ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಗೆ ಜನವರಿ 21, 2021 ಐತಿಹಾಸಿಕ ದಿನ. ಏಕೆಂದರೆ, 50 ಸಾವಿರ ಪಾಯಿಂಟ್ ಗಳ ಗಡಿಯನ್ನು ದಾಟಿ ನಿಂತಿದೆ ಸೆನ್ಸೆಕ್ಸ್. ಬ್ಲ್ಯೂಚಿಪ್ ಕಂಪೆನಿಗಳನ್ನು ಒಳಗೊಂಡ ಬಿಎಸ್ ಇ ಸೂಚ್ಯಂಕದ ಅರಂಭ ಆದದ್ದು 1986ನೇ ಇಸವಿಯಲ್ಲಿ. ಬೇಸ್ ವರ್ಷ ಎಂದು 1978- 79 ಪರಿಗಣಿಸಿ, 100 ಎಂದು ಮೌಲ್ಯ ನೀಡಲಾಯಿತು.
ಈಗ ನಾಲ್ಕು ದಶಕ ಕಳೆದಿದೆ. ಸೂಚ್ಯಂಕ ಹೊಸ ಮೈಲುಗಲ್ಲನ್ನು ದಾಟಿದೆ. ಇದೀಗ ಮುಂದಿನ ಹಂತದ ಕಡೆಗೆ ನೋಡುವ ಸಮಯ. ಕೊರೊನಾ ಬಿಕ್ಕಟ್ಟಿನ ನಂತರ ಕಾಣಿಸಿಕೊಂಡ ಆರ್ಥಿಕ ಚೇತರಿಕೆಯ ನಿರೀಕ್ಷೆಯಲ್ಲಿ ಈಗಿನ ಓಟ ಸಾಗುತ್ತಿದೆ. ಅದರ ಜತೆಗೆ ಲಸಿಕೆ ಹಾಕುತ್ತಿರುವುದು ಸಕಾರಾತ್ಮಕ ವಿದ್ಯಮಾನ ಆಗಿದೆ.
ಯು.ಎಸ್. ನಲ್ಲಿ ಜೋ ಬೈಡನ್ ಅಧಿಕಾರ ಸ್ವೀಕರಿಸಿದ ಸುದ್ದಿ ಷೇರುಪೇಟೆಯ ಉತ್ಸಾಹ ಹೆಚ್ಚಿಸಿದೆ. ಕೊರೊನಾ ಬಿಕ್ಕಟ್ಟಿನಿಂದ ಉದ್ಭವಿಸಿರುವ ಆರ್ಥಿಕ ಸವಾಲು ಎದುರಿಸಲು ಜೋ ಬೈಡನ್ ದೊಡ್ಡ ಮೊತ್ತದ ಉತ್ತೇಜನ ಕ್ರಮ ಘೋಷಿಸುವ ನಿರೀಕ್ಷೆ ಇದೆ. ಭಾರತದ ವಿಚಾರಕ್ಕೆ ಬರುವುದಾದರೆ ಆರ್ಥಿಕ ಕ್ರಮಗಳು, ಆರ್ಥಿಕ ಚೇತರಿಕೆಗಾಗಿ ಖರ್ಚು ಹೆಚ್ಚಿಸುವುದು, ವಿದೇಶೀ ಸಾಂಸ್ಥಿಕ ಹೂಡಿಕೆದಾರರಿಂದ ಸ್ಥಿರವಾದ ಹೂಡಿಕೆ ಬರುತ್ತಿರುವುದು ಸಕಾರಾತ್ಮಕ ಸುದ್ದಿಯಾಗಿದೆ.

ಸೆನ್ಸೆಕ್ಸ್ ಮುಟ್ಟಿದ್ದಂಥ ಪ್ರಮುಖ ಮೈಲುಗಲ್ಲು ಹಾಗೂ ಅದರ ಪಯಣದ ವಿವರ ಹೀಗಿದೆ:
100- 1000 ಪಾಯಿಂಟ್. 1990ರ ಜುಲೈ 25
10,000 ಪಾಯಿಂಟ್ ಫೆಬ್ರವರಿ 7, 2006
20,000 ಪಾಯಿಂಟ್ 2007ರಲ್ಲಿ
30,000 ಪಾಯಿಂಟ್ 2017ರಲ್ಲಿ
40,000 ಪಾಯಿಂಟ್ 2019ರ ಜೂನ್ 3
50,000 ಪಾಯಿಂಟ್ ಆನಂತರದ 14 ತಿಂಗಳಲ್ಲಿ
ಈಚಿನ ಜಾಗತಿಕ ಮಾರಾಟದ ಒತ್ತಡವು 2020ರ ಮಾರ್ಚ್ ವೇಳೆ ಕೇವಲ 2 ತಿಂಗಳಲ್ಲಿ 15,000 ಪಾಯಿಂಟ್ ಕೊಚ್ಚಿಹೋಗುವಂತೆ ಮಾಡಿತು. ಅದನ್ನು ಕೂಡ ಮರೆಯುವಂತಿಲ್ಲ ಒಂದು ವೇಳೆ ಈಗಿನ ಟ್ರೆಂಡ್ ಮುಂದುವರಿದಲ್ಲಿ 4-5 ವರ್ಷದೊಳಗೆ 1,00,000 ಪಾಯಿಂಟ್ ಗೆ ಏರಿದರೂ ಅಚ್ಚರಿಯಿಲ್ಲ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications