ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಗುರುವಾರದಂದು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಗ್ ರೇಟ್ (MCLR) ಅನ್ನು 15 ಬೇಸಿಸ್ ಪಾಯಿಂಟ್ (bps) ಕಡಿಮೆ ಮಾಡಿದೆ. ಇದು ಎಲ್ಲ ಅವಧಿಯ ಸಾಲಕ್ಕೂ ಅನ್ವಯ ಆಗುತ್ತದೆ. ಹೀಗೆ ಎಂಸಿಎಲ್ ಆರ್ ಇಳಿಕೆ ಮಾಡಿರುವುದರಿಂದ ಸಾಲ ನೀಡುವ ದರವು ಈ ವರೆಗೆ ವಾರ್ಷಿಕ 7.40 ಪರ್ಸೆಂಟ್ ಇದ್ದದ್ದು 7.25 ಪರ್ಸೆಂಟ್ ಗೆ ಇಳಿಕೆಯಾಗುತ್ತದೆ.
ಮೇ 10, 2020ರಿಂದ ಇದು ಜಾರಿಗೆ ಬರುತ್ತದೆ. ಹೀಗೆ ಎಂಸಿಎಲ್ ಆರ್ ಅನ್ನು ಸತತವಾಗಿ ಹನ್ನೆರಡನೇ ಸಲ ಇಳಿಸಲಾಗುತ್ತಿದೆ ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಯಾರು ಎಂಸಿಎಲ್ ಆರ್ ಗೆ ಜೋಡಣೆಯಾಗುವಂತೆ ಸಾಲ ಪಡೆದಿರುತ್ತಾರೋ ಅಂಥ ಗ್ರಾಹಕರಿಗೆ ಪ್ರತಿ ಸಲ ಇಳಿಕೆ ಮಾಡಿದಾಗಲೂ ಇದರಿಂದ ಅನುಕೂಲ ಆಗುತ್ತದೆ.
ಠೇವಣಿ ಮೇಲಿನ ಬಡ್ಡಿ ದರದಲ್ಲೂ ಇಳಿಕೆ
ಸಾಲದ ಮೇಲಿನ ಬಡ್ಡಿ ದರ ಮಾತ್ರ ಅಲ್ಲ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಮೂರು ವರ್ಷದೊಳಗಿನ ಅವಧಿಯ ಠೇವಣಿ ಮೇಲಿನ ಬಡ್ಡಿ ದರವನ್ನೂ 20 bps ಇಳಿಕೆ ಮಾಡಿದೆ. ಇದು ಮೇ 12ನೇ ತಾರೀಕಿನಿಂದ ಜಾರಿಗೆ ಬರಲಿದೆ. ಬ್ಯಾಂಕ್ ಹಾಗೂ ಜನರ ಬಳಿ ನಗದು ಹರಿದಾಡಲಿ ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ.
ಹಿರಿಯ ನಾಗರಿಕರಿಗಾಗಿ ವಿಶೇಷ ಠೇವಣಿ ಯೋಜನೆ
ಇನ್ನು ಹಿರಿಯ ನಾಗರಿಕರಿಗಾಗಿ ಎಸ್ ಬಿಐ ವಿಶೇಷ ಠೇವಣಿ ಯೋಜನೆ ಪರಿಚಯಿಸಿದ್ದು, ಹೆಚ್ಚಿನ ಬಡ್ಡಿದರ ನೀಡುತ್ತಿದೆ. ಈ ಯೋಜನೆಗೆ "SBI Wecare Deposit" ಎಂದು ಹೆಸರು ನೀಡಲಾಗಿದೆ. ಸದ್ಯಕ್ಕೆ ಕುಸಿಯುತ್ತಿರುವ ಬಡ್ಡಿ ದರದ ಸಮಯದಲ್ಲಿ ಬ್ಯಾಂಕ್ ನ ಈ ಯೋಜನೆಯಿಂದ ಹಿರಿಯ ನಾಗರಿಕರ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 30, 2020ರ ತನಕ ಠೇವಣಿ ಸ್ಕೀಮ್
ಈ ಹೊಸ ಠೇವಣಿ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ 30 bps ಹೆಚ್ಚುವರಿ ಪ್ರೀಮಿಯಂ ಪಾವತಿಸಲಾಗುತ್ತದೆ. 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಯಾರು ಹಣವನ್ನು ಠೇವಣಿ ಮಾಡುತ್ತಾರೋ ಅಂಥವರಿಗೆ ಈ ಯೋಜನೆಯ ಲಾಭ ದೊರೆಯುತ್ತದೆ. ಇದು ಸೆಪ್ಟೆಂಬರ್ 30, 2020ರ ತನಕ ಜಾರಿಯಲ್ಲಿ ಇರುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications