಯಲ್ಲಿ ತಕ್ಕಮಟ್ಟಿನ ಕಂಪನ ಉಂಟು ಮಾಡಿ ಕಂಪನಿ ಷೇರುಗಳು ಭಾರತದಲ್ಲಿ ಶೇ 4.25ರಷ್ಟು ಕುಸಿಯುವಂತೆ ಮಾಡಿತ್ತು. ಇಂದು ಡಾ. ಅಂಬೇಡ್ಕರ್ ಜಯಂತಿ ನಿಮಿತ್ತ ಷೇರು ಪೇಟೆಗೆ ಬಿಡುವಿದೆ.
ಮ್ಯಾನ್ಮಾರ್ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ.
ಮಿಲಿಟರಿ ಆಡಳಿತ ವಿರೋಧಿಸಿದವರ ಮೇಲೆ ಬಲಪ್ರಯೋಗ ಮಾಡಿರುವ ಸೇನೆ, 550ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಆರೋಪವಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಮ್ಯಾನ್ಮಾರ್ ಮಿಲಿಟರಿ ಕ್ರಮವನ್ನು ಖಂಡಿಸಿವೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications