ನಿರೀಕ್ಷೆಯೇ ಮಾಡದಂಥ ಹಾಗೂ ಮಾಡಲು ಸಾಧ್ಯವೇ ಇಲ್ಲದಂಥ ಹೊಗಳಿಕೆಯನ್ನು ಏರ್ ಇಂಡಿಯಾವು ಪಡೆದಿದೆ. ಅದು ಯಾರಿಂದ ಗೊತ್ತಾ? ಪಾಕಿಸ್ತಾನದ ಏರ್ ಟ್ರಾಫಿಕ್ ಕಂಟ್ರೋಲರ್ ನಿಂದ (ಎಟಿಸಿ). ಜಗತ್ತಿನಾದ್ಯಂತ ಕೊರೊನಾ ಆತಂಕ ಸೃಷ್ಟಿಸುವಾಗ ಏರ್ ಇಂಡಿಯಾದಿಂದ ವಿಶೇಷ ವಿಮಾನದಲ್ಲಿ ಭಾರತದಿಂದ ಫ್ರಾಂಕ್ ಫರ್ಟ್ ಗೆ ಪರಿಹಾರ ಸಾಮಗ್ರಿ ಜತೆಗೆ ಯುರೋಪ್ ಪ್ರಯಾಣಿಕರನ್ನು ಸಹ ಒಯ್ಯಲಾಗಿತ್ತು. ಆ ವಿಚಾರಕ್ಕೇ ಮೆಚ್ಚುಗೆ ಕೇಳಿಬಂದಿದೆ.
ಯುರೋಪ್ ಗೆ ವಿಶೇಷ ವಿಮಾನ ಸೇವೆ ಒದಗಿಸಿದ್ದಕ್ಕೆ ಪಾಕಿಸ್ತಾನದ ಎಟಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ನನಗೆ ಮಾತ್ರ ಅಲ್ಲ, ಏರ್ ಇಂಡಿಯಾದ ಎಲ್ಲ ಸಿಬ್ಬಂದಿಗೂ ಇದು ಹೆಮ್ಮೆಯ ಕ್ಷಣ ಎಂದು ವಿಶೇಷ ವಿಮಾನಗಳ ಹಿರಿಯ ಕ್ಯಾಪ್ಟನ್ ವೊಬ್ಬರು ತಿಳಿಸಿದ್ದಾರೆ.
ನಾವು ಪಾಕಿಸ್ತಾನದ ಫ್ಲೈಟ್ ಇನ್ ಫರ್ಮೇಷನ್ ರೀಜಿಯನ್ (ಎಫ್ ಐಆರ್) ಪ್ರವೇಶ ಮಾಡಿದ್ವಿ. ಪಾಕಿಸ್ತಾನದ ಎಟಿಸಿ, ಕರಾಚಿ ಕಂಟ್ರೋಲ್ ನಿಂದ ಫ್ರಾಂಕ್ ಫರ್ಟ್ ನ ಪರಿಹಾರ ವಿಮಾನಕ್ಕೆ ಸ್ವಾಗತ ಎಂದರು. ಜತೆಗೆ ಪರಿಹಾರ ಕಾರ್ಯಾಚರಣೆ ಭಾಗವಾಗಿ ಫ್ರಾಂಕ್ ಫರ್ಟ್ ಗೆ ತೆರಳುತ್ತಿದ್ದಾರಾ ದೃಢಪಡಿಸಿ ಎಂದಿದ್ದಾರೆ. ಪ್ರತಿಯಾಗಿ ನಾವು ಖಚಿತಪಡಿಸಿದೆವು ಎಂಬುದಾಗಿ ಕ್ಯಾಪ್ಟನ್ ಮಾಹಿತಿ ನೀಡಿದ್ದಾರೆ.

ಇನ್ನು ಪಾಕಿಸ್ತಾನದ ವಾಯು ಸೀಮೆಯಿಂದ ತೆರಳುವ ಮುಂಚಿತವಾಗಿ, ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ. ಜಾಗತಿಕ ಪಿಡುಗಾದ ಕೊರೊನಾ ವ್ಯಾಪಿಸಿರುವ ವೇಳೆಯೂ ನೀವು ಕಾರ್ಯ ನಿರ್ವಹಿಸುತ್ತಿದ್ದೀರಿ, ಶುಭವಾಗಲಿ ಎಂದು ಪಾಕಿಸ್ತಾನ ಎಟಿಸಿ ಹೇಳಿದ್ದಾಗಿ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಮುಂದೆ ಇರಾನ್ ರಾಡಾರ್ ದೊರೆಯುತ್ತಿಲ್ಲ ಎಂದು ತಿಳಿಸಿದಾಗ ಈ ಬಗ್ಗೆ ಮಾಹಿತಿಯನ್ನು ಕೂಡ ಆ ದೇಶದವರಿಗೆ ಪಾಕಿಸ್ತಾನದಿಂದಲೇ ದಾಟಿಸಿ, ಅನುಕೂಲ ಮಾಡಿಕೊಡಲಾಯಿತು ಎಂಬ ವಿವರವೂ ತಿಳಿದುಬಂದಿದೆ. ಅಷ್ಟೇ ಅಲ್ಲ, ಮುಂಬೈನಿಂದ ಜರ್ಮನಿಯ ಫ್ರಾಂಕ್ ಫರ್ಟ್ ತನಕ ಎಲ್ಲ ದೇಶಗಳ ಎಟಿಸಿಯಿಂದಲೂ ಗೌರವಯುತವಾದ ಸ್ವಾಗತ ಹಾಗೂ ಮೆಚ್ಚುಗೆ ಸಿಕ್ಕಿದೆ.
ಅಂದ ಹಾಗೆ ಏರ್ ಇಂಡಿಯಾದ ಎರಡು ವಿಶೇಷ ವಿಮಾನದಲ್ಲಿ ಯುರೋಪ್ ಮತ್ತು ಕೆನಡಾ ನಾಗರಿಕರನ್ನು ಮುಂಬೈನಿಂದ ಕರೆದೊಯ್ಯಲಾಯಿತು. ಈ ವೇಳೆ ಕೊರೊನಾ ಹರಡದಂತೆ ಏನೆಲ್ಲ ನಿಯಮ ಅನುಸರಿಸಬೇಕೋ ಅದನ್ನು ಅನುಸರಿಸಲಾಯಿತು. ಅಲ್ಲಿಂದ ವಾಪಸಾದ ಮೇಲೆ ಎಲ್ಲ ಸಿಬ್ಬಂದಿಯೂ ಹದಿನಾಲ್ಕು ದಿನಗಳ ಸ್ವಯಂ ದಿಗ್ಬಂಧನದಲ್ಲಿ ಇದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications