ಅನಿಲ್ ಅಂಬಾನಿ ನೇತೃತ್ವದ ಕಂಪೆನಿಗಳ ಸಮೂಹಕ್ಕೆ ಅವರ ವೈಯಕ್ತಿಕ ಗ್ಯಾರಂಟಿ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲ ನೀಡಿತ್ತು. ಅದನ್ನು ವಸೂಲಿ ಮಾಡಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್ ಸಿಎಲ್ ಟಿ) ಮೆಟ್ಟಿಲೇರಿದೆ. ಎಸ್ ಬಿಐನಿಂದ ಸೆಕ್ಷನ್ 95 (1) ಅಡಿಯಲ್ಲಿ ಎರಡು ಅರ್ಜಿ ಹಾಕಲಾಗಿದೆ.
ಈ ವ್ಯಾಜ್ಯ ಬಗೆಹರಿಸಲು ವೃತ್ತಿಪರರೊಬ್ಬರನ್ನು ನಿಯೋಜಿಸಬೇಕು ಎಂದು ಕೇಳಿಕೊಳ್ಳಲಾಗಿದೆ. ಈ ಪ್ರಕರಣದ ಪಟ್ಟಿಯು ಎನ್ ಸಿಎಲ್ ಟಿ ನವದೆಹಲಿಯ ಮುಖ್ಯಪೀಠದ ವೆಬ್ ಸೈಟ್ ನಲ್ಲಿದೆ. ತುರ್ತು ಅಹವಾಲಿಗೆ ಕೇಳಿಕೊಂಡು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎರಡು ಪ್ರಕರಣ ದಾಖಲಿಸಿದೆ.
ಮೂರು ಚೈನೀಸ್ ಬ್ಯಾಂಕ್ ಗಳಿಗೆ ಸಾಲ ಪಾವತಿಗೆ ಸೂಚನೆ
ಅನಿಲ್ ಅಂಬಾನಿಗೆ ಸೇರಿದ ಆಸ್ತಿಗಳನ್ನು ಅಂತರರಾಷ್ಟ್ರೀಯ ಸಾಲಗಾರರು ವಶಕ್ಕೆ ಪಡೆಯುವ ಮೊದಲು ಅದರಲ್ಲಿ ತನ್ನ ಪಾಲನ್ನು ಪಡೆಯಬೇಕು ಎಂಬ ಗುರಿ ಹೊಂದಿದೆ ಎಂದು ಬ್ಯಾಂಕಿಂಗ್ ಮೂಲಗಳು ತಿಳಿಸಿವೆ. ಕಳೆದ ತಿಂಗಳು ಯು.ಕೆ. ಕೋರ್ಟ್ 717 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಮೂರು ಚೈನೀಸ್ ಬ್ಯಾಂಕ್ ಗಳಿಗೆ ಪಾವತಿಸುವಂತೆ ಸೂಚಿಸಿತ್ತು. ಭಾರತದ ರುಪಾಯಿ ಲೆಕ್ಕದಲ್ಲಿ 5,400 ಕೋಟಿಗೂ ಹೆಚ್ಚು ಮೊತ್ತವಾಗುತ್ತದೆ. ಇದು ಆ ಬ್ಯಾಂಕ್ ಗಳಿಗೆ ವಸೂಲಾಗಬೇಕಾದ ಮೊತ್ತ. ಆದರೆ ಈ ಸಾಲದಲ್ಲಿ ಅನಿಲ್ ಅಂಬಾನಿ ಗ್ಯಾರಂಟಿ ಅಂತ ಇರುವುದು 1200ರಿಂದ 1300 ಕೋಟಿ ರುಪಾಯಿಗೆ ಎಂದು ಹೇಳಲಾಗುತ್ತಿದೆ.
ಅನಿಲ್ ಅಂಬಾನಿ ವೈಯಕ್ತಿಕ ಸಾಲ ಅಲ್ಲ
ಅನಿಲ್ ವಕ್ತಾರ ಮಾತನಾಡಿ, ಇದು ರಿಲಯನ್ಸ್ ಕಮ್ಯುನಿಕೇಷನ್ಸ್ ಹಾಗೂ ರಿಲಯನ್ಸ್ ಇನ್ ಫ್ರಾಟೆಲ್ ನಿಂದ ಪಡೆದ ಕಾರ್ಪೊರೇಟ್ ಸಾಲ. ಇದು ಅಂಬಾನಿ ಅವರ ವೈಯಕ್ತಿಕ ಸಾಲ ಅಲ್ಲ ಎಂದಿದ್ದಾರೆ. ಇನ್ನು ಈ ಸಂಬಂಧ ವ್ಯಾಜ್ಯ ಪರಿಹಾರಕ್ಕೆ ಮುಂದಿಟ್ಟಿರುವ ಯೋಜನೆಗೆ ಶೇಕಡಾ ನೂರರಷ್ಟು ಸಾಲಗಾರರಿಂದ ಒಪ್ಪಿಗೆ ಸಿಕ್ಕಿದೆ. ಈ ಪರಿಹಾರಕ್ಕೆ ಎನ್ ಸಿಎಲ್ ಟಿ ಮುಂಬೈ ಅನುಮತಿಗೆ ಎದುರು ನೋಡಲಾಗುತ್ತಿದೆ. ಅನಿಲ್ ಅಂಬಾನಿ ಸೂಕ್ತ ಪ್ರತಿಕ್ರಿಯೆ ನೀಡಲಿದ್ದಾರೆ. ಎನ್ ಸಿಎಲ್ ಟಿಯು ಅರ್ಜಿದಾರರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದಿದ್ದಾರೆ.
ರಿಲಯನ್ಸ್ ಇನ್ ಫ್ರಾಟೆಲ್ ಗೆ ಮುಕೇಶ್ ಬಿಡ್ಡಿಂಗ್
ಈ ವರ್ಷದ ಜನವರಿಯಲ್ಲಿ ಆರ್ ಕಾಮ್, ರಿಲಯನ್ಸ್ ಟೆಲಿಕಾಂ ಹಾಗೂ ರಿಲಯನ್ಸ್ ಇನ್ ಫ್ರಾಟೆಲ್ ಗೆ ಸಾಲಗಾರರಿಗೆ ಬಿಡ್ ಬಂದಿತ್ತು. ಈ ಪೈಕಿ ಆರ್ ಕಾಮ್, ರಿಲಯನ್ಸ್ ಟೆಲಿಕಾಂಗೆ ಅತಿ ಹೆಚ್ಚಿನ, ಅಂದರೆ 16,000 ಕೋಟಿ ರುಪಾಯಿಗೂ ಹೆಚ್ಚು ಮೊತ್ತದ ಬಿಡ್ ಮಾಡಿದ್ದು ಯು.ವಿ. ಅಸೆಟ್ ರೀಕನ್ ಸ್ಟಕ್ಷನ್ ಕಂಪೆನಿ. ಅದರಲ್ಲಿ ರಿಯಲ್ ಎಸ್ಟೇಟ್ ಆಸ್ತಿಗಳು, ಎಂಟರ್ ಪ್ರೈಸ್ ಹಾಗೂ ಡೇಟಾ ಸೆಂಟರ್ ಬಿಜಿನೆಸ್ ಎಲ್ಲವೂ ಸೇರಿತ್ತು. ರಿಲಯನ್ಸ್ ಇನ್ ಫ್ರಾಟೆಲ್ ಗೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಹೆಚ್ಚಿನ ಬಿಡ್ಡರ್ ಆಗಿತ್ತು. 3609 ಕೋಟಿ ಬಿಡ್ ಮಾಡಿತ್ತು. ಇನ್ ಫ್ರಾಟೆಲ್ ಗೆ 43 ಸಾವಿರ ಟೆಲಿಕಾಂ ಟವರ್ ಗಳು, ಆಪ್ಟಿಕಲ್ ಫೈಬರ್ ಲೈನ್ಸ್ ಹಾಗೂ ಡೇಟಾ ಸೆಂಟರ್ ಗಳಿವೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!



Click it and Unblock the Notifications