ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಗುರುವಾರದಂದು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಗ್ ರೇಟ್ (MCLR) ಅನ್ನು 15 ಬೇಸಿಸ್ ಪಾಯಿಂಟ್ (bps) ಕಡಿಮೆ ಮಾಡಿದೆ. ಇದು ಎಲ್ಲ ಅವಧಿಯ ಸಾಲಕ್ಕೂ ಅನ್ವಯ ಆಗುತ್ತದೆ. ಹೀಗೆ ಎಂಸಿಎಲ್ ಆರ್ ಇಳಿಕೆ ಮಾಡಿರುವುದರಿಂದ ಸಾಲ ನೀಡುವ ದರವು ಈ ವರೆಗೆ ವಾರ್ಷಿಕ 7.40 ಪರ್ಸೆಂಟ್ ಇದ್ದದ್ದು 7.25 ಪರ್ಸೆಂಟ್ ಗೆ ಇಳಿಕೆಯಾಗುತ್ತದೆ.
ಮೇ 10, 2020ರಿಂದ ಇದು ಜಾರಿಗೆ ಬರುತ್ತದೆ. ಹೀಗೆ ಎಂಸಿಎಲ್ ಆರ್ ಅನ್ನು ಸತತವಾಗಿ ಹನ್ನೆರಡನೇ ಸಲ ಇಳಿಸಲಾಗುತ್ತಿದೆ ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಯಾರು ಎಂಸಿಎಲ್ ಆರ್ ಗೆ ಜೋಡಣೆಯಾಗುವಂತೆ ಸಾಲ ಪಡೆದಿರುತ್ತಾರೋ ಅಂಥ ಗ್ರಾಹಕರಿಗೆ ಪ್ರತಿ ಸಲ ಇಳಿಕೆ ಮಾಡಿದಾಗಲೂ ಇದರಿಂದ ಅನುಕೂಲ ಆಗುತ್ತದೆ.
ಠೇವಣಿ ಮೇಲಿನ ಬಡ್ಡಿ ದರದಲ್ಲೂ ಇಳಿಕೆ
ಸಾಲದ ಮೇಲಿನ ಬಡ್ಡಿ ದರ ಮಾತ್ರ ಅಲ್ಲ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಮೂರು ವರ್ಷದೊಳಗಿನ ಅವಧಿಯ ಠೇವಣಿ ಮೇಲಿನ ಬಡ್ಡಿ ದರವನ್ನೂ 20 bps ಇಳಿಕೆ ಮಾಡಿದೆ. ಇದು ಮೇ 12ನೇ ತಾರೀಕಿನಿಂದ ಜಾರಿಗೆ ಬರಲಿದೆ. ಬ್ಯಾಂಕ್ ಹಾಗೂ ಜನರ ಬಳಿ ನಗದು ಹರಿದಾಡಲಿ ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ.
ಹಿರಿಯ ನಾಗರಿಕರಿಗಾಗಿ ವಿಶೇಷ ಠೇವಣಿ ಯೋಜನೆ
ಇನ್ನು ಹಿರಿಯ ನಾಗರಿಕರಿಗಾಗಿ ಎಸ್ ಬಿಐ ವಿಶೇಷ ಠೇವಣಿ ಯೋಜನೆ ಪರಿಚಯಿಸಿದ್ದು, ಹೆಚ್ಚಿನ ಬಡ್ಡಿದರ ನೀಡುತ್ತಿದೆ. ಈ ಯೋಜನೆಗೆ "SBI Wecare Deposit" ಎಂದು ಹೆಸರು ನೀಡಲಾಗಿದೆ. ಸದ್ಯಕ್ಕೆ ಕುಸಿಯುತ್ತಿರುವ ಬಡ್ಡಿ ದರದ ಸಮಯದಲ್ಲಿ ಬ್ಯಾಂಕ್ ನ ಈ ಯೋಜನೆಯಿಂದ ಹಿರಿಯ ನಾಗರಿಕರ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 30, 2020ರ ತನಕ ಠೇವಣಿ ಸ್ಕೀಮ್
ಈ ಹೊಸ ಠೇವಣಿ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ 30 bps ಹೆಚ್ಚುವರಿ ಪ್ರೀಮಿಯಂ ಪಾವತಿಸಲಾಗುತ್ತದೆ. 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಯಾರು ಹಣವನ್ನು ಠೇವಣಿ ಮಾಡುತ್ತಾರೋ ಅಂಥವರಿಗೆ ಈ ಯೋಜನೆಯ ಲಾಭ ದೊರೆಯುತ್ತದೆ. ಇದು ಸೆಪ್ಟೆಂಬರ್ 30, 2020ರ ತನಕ ಜಾರಿಯಲ್ಲಿ ಇರುತ್ತದೆ.
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications