ಸರ್ಕಾರವಿರಬಹುದು , ಸಂಸ್ಥೆಗಳಿರಬಹುದು ಅಥವಾ ವ್ಯಕ್ತಿ , ಒಮ್ಮೆ ಒಂದು ಮಟ್ಟದ ಆದಾಯಕ್ಕೆ ಒಗ್ಗಿಕೊಂಡು ಬಿಟ್ಟರೆ ಮತ್ತೆ ಆದಾಯವನ್ನ ಕಳೆದುಕೊಳ್ಳಲು ಯಾರೂ ಒಪ್ಪುವುದಿಲ್ಲ. ರಾಜ್ಯ ಸರ್ಕಾರಗಳು ಹೆಚ್ಚಿನ ಯಾವುದೇ ಕೆಲಸವನ್ನೂ ಮಾಡದೆ ತೈಲದ ಮೇಲೆ 30 ರಿಂದ 32 ಪ್ರತಿಶತ ತೆರಿಗೆಯನ್ನ ವಿಧಿಸುತ್ತಾ ಬಂದಿವೆ. ಹೀಗಾಗಿ ಕೇಂದ್ರ ಸರಕಾರ ತೈಲವನ್ನ ಜಿಎಸ್ಟಿ ಅಡಿಯಲ್ಲಿ ತರುತ್ತೇವೆ ಎಂದ ತಕ್ಷಣ ಎಲ್ಲಾ ರಾಜ್ಯ ಸರಕಾರಗಳು ಇದಕ್ಕೆ ವಿರೋಧಿಸಿವೆ.
ನೂರು ರೂಪಾಯಿ ಪೆಟ್ರೋಲ್ ಬೆಲೆಯಲ್ಲಿ 30 ರೂಪಾಯಿ ರಾಜ್ಯದ ತೆರಿಗೆಯಿದೆ. ಜಿಎಸ್ಟಿ ಗೆ ತೈಲವನ್ನ ಸೇರಿಸಿದರೆ ರಾಜ್ಯ ಸರ್ಕಾರಗಳಿಗೆ ನೇರವಾಗಿ ಆದಾಯದಲ್ಲಿ ಕುಸಿತ ಉಂಟಾಗುತ್ತದೆ. ಇಷ್ಟೊಂದು ದೊಡ್ಡ ಮೊತ್ತದ ಆದಾಯವನ್ನ ಮತ್ತೆ ಹೊಂದಿಸಿಕೊಳ್ಳುವುದು ಹೇಗೆ ? ಕೇಂದ್ರ ಸರಕಾರಕ್ಕೆ ಇದು ಗೊತ್ತಿಲ್ಲದ ವಿಷಯವೇನಲ್ಲ , ಪ್ರತಿ ಬಾರಿ ತೈಲ ಬೆಲೆ ಏರಿಕೆ ವಿಷಯ ಬಂದಾಗ ಜಿಎಸ್ಟಿ ವಿಷಯವನ್ನ ತೇಲಿಸಿ , ನಾವು ಸಿದ್ದ , ರಾಜ್ಯಗಳು ಸಿದ್ದವಿಲ್ಲ ಎನ್ನುತ್ತಾರೆ. ಕೇಂದ್ರ ಸರಕಾರ ತನ್ನ ತೆರಿಗೆಯಲ್ಲಿ ಒಂದಷ್ಟು ಕಡಿತವನ್ನ ಮಾಡಿ ನಂತರ ರಾಜ್ಯಗಳಿಗೆ ಕೂಡ ಒಂದಷ್ಟು ತೆರಿಗೆ ಕಡಿಮೆ ಮಾಡುವಂತೆ ಕೇಳಬಹುದು ಅಲ್ಲವೇ ? ಹಾವು ಸಾಯಬಾರದು , ಕೋಲು ಮುರಿಯಬಾರದು ಎನ್ನುವ ನೀತಿಯಿಂದ ಜನತೆ ಕೆಂಗಟ್ಟಿದ್ದಾರೆ.

ಇಲ್ಲಿಯವರೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೆಲೆ ಕಡಿಮೆಯಿತ್ತು . ಈಗ ಅದು ಹೆಚ್ಚಾಗತೊಡಗಿದೆ , ಹೀಗಾಗಿ ಇದು ಜನ ಸಾಮಾನ್ಯನ ಜೇಬನ್ನ ಸುಡಲು ಶುರು ಮಾಡಿದೆ. ಯಾವಾಗ ಅದು ಜನ ಸಾಮಾನ್ಯನನ್ನ ಸುಡಲು ಶುರು ಮಾಡುತ್ತದೆ, ಆಗ ನೋಡಿ ಎಲ್ಲಾ ಬೆಲೆಗಳ ಬ್ರೇಕ್ ಅಪ್ ಏನು ಎನ್ನುವುದನ್ನ ನೋಡಲು ಶುರು ಮಾಡುತ್ತಾರೆ. ಭಾರತ ಜಗತ್ತಿನಲ್ಲಿ ತೈಲದ ಮೇಲೆ ಅತ್ಯಂತ ಹೆಚ್ಚು ತೆರಿಗೆ ವಿಧಿಸುತ್ತಿರುವ ರಾಷ್ಟ್ರ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ. ನಾವು ನೀಡುವ ಹಣದ 60 ಪ್ರತಿಶತ ತೆರಿಗೆ ಎಂದರೆ ನಿಜಕ್ಕೂ ಇದು ವಿಷಾದನೀಯ.
ಕೇಂದ್ರ ಸರಕಾರ ಸಬ್ಸಿಡಿ ಜಾರಿ ಮಾಡಿ ತೈಲ ಬೆಲೆ ಕಡಿಮೆ ಮಾಡಿ , ಜೊತೆಗೆ ಇತರ ವಸ್ತುಗಳ ಬೆಲೆಯನ್ನು ಕೂಡ ನಿಯಂತ್ರಣದಲ್ಲಿರಿಸಬಹುದು. ರಾಜ್ಯ ಸರಕಾರಗಳು ಜಿಎಸ್ಟಿಗೆ ಒಪ್ಪಲು ಸಾಧ್ಯವಿಲ್ಲ . ಕೇಂದ್ರ ಸರಕಾರಕ್ಕೆ ಸದ್ಯದ ಮಟ್ಟಿಗೆ ಸಬ್ಸಿಡಿ ನೀಡುವುದು ಉಳಿದಿರುವ ಮಾರ್ಗ. ಕೇಂದ್ರ ಸರ್ಕಾರ ಯಾವಾಗ ಸಬ್ಸಿಡಿಗೆ ಅಸ್ತು ಎನ್ನುತ್ತದೆ ಎನ್ನುವುದನ್ನ ಕಾಯ್ದು ನೋಡಬೇಕು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications