ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ (ಪಿಎಂಸಿ) ಬ್ಯಾಂಕಿನ ಖಾತೆದಾರರಿಗೆ ಗುಡ್ನ್ಯೂಸ್ ಇಲ್ಲಿದೆ. ಸಣ್ಣ ಹಣಕಾಸು ಬ್ಯಾಂಕ್ (ಎಸ್ಎಫ್ಬಿ) ಸ್ಥಾಪಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಸೆಂಟ್ರಮ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ಗೆ "ತಾತ್ವಿಕವಾಗಿ" ಅನುಮೋದನೆ ನೀಡಿದೆ. ಈ ಬ್ಯಾಂಕ್ ಮೂಲಕ, ಡಿಜಿಟಲ್ ಪಾವತಿ ಸಂಸ್ಥೆ ಭಾರತ್ ಪೇ ಜೊತೆ ಜಂಟಿ ಸಹಭಾಗಿತ್ವದಲ್ಲಿ ಹಗರಣ ಪೀಡಿತ ಪಿಎಮ್ಸಿ ಬ್ಯಾಂಕ್ ಅನ್ನು ಸೆಂಟ್ರಮ್ ಸ್ವಾಧೀನಪಡಿಸಿಕೊಳ್ಳುತ್ತದೆ / ಖರೀದಿಸುತ್ತದೆ.
ಸೆಂಟ್ರಮ್ ಫೈನಾನ್ಷಿಯಲ್ ಸರ್ವೀಸಸ್ ಪಿಎಮ್ಸಿ ಬ್ಯಾಂಕ್ಗೆ ಆಸಕ್ತಿಯನ್ನು ತೋರಿಸಿದ ನಂತರ ತಾತ್ವಿಕವಾಗಿ ಅನುಮೋದನೆ ನೀಡಲಾಗಿದೆ ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಭಾರತ್ಪೆ ಸಮಾನ ಪಾಲುದಾರ
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಸೆಕ್ಷನ್ 22 (1) ರ ಅಡಿಯಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಪ್ರಾರಂಭಿಸಲು ಸೆಂಟ್ರಮ್ಗೆ ಪರವಾನಗಿ ನೀಡಲು ಆರ್ಬಿಐ ಪರಿಗಣಿಸುತ್ತದೆ. ಆದಾಗ್ಯೂ, ಅರ್ಜಿದಾರನು ಆರ್ಬಿಐ ತತ್ವ ನಿಯಮಗಳ ಅಡಿಯಲ್ಲಿ ನಿಗದಿಪಡಿಸಿದ ಅಗತ್ಯ ಷರತ್ತುಗಳನ್ನು ಅನುಸರಿಸುತ್ತಾನೆ. ಭಾರತದ ಪ್ರಮುಖ ಫಿನ್ಟೆಕ್ ಕಂಪನಿಗಳಲ್ಲಿ ಒಂದಾದ ರೆಸಿಲಿಯಂಟ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ (ಭಾರತ್ಪೆ) ಸೆಂಟ್ರಮ್ನೊಂದಿಗೆ ಎಸ್ಎಫ್ಬಿಯಲ್ಲಿ ಸಮಾನ ಪಾಲುದಾರರಾಗಲಿದೆ.
ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯ
ಎನ್ಬಿಎಫ್ಸಿ (ಸೆಂಟ್ರಮ್) ಮತ್ತು ಫಿನ್ಟೆಕ್ (ಭಾರತ್ಪೆ) ಯಿಂದ ಪ್ರಾರಂಭಿಸಿ, ಸಕ್ರಿಯ ಮತ್ತು ಬಲವಾದ ಗ್ರಾಹಕರ ಸಂಖ್ಯೆ, ಡಿಜಿಟಲ್ ತಲುಪುವಿಕೆ ಮತ್ತು ಉತ್ತಮ ತಂತ್ರಜ್ಞಾನ ಸಾಮರ್ಥ್ಯ, ಎಸ್ಎಫ್ಬಿ ವೇಗವಾಗಿ ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ಸೆಂಟ್ರಮ್ನ ಹೇಳಿಕೆ ತಿಳಿಸಿದೆ. ಮತ್ತೊಂದೆಡೆ, ಸೆಂಟ್ರಮ್ ಗ್ರೂಪ್ನ ಕಾರ್ಯನಿರ್ವಾಹಕ ಅಧ್ಯಕ್ಷರು, ಸುಮಾರು 6 ವರ್ಷಗಳ ಅಂತರದ ನಂತರ ಎನ್ಬಿಎಫ್ಸಿಗೆ ಹೊಸ ಬ್ಯಾಂಕಿಂಗ್ ಪರವಾನಗಿ ನೀಡಲಾಗುತ್ತಿರುವುದಕ್ಕೆ ನಾವು ಸಂತೋಷಪಡುತ್ತೇವೆ ಮತ್ತು ಈ ಅವಕಾಶಕ್ಕಾಗಿ ಆರ್ಬಿಐಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಹೇಳಿದ್ದಾರೆ.
ಬ್ಯಾಂಕ್ ಸಾಲಗಳಲ್ಲಿ ಅಕ್ರಮಗಳನ್ನ ಪತ್ತೆಹಚ್ಚಿದ್ದ ಆರ್ಬಿಐ
ಮಾರ್ಚ್ 2020 ರ ಹೊತ್ತಿಗೆ, ಪಿಎಂಸಿ ಬ್ಯಾಂಕ್ 10,727 ಕೋಟಿ ರೂ. , 2019-20ರ ಅವಧಿಯಲ್ಲಿ ಬ್ಯಾಂಕ್ 6,835 ಕೋಟಿ ರೂ. ನಿವ್ವಳ ನಷ್ಟವನ್ನು ಅನುಭವಿಸಿದೆ ಮತ್ತು 5,850.61 ಕೋಟಿ ರೂ. ಹೌಸಿಂಗ್ ಡೆವಲಪ್ಮೆಂಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಚ್ಡಿಐಎಲ್) ಗೆ ನೀಡಲಾದ ಸಾಲಗಳಲ್ಲಿನ ಅಕ್ರಮಗಳನ್ನು ಕಂಡುಹಿಡಿದ ನಂತರ ಆರ್ಬಿಐ ಪಿಎಂಸಿ ಬ್ಯಾಂಕಿನ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು, ಇದು ಬ್ಯಾಂಕಿನ ಗ್ರಾಹಕರ ಮೇಲೂ ಪರಿಣಾಮ ಬೀರಿತು.
50,000 ರೂ. ಹಿಂಪಡೆಯಲು ಅವಕಾಶ
ಆರ್ಬಿಐ ಪಿಎಮ್ಸಿ ಬ್ಯಾಂಕಿನ ಮಂಡಳಿಯನ್ನು ರದ್ದುಗೊಳಿಸಿದಾಗ, ಆರಂಭದಲ್ಲಿ ಅದು ಪ್ರತಿ ಖಾತೆಗೆ 1,000 ರೂ. ಮಾತ್ರ ವಿತ್ಡ್ರಾ ಮಾಡಲು ಅವಕಾಶ ನೀಡಿತ್ತು. ನಂತರ ಅದನ್ನು 50,000 ರೂಗಳಿಗೆ ಹೆಚ್ಚಿಸಲಾಯಿತು. ಅಂದಿನಿಂದ ಸುಮಾರು 78 ಪ್ರತಿಶತದಷ್ಟು ಠೇವಣಿದಾರರು ತಮ್ಮ ಠೇವಣಿಗಳನ್ನು 50,000 ರೂ.ಗಳ ವಾಪಸಾತಿ ಮಿತಿಯೊಳಗೆ ಹಿಂಪಡೆಯಲು ಅವಕಾಶ ನೀಡಲಾಗಿದೆ. ಕಳೆದ ವರ್ಷ ಜೂನ್ನಲ್ಲಿ ಈ ಮಿತಿಯನ್ನು 1 ಲಕ್ಷ ರೂ.ಗೆ ಹೆಚ್ಚಿಸಲಾಗಿತ್ತು. ಆದರೆ ಇನ್ನೂ ಬ್ಯಾಂಕಿನಲ್ಲಿ ಹೆಚ್ಚಿನ ಮೊತ್ತವನ್ನು ಹೊಂದಿರುವ ಅನೇಕ ಠೇವಣಿದಾರರಿಗೆ ತಮ್ಮ ಹಣವನ್ನು ಮರಳಿ ಪಡೆಯಲು ಸಾಧ್ಯವಾಗುತ್ತಿಲ್ಲ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications