ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ರಿಫೈನಿಂಗ್ ನಿಂದ ಕೆಮಿಕಲ್ಸ್ ಉದ್ಯಮದ ತನಕ ಎಲ್ಲದರಲ್ಲೂ ಷೇರಿನ ಪಾಲು ಖರೀದಿಯ 1500 ಕೋಟಿ ಅಮೆರಿಕನ್ ಡಾಲರ್ ವ್ಯವಹಾರದ ಮೇಲೆ ಈಗಲೂ ಕೆಲಸ ನಡೆಯುತ್ತಿದೆ ಎಂದು ಸೌದಿ ಅರಾಮ್ಕೋ ಹೇಳಿದೆ. ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗಿ ಹೂಡಿಕೆ ಮೇಲೆ ವೆಚ್ಚ ತಗ್ಗಿಸುವ ಅನಿವಾರ್ಯದಲ್ಲಿ ಇದ್ದರೂ ಈ ವ್ಯವಹಾರ ಕೈ ಬಿಟ್ಟಿಲ್ಲ ಎಂದು ತಿಳಿಸಿದೆ.
ಕೊರೊನಾದಿಂದಾಗಿ ಇಂಧನ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಸನ್ನಿವೇಶಗಳು ಸೃಷ್ಟಿಯಾಗಿದ್ದರಿಂದ ವ್ಯವಹಾರ ಮುಂದಕ್ಕೆ ಹೋಗಿದೆ ಎಂದು ಜುಲೈ ತಿಂಗಳ ಮಧ್ಯದಲ್ಲಿ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದರು. ವಿಶ್ವದ ಅತಿ ದೊಡ್ಡ ತೈಲ ರಫ್ತು ಕಂಪೆನಿಯಾದ ಸೌದಿ ಅರಾಮ್ಕೋದಿಂದ ರಿಲಯನ್ಸ್ ಜತೆಗಿನ ಒಪ್ಪಂದ ಅಂತಿಮವಾದಲ್ಲಿ ಪ್ರಮುಖ ರಿಫೈನರ್ ಹಾಗೂ ರಾಸಾಯನಿಕ ಉತ್ಪಾದಕ ಆಗಿ ಹೊರಹೊಮ್ಮಲಿದೆ.
ಸೌದಿ ಅರಾಮ್ಕೋದಿಂದ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲ ಬರುತ್ತದೆ. ಇನ್ನು ರಿಲಯನ್ಸ್ ನಿಂದ ಗ್ಯಾಸೋಲಿನ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳನ್ನು ಸೌದಿಗೆ ಮಾರಾಟ ಮಾಡಲಾಗುತ್ತದೆ. "ನಾವು ಈಗಲೂ ರಿಲಯನ್ಸ್ ಜತೆಗೆ ಚರ್ಚೆ ನಡೆಸುತ್ತಿದ್ದೇವೆ" ಎಂದು ಅರಾಮ್ಕೋದ ಸಿಇಒ ಅಮಿನ್ ನಸೀರ್ ಭಾನುವಾರ ಹೇಳಿದ್ದಾರೆ. ರಿಲಯನ್ಸ್ ಜತೆಗಿನ ವ್ಯವಹಾರದ ಬಗ್ಗೆ ಷೇರುದಾರರಿಗೆ ಮಾಹಿತಿ ಒದಗಿಸುತ್ತೇವೆ ಎಂದು ಹೇಳಿದ್ದಾರೆ.

ಅರಾಮ್ಕೋದಿಂದ ಭಾನುವಾರ ಜೂನ್ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಲಾಗಿದ್ದು, ನಿವ್ವಳ ಆದಾಯ ಕಳೆದ ವರ್ಷಕ್ಕಿಂತ ಶೇಕಡಾ 75ರ ತನಕ ಕಡಿಮೆ ಆಗಿದೆ. 2020ರಲ್ಲಿ ತೈಲ ಬೆಲೆ ಶೇಕಡಾ 33ರಷ್ಟು ಕಡಿಮೆ ಆಗಿರುವ ಪರಿಣಾಮ ಇದು.
ಇನ್ನು ವಿಶ್ವದ ನಾಲ್ಕನೇ ಶ್ರೀಮಂತ ಆಗಿರುವ ಮುಕೇಶ್ ಅಂಬಾನಿ ಕಳೆದ ವರ್ಷ ಹೇಳಿದ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ನ ರಿಫೈನಿಂಗ್ ನಿಂದ ಪೆಟ್ರೋ ಕೆಮಿಕಲ್ಸ್ ತನಕ ವ್ಯವಹಾರದ ಮೌಲ್ಯ 7500 ಕೋಟಿ ಅಮೆರಿಕನ್ ಡಾಲರ್ ಎಂದು ಮೌಲ್ಯ ಮಾಪನ ಮಾಡಿದ್ದು, ಅದರಲ್ಲಿ ಶೇಕಡಾ 20ರಷ್ಟು, ಅಂದರೆ 1500 ಕೋಟಿ ಅಮೆರಿಕನ್ ಡಾಲರ್ ಹಣವನ್ನು ಅರಾಮ್ಕೋ ಹೂಡಿಕೆ ಮಾಡಲಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications